ಹರಿತಲೇಖನಿ ದಿನದ ಚಿತ್ರ: ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನ

ಕುಳಾಯಿ ಎಂಬ ಹಳ್ಳಿಯು ಈಗಿನ ಚಿತ್ರಾಪುರ. ಇದು ಮಂಗಳೂರು ತಾಲ್ಲೂಕಿನಲ್ಲಿರುವ ಪುಣ್ಯಕ್ಷೇತ್ರವಾಗಿದೆ. ಇಲ್ಲಿ ತಾಯಿ ದುರ್ಗಾಪರಮೇಶ್ವರಿಯನ್ನು ಪೂಜಿಸುತ್ತಾರೆ. 13ನೇ ಶತಮಾನದಲ್ಲಿ ಮಧ್ಯಾಮಠದ ಪೇಶವಾದ ಪೀಠವನ್ನು ವಿಜಯತೀರ್ಥ ಸ್ವಾಮೀಜಿಯವರು ಅಲಂಕರಿಸಿ ಇಲ್ಲಿ ದುರ್ಗಾ ಪರಮೇಶ್ವರಿಯನ್ನು ಲಿಂಗದ ರೂಪದಲ್ಲಿ ಪೂಜಿಸಿದರು. ಈ ದೇವಿಯು ಜಲದುರ್ಗೆಯ ಪುರ್ನಜನ್ಮ ಎಂಬ ನಂಬಿಕೆ ಇದೆ. ಈ ದೇವಿಯು ಅತಿ ಶಕ್ತಿಯುಳ್ಳ ದೇವತೆಯಾಗಿದ್ದಾಳೆ. 

ಪುರಾಣಗಳ ಪ್ರಕಾರ ಸಪ್ತದುರ್ಗಾ ಅಕ್ಕತಂಗಿಯರು ಈ ಜಾಗಗಳಲ್ಲಿ ಶಕ್ತಿದೇವತೆಯಾಗಿ ನೆಲೆಸಿದ್ದಾರೆ. ಅವುಗಳೆಂದರೆ ಚಿತ್ರಾಪುರ, ಸಸಿಹಿತ್ಲು, ಪೊಳಲಿ, ಕಟೀಲು ಮುಂಡ್ಯುರು, ಕುಂಜಾರು ಮತ್ತು ಬಪ್ಪನಾಡು ಸ್ಥಳಗಳಲ್ಲಿ ದಾರಿಗಾಸುರನನ್ನು ಕೊಂದ ನಂತರ ನೆಲೆಸಿದರು. ಈ ಸ್ಥಳಗಳು “ಶಕ್ತಿಕೇಂದ್ರ” ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿದೆ. 

ಈ ಸ್ಥಳಕ್ಕೆ ಚಿತ್ರಾಪುರ ಎಂದು ಹೆಸರು ಬರಲು ಕಾರಣ ಸಪ್ತ ದುರ್ಗೆಯರಲ್ಲಿ ಅತಿಚಿಕ್ಕವಳಾದ ಜಲದುರ್ಗ ರಾಕ್ಷಸರಾದ ಚಿತ್ರಾಸುರ ಮತ್ತು ವಿಚಿತ್ರ ಸುರರನ್ನು ಕೊಂದ ಮೇಲೆ ಬಂದಿತು. ಇಬ್ಬರು ರಾಕ್ಷಸರುಗಳಾದ ಚಿತ್ರಾಸುರ ಮತ್ತು ವಿಚಿತ್ರಸುರರು ತಮ್ಮ ಗುರುಗಳನ್ನು ಕೊಂದ ಜಲದುರ್ಗೆಯ ಮೇ ಲೆ ಸೇಡು ತೀರಿಸಿಕೊಳ್ಳುವ ಹಂಬಲವಿತ್ತು.

ಗಂಧರ್ವನು ಚಿತ್ರಾಕ್ಷರನನ್ನು ತಮ್ಮ ಸುಂದರವಾದ ಹೆಂಡತಿಯರೊಂದಿಗೆ ಹೋದನು. ಆಗ ಈ ರಾಕ್ಷಸರು ಅವನ ಹೆಂಡತಿಯರ ಮೇಲೆ ಕಣ್ಣು ಬಿತ್ತು. ಅವರುಗಳನ್ನು ಏಳೆದುಕೊಂಡು ಹೋದರು. ಗಂಧರ್ವನು ತನ್ನ ಕೈಯಲ್ಲಾಗದೆ ಶ್ರೀ ಹರಿಯನ್ನು ಮೊರೆ ಹೊಕ್ಕನು. ಆಗ ಶ್ರೀ ಹರಿಯು ಜಲದುರ್ಗೆಯನ್ನು ಈ ಇಬ್ಬರು ರಾಕ್ಷಸರನ್ನು ಕೊಲ್ಲಲು ಕಳುಹಿಸಿದನು. ಇಲ್ಲಿ ಮಹಾಕಾಳಿಯು ಉದ್ಭವಲಿಂಗವಾಗಿ ನೆಲೆಸಿದಳು. 

ಇತಿಹಾಸ ಪ್ರಕಾರ ಇಬ್ಬರು ಹರಿಜನ ದಂಪತಿಗಳಾದ ಕಾಂತು ಮತ್ತು ಕಲಾಡಿ ಎಂಬುವವರಿದ್ದರು. ಅವರು ತಮ್ಮ ಜೀವನವನ್ನು ಮೀನುಗಾರಿಕೆ ಮತ್ತು ಬಿದಿರು ಕೆಲಸದಿಂದ ಸಾಗಿಸುತ್ತಿದ್ದರು. ಒಂದು ಸಾರಿ ಕಲಾಡಿಯು ತನ್ನ ಚಾಕುವನ್ನು ಚೂಪುಮಾಡಲು ಒಂದು ಬಂಡೆಗೆ ತಿಕ್ಕಿದಳು. ಆದರೆ ಆ ಬಂಡೆಯಿಂದ ರಕ್ತ ಹೊರ ಹೊಮ್ಮಿತು. ಆಶ್ಚರ್ಯಕರವಾಗಿ ನಡೆದ ಈ ಘಟನೆ ವಿಚಿತ್ರ ಸಂಗತಿ ಎಂದು ಕರೆದರು. ಅವಳು ಭಯದಿಂದ ಅಲ್ಲಿಯೇ ಸತ್ತಳು. ಇದರಿಂದ ಈ ಕಲ್ಲು ಉದ್ಭವಲಿಂಗ (ದೇವಿ ದುರ್ಗೆಯು) ಲಿಂಗದ ರೂಪದಲ್ಲಿ ಇದ್ದಾಳೆ ಎಂಬ ನಂಬಿಕೆ. ಈ ವಿಚಿತ್ರ ಘಟನೆಯಿಂದ ಚಿತ್ರಾಪುರ ಎಂಬ ಹೆಸರು ಬಂದಿತು. 

ಆಕಸ್ಮಿಕವಾಗಿ ಮದ್ವಾಚರ್ಯರ ದ್ವೈತ ಸಿದ್ಧಾಂತವನ್ನು ಅನುಸರಿಸುವ ಮದ್ವಾ ಪೀಠದ ಸ್ವಾಮೀಜಿಗಳಾದ ವಿಜಯ ತೀರ್ಥ ಸ್ವಾಮೀಜಿಗಳು ಪ್ರಯಾಣಿಸುವಾಗ ಜಲದುರ್ಗೆಯು ಇರುವ ಸ್ಥಳದ ಮುಖಾಂತರ ಹಾದು ಹೋಗುತ್ತಾರೆ. 

ಜಲದುರ್ಗೆಯ ವಿಷಯವು ಸ್ವಾಮೀಜಿಗಳ ಕನಸಿನಲ್ಲಿ ತಿಳಿದು ಜಲದುರ್ಗೆಯು ಸ್ವಾಮಿಜಿಯವರಿಗೆ ದೇವಸ್ಥಾನ ಸ್ಥಾಪನೆಗೆ ಆಗ್ರಹಿಸುತ್ತಾಳೆ. ದುರ್ಗೆಯು ಹರಿಜನ ಮಹಿಳೆಯಾದ ಕಲ್ಡಿಗೂ ಕೂಡ ದೇವಸ್ಥಾನ ನಿರ್ಮಿಸಲು ಆಗ್ರಹಿಸುತ್ತಾಳೆ. ಮರುದಿನ ಸ್ವಾಮೀಜಿಯವರು ಆ ಸ್ಥಳವನ್ನು ಹುಡುಕುತ್ತ ಹೊರಡಲು ತುಂಬಿಹರಿಯುವ ನದಿಯನ್ನು ದಾಟಬೇಕಾಯಿತು. ಅದಕ್ಕಾಗಿ ಅಲ್ಲಿಯ ದೋಣಿಯು ಅಂಬಿಗನ ಸಹಾಯ ಕೇಳಲು ಆತನು ಸಹಾಯ ಮಾಡಲು ತಿರಸ್ಕರಿಸುತ್ತಾನೆ. 

ನಂತರ ಸ್ವಾಮೀಜಿಯು ತನ್ನ ದೈವ ಶಕ್ತಿಯಿಂದ ನದಿಯನ್ನು ದಾಟಿ ಅಂಬಿಗನಿಗೆ ಹುಳುವಾಗಲೆಂದು ಶಾಪ ನೀಡುತ್ತಾನೆ. ಅಂಬಿಗನಿಗೆ ತನ್ನ ತಪ್ಪಿನ ಅರಿವಾಗಿ ಸ್ವಾಮೀಜಿಯಲ್ಲಿ ಕ್ಷಮೆಯಾಚಿಸುತ್ತಾನೆ ಮತ್ತು ಕರುಣೆ ತೋರಲು ಕೇಳಿ ಕೊಳ್ಳುತ್ತಾನೆ. ಸ್ವಾಮೀಜಿಗೆ ಆತನ ಮೇಲೆ ಕರುಣೆಯಿಟ್ಟು ನೀನು ದೇವಸ್ಥಾನವನ್ನು ದುರ್ಗೆಯ ಇಚ್ಛೆಯಂತೆ ಹುಳುಗಳ ದೇವಸ್ಥಾನವಾದ ಪುಲುವಿ ನಿಲಯ ಸ್ಥಾಪಿಸಿದಲ್ಲಿ ಶಾಪ ವಿಮೋಚನೆ ಆಗಲಿ ಎಂದು ಆಗ್ರಹಿಸಿತ್ತಾರೆ. ಆದ್ದರಿಂದ ಈ ದೇವಸ್ಥಾನವನ್ನು ಪುಲುವಿನಾಲಯ ಎಂದು ಕರೆಯುತ್ತಾರೆ. 

ಸ್ವಾಮೀಜಿಯವರು ದುರ್ಗೆ ನೆಲೆಸಿರುವ ಸ್ಥಳವನ್ನು ತ್ಕಂಡು ಪೂಜೆಗಳು, ಆರತಿ, ಸೇವೆಗಳನ್ನು ಸ್ಥಳಿಯರ ಸಮಕ್ಷಮದಲ್ಲಿ ನೆರೆವೇರಿಸಿದರು. ಸ್ವಾಮೀಜಿಯವರು ಸ್ಥಳೀಯ ಪಾಳೆಗಾರನು ದೇವಸ್ಥಾನದ ನಿರ್ಮಾಣಕ್ಕೆ ಸಹಕರಿಸಲು ನಿರಾಕರಿಸಿದ್ದರಿಂದ ವಿಜಯನಗರದ ರಾಜನಾದ ವೀರ ಪ್ರಧಿನ ಹರಿಹರರಾಯನ ಸಹಕಾರವನ್ನು ಕೋರಿದರು. ಅಂತೆಯೆ ಹರಿಹರರಾಯನು ಮಂಗಳಾಪುರಕ್ಕೆ ಆಗಮಿಸಿ ಸ್ಥಳೀಯ ಪಾಳೆಗಾರರಿಗೆ ದೇವಸ್ಥಾನದ ನಿರ್ಮಾಣಕ್ಕೆ ಸಹಾಯ ಮಾಡಲು ಆದೇಶಿಸಿದನು. ಅದರಂತೆ ಸ್ವಾಮೀಜಿಯ ಮಾರ್ಗದರ್ಶನದಲ್ಲಿ ಸ್ಥಳೀಯ ಪಾಳೆಗಾರನ ಸಹಕಾರದೊಂದಿಗೆ ದೇವಸ್ಥಾನವನ್ನು ನಿರ್ಮಿಸಿದರು.

ವಿಜಯತೀರ್ಥ ಸ್ವಾಮೀಜಿಯವರು ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗು ಇತರೆ ಪೂಜಾ ಕಾರ್ಯಗಳನ್ನು ನೆರವೇರಿಸಿ ಮಠವನ್ನು ಸ್ಥಾಪಿಸಿ ಅದಕ್ಕೆ ಚಿತ್ರಾಪುರ ಮಠ ಎಂದು ಕರೆದರು. ತನ್ನ ಶಿಷ್ಯರೊಬ್ಬರನ್ನು ಆ ಮಠದ ಸ್ವಾಮೀಜಿಯನ್ನಾಗಿ ನೇಮಿಸಿ ಕೃಷ್ಣ ವಿಗ್ರಹವನ್ನು ನೀಡಿ ಅದಕ್ಕೆ ಕಲಿಯಮರ್ದನ ಕೃಷ್ಣ ಎಂದು ಕರೆಯುತ್ತಾರೆ. 

ದೇವಸ್ಥಾನದ ಶಿಲಾಶಾಸನವು ಸ್ಥಳೀಯ ಪಾಳೆಗಾರರು ದೇವಸ್ಥಾನಕ್ಕೆ ನೀಡಿರುವ ಕೊಡುಗೆಗಳನ್ನು ವಿವರಿಸುತ್ತದೆ. ಪಾಳೆಗಾರನಾದ 1310 ರಲ್ಲಿ ದೇವಸ್ಥಾನಕ್ಕೆ ಮತ್ತು ಮಕ್ಕಳಾದ ಬಚ್ಚಪ್ಪಸೇನಾಬೋವನು 1326 ರಲ್ಲಿ ದೇವಸ್ಥಾನಕ್ಕೆ ಕೊಡುಗೆಯನ್ನು ನೀಡಿದ್ದು ದೇವಸ್ಥಾನವು ಆಗಿನಿಂದಲೂ ಇದೆಯೆಂಬುದಕ್ಕೆ ಶಿಲಾಶಾಸನವು ಸಾಕ್ಷಿಯಾಗಿದೆ.

ಸಂಗ್ರಹ ವರದಿ: ಗಣೇಶ್. ಎಸ್., ದೊಡ್ಡಬಳ್ಳಾಪುರ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!