ಬೆಂಗಳೂರು: ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ವೀರಭದ್ರ ನಗರದ ಬಸ್ನಿಲ್ದಾಣ ಬಳಿ ಪ್ರತಿಷ್ಠಾಪಿಸಲಾಗಿದ್ದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ (shivakumara swamiji) ಅವರ ಪುತ್ಥಳಿಯನ್ನು ವಿರೂಪಗೊಳಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬ್ಯಾಡರಹಳ್ಳಿಯ ನಿವಾಸಿ ಶಿವ ಕುಮಾರ್ ಅಲಿಯಾಸ್ ರಾಜ್ ವಿಷ್ಣು (34 ವರ್ಷ) ಬಂಧಿತ ಆರೋಪಿ.
ಜಯ ಜರ್ನಾಟಕ ಜನಪರ ವೇದಿಕೆ ಸಂಘಟನೆಯು ಐದು ವರ್ಷಗಳ ಹಿಂದೆ ವೀರಭದ್ರನಗರ ಬಸ್ ನಿಲ್ದಾಣ ಬಳಿ ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿಯನ್ನು ಅನಾವರಣಗೊಳಿಸಿತ್ತು. ಪುತ್ಥಳಿ ನಿರ್ವಹಣೆಯನ್ನು ಸಂಘಟನೆ ಮಾಡುತಿತ್ತು.
ಕಳೆದ ನ.30 ರಂದು ದ್ವಿಚಕ್ರವಾಹನ ದಲ್ಲಿ ಅಪರಿತ ವ್ಯಕ್ತಿ ಬಂದು ಪುತ್ಥಳಿ ವಿರೂಪಗೊಳಿಸಿದ್ದ. ಈ ಸಂಬಂಧ ಸಂಘಟನೆ ಅಧ್ಯಕ್ಷ ಪರಮೇಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.