ಮಂಗಳೂರು: ಹಿಂದೂ ಪರ ಸಂಘಟನೆ ಮುಖಂಡ ಸತ್ಯಜಿತ್ ಸುರತ್ಕಲ್ ಇವರ ತಾಯಿ ಭಾರತಿ ವಾಸುದೇವ ಅವರು ಇಂದು ಬೆಳಿಗ್ಗೆ ನಿಧನಹೊಂದಿದ್ದಾರೆ.
ಮೃತರು ಪತ್ನಿ ವಾಸುದೇವ, ಪುತ್ರ ಸತ್ಯಜಿತ್ ಸುರತ್ಕಲ್ ಹಾಗೂ ಸಹೋದರ, ಸಹೋದರಿಯನ್ನು ಅಗಲಿದ್ದಾರೆ.
ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ನೆರವೇರಿಸಲಾಗಿದೆ.
ಸತ್ಯಜಿತ್ ಸುರತ್ಕಲ್ ಅವರ ತಾಯಿ ಅಗಲಿಕೆಗೆ ಹಿಂಜಾವೇ ಕರ್ನಾಟಕ ದಕ್ಷಿಣ ಪ್ರಾಂತ್ಯ ಕಾರ್ಯಕಾರಣಿ ಸದಸ್ಯ ದೊಡ್ಡತುಮಕೂರು ಆನಂದ್ ಹಾಗೂ ಹಿಂದೂ ಪರ ಸಂಘಟನೆ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

