ಹರಿತಲೇಖನಿ ದಿನಕ್ಕೊಂದು ಕಥೆ: ಗೂಢಾಚಾರನ ಸಂಚು

ಚಂದ್ರಪುರ ಎಂಬ ರಾಜ್ಯವನ್ನು ಧರ್ಮಪಾಲನೆಂಬ ರಾಜನು ಆಳುತ್ತಿದ್ದ. ಒಂದು ಸಲ ರಾಜಸಭೆಗೆ ಸಂಗೀತ ವಿದ್ವಾಂಸ ಬಂದ. ಅವನ ಹೆಸರು ಶೌಚಮಿತ್ರ. ತಾನು ವಿವಿಧ ಸಂಗೀತವನ್ನು ನುಡಿಸುವುದರೊಂದಿಗೆ ಸಂಗೀತ ವಾದ್ಯಗಳನ್ನು ಸಂಶೋಧಿಸಿದ್ದೇನೆ, ಇದೀಗ ಹೊಸದಾಗಿ ಆವಿಷ್ಕರಿಸಿರುವ ವಾದ್ಯವನ್ನು ಮಹಾರಾಜರೇ ಮೊದಲು ನುಡಿಸಬೇಕೆಂಬುದು ನನ್ನ ಆಸೆ.’ ಎಂದು ಹೇಳಿ ಆ ವಾದ್ಯವನ್ನು ಮಹಾರಾಜರಿಗೆ ನೀಡಿದ.

ಕಲೆಗೆ ಬೆಲೆ ನೀಡುತ್ತಿದ್ದ ರಾಜ ಸಂತಸಗೊಂಡು ಲಗುಬಗೆಯಿಂದ ಸಿಂಹಾಸನದಿಂದ ಇಳಿದುಬಂದು ಕಲಾವಿದನ ಸಂಗೀತದ ವಾದ್ಯವನ್ನು ಪಡೆದು ಆತುರದಿಂದ ಅದನ್ನು ತನ್ನ ಬಾಯಿಗೆ ಇಟ್ಟು ನುಡಿಸಲು ಮುಂದಾದ. ಅಷ್ಟರಲ್ಲಿ… ಮಂತ್ರಿ ಸುಮಂತಿ ಮಹಾರಾಜನನ್ನು ಆ ಸಂಗೀತದ ವಾದ್ಯವನ್ನು ನುಡಿಸದಂತೆ ತಡೆದ. ಮಹಾರಾಜನು ಆಕಸ್ಮಿಕ ಘಟನೆಯಿಂದ ಅವಮಾನಿತರಾಗಿ ಮಂತ್ರಿಯ ಮೇಲೆ ರೇಗಿದ.

ಮಂತ್ರಿಯು, “ಪ್ರಭುಗಳು ದಯವಿಟ್ಟು ಮನ್ನಿಸಬೇಕು. ನನಗೆ ಈ ಹೊಸ ಬಗೆಯ ಸಂಗೀತದ ಸಾಧನದ ಮೇಲೆ ಅನುಮಾನ ಮೂಡಿದೆ’ ಎಂದ. ಆ ಹೊಸ ಸಂಗೀತ ವಾದ್ಯದ ತುದಿಯಲ್ಲಿ ಬಿಳಿಯ ಪಧಾರ್ಥವನ್ನು ಲೇಪಿಸಲಾಗಿತ್ತು. ಆದರೆ ಅವನ ಸಂಗ್ರಹದಲ್ಲಿದ್ದ ಇತರೆ ಸಂಗೀತದ ವಾದ್ಯಗಳಿಗೆ ಯಾವ ಬಿಳಿಯ ಪದಾರ್ಥದ ಲೇಪನವಿರಲಿಲ್ಲ! ಅವುಗಳ ತುಲನೆ ಮಾಡುತ್ತಿದ್ದ ಮಂತ್ರಿಯನ್ನು ಕಂಡು ಶೌಚಮಿತ್ರನು ಗಡಗಡ ನಡುಗಿದ.

ಮಂತ್ರಿ ಆ ಸಂಗೀತದ ವಾದ್ಯವನ್ನು ಪರೀಕ್ಷಿಸಲು ರಾಜವೈದ್ಯರಿಗೆ ನೀಡಿದ. ಅದನ್ನು ಪರೀಕ್ಷಿಸಿದ ರಾಜವೈದ್ಯರು ಮಹಾರಾಜರತ್ತ ಮುಖ ಮಾಡಿ, “ಪ್ರಭುಗಳೇ ಸಂಗೀತ ವಾದ್ಯದ ತುದಿಯಲ್ಲಿ ಲೇಪಿಸಿದ್ದ ಬಿಳಿಯ ಪದಾರ್ಥವು ವಿಷದಿಂದ ಕೂಡಿದೆ. ಅದನ್ನು ಬಾಯಿಯಿಂದ ನುಡಿಸಿದವರು ಕೆಲವೇ ನಿಮಿಷಗಳಲ್ಲಿ ಅಸುನೀಗುತ್ತಾರೆ!’ ಎಂದುಬಿಟ್ಟರು.

ರಾಜ ಆ ಕಲಾವಿದನನ್ನು ಬಂಧಿಸಲು ಆಜ್ಞಾಪಿಸಿದ. ಅವನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ನಿಜಸಂಗತಿ ಬಯಲಾಯಿತು. ಅವನು ಶತ್ರುರಾಜ್ಯದ ಗೂಢಾಚಾರನೆಂದು ತಿಳಿದುಬಂದಿತು. ಸಮಯಪ್ರಜ್ಞೆಯಿಂದ ತನ್ನ ಜೀವ ಉಳಿಸಿದ ಮಂತ್ರಿಯನ್ನು ರಾಜ ಆಲಂಗಿಸಿಕೊಂಡನು.

ಕೃಪೆ: ರಾಜಕುಮಾರ ಭೀ. ವಗ್ಯಾನವರ

ರಾಜಕೀಯ

ಮೇ 5ರಂದು ಅದಾಲತ್.. ಗ್ರಾ.ಪಂ ಸದಸ್ಯ ಸ್ಥಾನಗಳ ಕರಡು ಪ್ರಕಟಣೆಗೆ ಆಕ್ಷೇಪಣೆ ಸಲ್ಲಿಸುವ ಅವಧಿ ವಿಸ್ತರಣೆ

ಮೇ 5ರಂದು ಅದಾಲತ್.. ಗ್ರಾ.ಪಂ ಸದಸ್ಯ ಸ್ಥಾನಗಳ ಕರಡು ಪ್ರಕಟಣೆಗೆ ಆಕ್ಷೇಪಣೆ ಸಲ್ಲಿಸುವ

ಕರ್ನಾಟಕ ಪಂಚಾಯತ್‌ರಾಜ್ ಸೀಮಾ ನಿರ್ಣಯ ಆಯೋಗ ಏಪ್ರಿಲ್ 18ರಂದು ಹೊರಡಿಸಿರುವ ರಾಜ್ಯದ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯ (Grama Panchayat member) ಸ್ಥಾನಗಳ ಕರಡು ಪ್ರಕಟಣೆಗೆ ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು ಮೇ 2ರ ಸಂಜೆ

[ccc_my_favorite_select_button post_id="121469"]
ಮಧ್ಯವರ್ತಿಗಳನ್ನು ದೂರವಿಟ್ಟು, ಜನರ ಸಮಸ್ಯೆಗಳನ್ನು ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಮಧ್ಯವರ್ತಿಗಳನ್ನು ದೂರವಿಟ್ಟು, ಜನರ ಸಮಸ್ಯೆಗಳನ್ನು ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಮಧ್ಯವರ್ತಿಗಳು (Brokers) ಎಲ್ಲೆಡೆ ಇರುತ್ತಾರೆ ಆದರೆ ಅವರನ್ನು ಕಚೇರಿಯೊಳಗೆ ಬಿಟ್ಟುಕೊಳ್ಳದೇ ಹೊರಗೆ ಕಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ( Cm Siddaramaiah) ಅಧಿಕಾರಿಗಳಿಗೆ ಸೂಚಿಸಿದರು

[ccc_my_favorite_select_button post_id="121435"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರ: ವಕೀಲರ ಭವನದಲ್ಲಿ ವಾರ್ಷಿಕ ಕ್ರೀಡಾಕೂಟದ ಪ್ರಶಸ್ತಿ ವಿತರಣೆ..

ದೊಡ್ಡಬಳ್ಳಾಪುರ: ವಕೀಲರ ಭವನದಲ್ಲಿ ವಾರ್ಷಿಕ ಕ್ರೀಡಾಕೂಟದ ಪ್ರಶಸ್ತಿ ವಿತರಣೆ..

ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘ ಹಾಗೂ ನ್ಯಾಯಾಂಗ ಇಲಾಖೆಯಿಂದ ವಾರ್ಷಿಕ ಕ್ರೀಡಾಕೂಟ 2026-27ರ (Annual sports event) ಪ್ರಶಸ್ತಿ ವಿತರಣೆ ಕಾರ್ಯಕ್ರಮ (Awards ceremony) ನಗರದ ವಕೀಲರ ಭವನದಲ್ಲಿ ಆಯೋಜಿಸಲಾಗಿತ್ತು.

[ccc_my_favorite_select_button post_id="121459"]
ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ಬಿಸಿಲ ಬೇಗೆಯಿಂದ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಜನತೆ ತತ್ತರಿಸುತ್ತಿರುವ ನಡುವೆಯೇ ಇಂದು ಮಧ್ಯಾಹ್ನದಿಂದ ತಾಲೂಕಿನ ಹಲವೆಡೆ ಮಳೆಯ ಸಿಂಚನವಾಗಿದೆ.

[ccc_my_favorite_select_button post_id="121471"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]