Astrology: Likely to be a memorable day

Astrology: ಜ.27. ದಿನ ಭವಿಷ್ಯ: ಈ ರಾಶಿಯವರಿಂದು ವಾಹನ ಚಾಲನೆಯ ವೇಳೆ ನಿಧಾನವಾಗಿ ಚಲಿಸಿ

ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಕೃಷ್ಣ ಪಕ್ಷದ ತ್ರಯೋದಶಿ ಜನವರಿ.27.2025 ವಿಶೇಷವಾಗಿ ಬೆಳಗ್ಗೆ ಸೂರ್ಯನನ್ನು ಸ್ಮರಣೆ ಮಾಡಿ ಕೆಳಗಿನ ಶ್ಲೋಕವನ್ನು ನಿಧಾನವಾಗಿ ಅರ್ಥ ಸಹಿತ ಅಭ್ಯಾಸ ಮಾಡಿ ಅತ್ಯಂತ ಶುಭವಾಗುತ್ತದೆ.. Astrology

ಶುಭಾಶುಭಪ್ರವಿಚಯಕರ್ಮಸಾಕ್ಷಿಣೇ
ಸಹಸ್ರ ಸಂದೀಧಿತಯೇ ನಮೋ ನಮಃ |
ಪ್ರಶಸ್ತಸಪ್ತಾಶ್ವಯುತಾಂತಪಕ್ಷಿಣೇ
ಧ್ರುವೈಕರಶ್ಮಿಗ್ರಥಿತಾಯ ತೇ ನಮಃ ॥
(ಸಾಂಬಪುರಾಣ)

ದೇವದೇವನಾದ ಸೂರ್ಯನೆ, ಶುಭಾಶುಭವಿಭಾಗರೂಪವಾದ ಪುಣ್ಯಪಾಪ ಕರ್ಮಗಳಿಗೆ ಸಾಕ್ಷಿಯಾಗಿರುವವನೂ, ಸಹಸ್ರಕಿರಣಗಳುಳ್ಳವನೂ ಆದ ನಿನಗೆ ನಮಸ್ಕಾರ.

ಶ್ರೇಷ್ಠವಾದ ಏಳು ಕುದುರೆಗಳಿಂದ ಕೂಡಿದವನೂ, ಎಲ್ಲಾ ಪ್ರಾಣಿಗಳ ಅಂತಃಕರಣದಲ್ಲಿಯೂ ಪಕ್ಷಿಯಂತೆ ಅಡಗಿರುವವನೂ ಮತ್ತೂ ಶಾಶ್ವತವಾದ ಕಿರಣಗಳಿಂದ ಕೂಡಿದವನೂ ಆದ ನಿನಗೆ ನಮಸ್ಕಾರ.

ಸಂಜೆ 5:00ಯಿಂದ 8 ಗಂಟೆಯವರೆಗೆ ಪ್ರದೋಷಕಾಲದಲ್ಲಿ ಶಿವನ ಪೂಜೆಯನ್ನು ಮಾಡಿದರೆ ಸಕಲ ಸೌಭಾಗ್ಯಗಳು ಉಂಟಾಗುತ್ತವೆ.

ಮೇಷ ರಾಶಿ: ಅಸಾಮಾನ್ಯ ಬೆಳವಣಿಗೆ, ಎಲ್ಲರಿಗೂ ಸಹ ಭಗವಂತನ ಅನುಗ್ರಹ, ಜೊತೆಗೆ ಧನಾಗಮನ ವಿದ್ಯೆಯಲ್ಲಿ ಅನುಕೂಲ, ಅಧಿಕ ಸಾರ್ಥಕದ ಖುಷಿ, ಚಿಂತೆಯಿಂದ ದೂರ, ಶುಭ ಫಲಗಳು ಉಂಟಾಗುತ್ತವೆ. (ಪರಿಹಾರಕ್ಕಾಗಿ ಕೃಷ್ಣನ ನಾಮಸ್ಮರಣೆಯನ್ನು ಮಾಡಿ)

ವೃಷಭ ರಾಶಿ: ಚಿಂತೆಯಿಂದ ಸ್ವಲ್ಪ ನಿವೃತ್ತಿ, ಮನಸ್ಸಿನ ಕಿರಿಕಿರಿ, ದೂರಾಸೆಯಿಂದ ಸಮಸ್ಯೆ, ಅಧಿಕ ತಿರುಗಾಟ, ವಾಹನ ಚಾಲನೆಯ ವೇಳೆ ನಿಧಾನವಾಗಿ ಚಲಿಸಿ, ಚಿಕ್ಕಪುಟ್ಟ ಆಸೆಗಳಿಗೆ ಜಾಸ್ತಿ ಕಿವಿಗೊಡಬೇಡಿ. (ಪರಿಹಾರಕ್ಕಾಗಿ ಶಿವನ ನಾಮಸ್ಮರಣೆಯನ್ನು ಮಾಡಿ)

ಮಿಥುನ ರಾಶಿ: ಹಣದ ಅಪವ್ಯಯ ಮಾಡಬೇಡಿ, ಚಿಂತೆಯಿಂದ ಸ್ವಲ್ಪ ವಿರಮಿಸಿ ಹುಷಾರಾಗಿ, ಧನವನ್ನು ಉಳಿಸಿಕೊಳ್ಳಿ, ಭಗವಂತನ ಮೇಲೆ ಕೂರಿಸಿಕೊಳ್ಳುವುದು ಕಮ್ಮಿ ಮಾಡಿ, ಎಲ್ಲವೂ ನಮ್ಮ ಕೆಲಸ ಕಾರ್ಯಗಳನ್ನು ಅವಲಂಬಿಸಿ, ಅನಿಷ್ಟಗಳು ಬರುತ್ತವೆ ಎಂಬುದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳಿ. (ಪರಿಹಾರಕ್ಕಾಗಿ ನರಸಿಂಹನನ್ನು ಪ್ರಾರ್ಥನೆ ಮಾಡಿ)

ಕಟಕ ರಾಶಿ: ಒಳ್ಳೆಯದಾಗಿದೆ ಚಿಂತೆ ಬೇಡ, ಈಗ ಆಗಿರುವುದು ನಿಮ್ಮ ಮುಂದಿನ ಸುಖಕ್ಕಾಗಿ. ಆದರೆ ಸ್ವಲ್ಪ ಮನಸ್ಸಿಗೆ ದ್ವಂದ್ವ ಅವಸ್ಥೆ ನಿಧಾನವಾಗಿ ಹೊರ ಬರಬಹುದು, ಸಮಸ್ಯೆ ಇಲ್ಲ. ವಿದ್ಯಾರ್ಥಿಗಳಿಗೆ ಅನುಕೂಲ, ಆಯಸ್ಸು ವೃದ್ಧಿ ಭಯ ನಿವಾರಣೆ. (ಪರಿಹಾರಕ್ಕಾಗಿ ಸೂರ್ಯನಾರಾಯಣನನ್ನು ಸ್ಮರಣೆ ಮಾಡಿ)

ಸಿಂಹ ರಾಶಿ: ಇನ್ನೊಬ್ಬರ ಮಾತುಗಳನ್ನು ಕೇಳುವಾಗ ಎಚ್ಚರಿಕೆ ಇರಲಿ. ನಿಮ್ಮ ಸ್ವಂತಿಕೆ ಸ್ವಲ್ಪ ಕೆಲಸ ಮಾಡಿ, ಬುದ್ಧಿಯನ್ನು ಚುರುಕು ಮಾಡಿಕೊಳ್ಳಬೇಕು. ಅತಿಯಾಗಿ ವಿಶ್ವಾಸ ಇಡಬೇಡಿ ಇದರಿಂದ ತೊಂದರೆಯಾಗುತ್ತದೆ. ಜೀವನವನ್ನು ಸಾರ್ಥಕ ಮಾಡಿಕೊಳ್ಳಿ. (ಪರಿಹಾರಕ್ಕಾಗಿ ಮಹಾಗಣಪತಿಯ ದ್ವಾದಶ ನಾಮ ಸ್ತೋತ್ರವನ್ನು ಪಾರಾಯಣ ಮಾಡಿ)

ಕನ್ಯಾ ರಾಶಿ: ಜಾಗರೂಕತೆಯಿಂದ ಧೈರ್ಯವಾಗಿ ಕೆಲಸಗಳನ್ನು ಶುರು ಮಾಡಿ, ಹಿರಿಯರ ಮಾತನ್ನು ಅನುಸರಿಸಿ. ಎಲ್ಲಾ ವಿಷಯದಲ್ಲೂ ತನ್ನದೇ ಆದಂತ ಜಾಗರೂಕತೆ ಬೇಕಾಗುತ್ತದೆ.. ಎಚ್ಚರಿಕೆ ಮತ್ತು ತೀವ್ರವಾದ ಅನುಸರಣೆ ಮಾಡಬೇಕು. (ಪರಿಹಾರಕ್ಕಾಗಿ ವಿಷ್ಣು ಸಹಸ್ರನಾಮವನ್ನು ಕೇಳಿಸಿಕೊಳ್ಳಿ)

ತುಲಾ ರಾಶಿ: ಸ್ವಲ್ಪಮಟ್ಟಿನ ಅನುಕೂಲ, ಗುರುಗಳ ಸಲಹೆ, ಬಟ್ಟೆಗಳ ಮೇಲೆ ಸ್ವಲ್ಪ ನಿರಾಸಕ್ತಿ.. ಹೊಸ ರೀತಿಯ ವ್ಯವಸ್ಥೆ, ಎಲ್ಲದರಲ್ಲೂ ಅನುಕೂಲ, ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯ ಲಾಭ ಪ್ರಾಪ್ತಿಯಾಗುತ್ತದೆ. (ಪರಿಹಾರಕ್ಕಾಗಿ ಮಹಾಲಕ್ಷ್ಮಿ ಅಷ್ಟಕವನ್ನು 18 ಬಾರಿ ಓದಿ)

ವೃಶ್ಚಿಕ ರಾಶಿ: ಅತಿಯಾಗಿ ಯೋಚಿಸಬೇಡಿ, ಅತ್ಯಂತ ಶುಭವಾಗುತ್ತದೆ. ಚಿಂತೆಯಿಂದ ದೂರವಿರಿ ಚಿಂತೆ ಆರೋಗ್ಯವನ್ನು ಕೆಡಿಸುತ್ತದೆ.. ಅನಾರೋಗ್ಯ ಬಾರದೆ ಸ್ವಲ್ಪ ತೊಂದರೆ ಎಚ್ಚರಿಕೆಯಿಂದ ಆರೋಗ್ಯವಾಗಿರಲು ಪ್ರಯತ್ನ ಮಾಡಿ. (ಪರಿಹಾರಕ್ಕಾಗಿ ಧನ್ವಂತ್ರಿ ಮಹಾ ವಿಷ್ಣುವಿನ ಸ್ಮರಣೆ ಮಾಡಿ)

ಧನಸ್ಸು ರಾಶಿ: ತಿರುಗಾಟದಿಂದ ಮನಸ್ಸು ಸ್ವಲ್ಪ ಬಳದಿದೆ.. ಯಾವ ಕಾರ್ಯದಲ್ಲೂ ನಿರಾಸಕ್ತಿ ಇರದೇ ಇರುವವರು ಈ ದಿನ ನಿರಾಶಕ್ತಿಯಾಗಿದೆ. ಅತಿಯಾಗಿ ಯೋಚನೆ ಮಾಡುವ ಅಗತ್ಯವಿಲ್ಲ, ಒಳ್ಳೆಯದಾಗುತ್ತದೆ ವಿದ್ಯಾರ್ಥಿಗಳಿಗೆ ಶುಭ. (ಪರಿಹಾರಕ್ಕಾಗಿ ಕೊಲ್ಹಾಪುರ ಮಹಾಲಕ್ಷ್ಮಿ ಅಮ್ಮನವರ ಪ್ರಾರ್ಥನೆ ಮಾಡಿ)

ಮಕರ ರಾಶಿ: ಅತಿಯಾಗಿ ಖುಷಿ ಆದರೆ ಸ್ವಲ್ಪ ಮನೆಯಲ್ಲಿ ವಿರಸ.. ಬದುಕು ಸ್ವಲ್ಪ ಕಷ್ಟ ನಷ್ಟಗಳೊಂದಿಗೆ ಪ್ರಾರಂಭ, ಎಚ್ಚರಿಕೆಯಿಂದ ಮುನ್ನುಗ್ಗಿ ಶುಭವಾಗುತ್ತದೆ. ಬೇರೆಯವರಿಗೆ ಖುಷಿ ಪಡಿಸುವ ನಿಮ್ಮ ಪ್ರಯತ್ನ ಫಲ ಕೊಡುವುದಿಲ್ಲ ಎಲ್ಲರಿಗೂ ಈ ದಿನ ಶುಭ. (ಪರಿಹಾರಕ್ಕಾಗಿ ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ)

ಕುಂಭ ರಾಶಿ: ಸಾಮಾನ್ಯ ಬೆಳವಣಿಗೆ ಇದ್ದಕ್ಕಿದ್ದಂತೆಯೇ ಶುಭ, ಧನಾಗಮನ, ಆನಂದ, ಉತ್ಸಾಹ, ಎಲ್ಲ ಕಾರ್ಯದಲ್ಲೂ ಇದ್ದಕ್ಕಿದ್ದಂತೆ ಶುಭವಾಗುತ್ತದೆ. ಅನಿಷ್ಟಗಳು ದೂರವಾಗುತ್ತದೆ. (ಪರಿಹಾರಕ್ಕಾಗಿ ಅಮ್ಮನವರನ್ನು ಕೆಂಪು ಹೂಗಳಿಂದ ಪೂಜೆ ಮಾಡಿ)

ಮೀನ ರಾಶಿ: ಯೋಚಿಸಿದ ನಂತರ ನಿಮಗೆ ಇನ್ನೊಬ್ಬರ ಬಗ್ಗೆ ತಿಳಿಯಲು ಪ್ರಾರಂಭವಾಗುತ್ತದೆ.. ಬಂಧು ಮಿತ್ರರಿಂದ ಸ್ವಲ್ಪ ದೂರವಾಗುತ್ತೀರಾ, ಎಚ್ಚರಿಕೆಯಿಂದ ಗಮನಿಸಿ, ಗಲಾಟೆ, ಶತ್ರುಗಳ ಭಯ, ಅಧಿಕ. (ಹನುಮಂತನ ಸ್ಮರಣೆಯನ್ನು ಮಾಡಿ ಪರಿಹಾರವಾಗುತ್ತದೆ)

ರಾಹುಕಾಲ: 7-30AM ರಿಂದ 9-00AM
ಗುಳಿಕಕಾಲ: 6-00AM ರಿಂದ 7-30 AM
ಯಮಗಂಡಕಾಲ: 1-30PMರಿಂದ 3-00PM

ಹೆಚ್ಚಿನ ಮಾಹಿತಿಗಾಗಿ: ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ಎಸ್ ಶರ್ಮ,
ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ಮೊ-9945170572

ರಾಜಕೀಯ

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ ಸೂಚನೆ: ಡಿಸಿಎಂ ಡಿ.ಕೆ.ಶಿವಕುಮಾರ್

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ

“ಧರ್ಮಸ್ಥಳ ವಿಚಾರದಲ್ಲಿ ಸುಳ್ಳು ಆಪಾದನೆ ಮಾಡಿದ್ದರೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದುʼ ಎಂದು ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಯವರೇ ಭರವಸೆ ನೀಡಿದ್ದಾರೆ”; ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="112789"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಅಂಗಡಿಗಳಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು (Shops robbed) ನಡೆಯುತ್ತಿದ್ದು, ವ್ಯಾಪಾರಿಗಳನ್ನು ಚಿಂತೆಗೀಡುಮಾಡಿದೆ.

[ccc_my_favorite_select_button post_id="112687"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!