ನವದೆಹಲಿ, (ಜ.08); ಭಾರತೀಯರು ಮತ್ತು ಹಿಂದೂ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಾಲ್ವಿನ್ಸ್ ಸರ್ಕಾರ ಸಚಿವರನ್ನು ವಜಾಗೊಳಿಸಿದ್ದು ಸುಳ್ಳು ಸುದ್ದಿ ಎಂಬ ಸಂಗತಿ ಈಗ ಹೊರಬಿದ್ದಿದೆ.
ಈ ಕುರಿತು ಅಧಿಕೃತ ಸ್ಪಷ್ಟನೆ ನೀಡಿರುವ ಮಾಲಿಪ್ಪ ಸರ್ಕಾರದ ಸಚಿವ ಹಸ್ಸನ್ ಜೆಹಾನ್ ನಾವು ಯಾವುದೇ ಮಂತ್ರಿಗಳನ್ನು ವಜಾ ಮಾಡಿಲ್ಲ ಇದೊಂದು ಸುಳ್ಳು ಎಂದು ಸ್ಪಷ್ಟಿಕರಣ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ನೀಡಿದ್ದ ಭೇಟಿಯ ಬಳಿಕ ಆ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದ ಮಾಲ್ಕಿನ್ಸ್ ಸಚಿವರು, ಭಾರತ ಎಷ್ಟೇ ಹೊರಾಡಿದರೂ ಪ್ರವಾಸೋದ್ಯಮದಲ್ಲಿ ಮಾಲ್ಡಿವ್ನ್ ಗೆ ಸ್ಪರ್ಧೆ ನೀಡಲು ಸಾಧ್ಯವಿಲ್ಲ ಭಾರತದ ಕೆಟ್ಟ ವಾಸನೆ ಹಾಗೂ ಸ್ವಚ್ಛತೆಯಿಲ್ಲದ ಸ್ಥಳಗಳು ಪ್ರವಾಸಿಗರನ್ನು ದೂರವಿಡುತ್ತದೆ ಎಂದು ಟೀಕಿಸಿದ್ದರು.
ಈ ಬಗ್ಗೆ ಭಾರತದಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಚಿವರಾದ ಮರಿಯಮ್ ಶಿಯಾನಾ, ಮಾಲ್ಟಾ ಮತ್ತು ಹಸ್ಸನ್ ಜಿಹಾನ್ ಅವರನ್ನು ವಜಾಗೊಳಿಸಲಾಗಿದೆ ಎಂಬ ಸುದ್ದಿ ಹೊರಬಿದ್ದಿತ್ತು. ಆದರೆ ಈ ಸುದ್ದಿಗೆ ಸ್ಪಷ್ಟಿಕರಣ ನೀಡಿರುವ ಹಸ್ಸನ್ ಜಿಹಾನ್ ನಾವು ಯಾರು ವಜಾಗೊಂಡಿಲ್ಲ. ಈ ಸುದ್ದಿ ಸುಳ್ಳು ಎಂದಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….