ಹರಿತಲೇಖನಿ ದಿನಕ್ಕೊಂದು ಕಥೆ: ಮಂಗ ತಂದ ಸಾಲ

A story for the day: A loan brought by a monkey

Harithalekhani Daily Story; ಒಂದು ಮಂಗ (Monkey) ಮದುವೆಯಾಯಿತು. ಮಕ್ಕಳಾದವು. ಹರಕು ‘ಮುರುಕು ಮನೆಯೊಂದನ್ನು ಕಟ್ಟಿತು. ಮಳೆಗಾಲದಲ್ಲಿ ರಭಸದಿಂದ ಮಳೆ ಸುರಿಯುವಾಗ ಮನೆಯಿಡೀ ಸೋರುತ್ತಿತ್ತು.

ಹೆಣ್ಣು ಮಂಗ ಸಿಟ್ಟಿನಿಂದ. ‘ಎಂಥ ಸೋಮಾರಿ ನೀನು! ಒಳ್ಳೆಯ ಮನೆಯನ್ನೂ ಕಟ್ಟಲಿಲ್ಲ. ಮಳೆಗೆ ನೆನೆಯುವ ಶಿಕ್ಷೆಯ ಜೊತೆಗೆ ತಿನ್ನಲು ಏನೂ ಆಹಾರವಿಲ್ಲ. ಏನಾದರೂ ಸಂಪಾದಿಸಿ ತರದಿದ್ದರೆ ಮಕ್ಕಳೊಂದಿಗೆ ನಾನು ಉಪವಾಸ ಸಾಯುತ್ತೇನೆ. ಹೋಗು, ಎಲ್ಲಿಂದಾದರೂ ಅಕ್ಕಿಯಿದ್ದರೆ ತೆಗೆದುಕೊಂಡು ಬಾ’ ಎಂದು ಕೋಪದಿಂದಲೇ ಹೇಳಿತು.

ಗಂಡು ಮಂಗನಿಗೆ ದುಡಿಯಲು ಮನಸ್ಸಿಲ್ಲ. ರೈತರು ಬೆಳೆದ ಕಾಯಿಪಲ್ಲೆಯೋ ಹಗ್ಗೋ ಸಿಗುವುದೇ ಎಂದು ಹುಡುಕಿಕೊಂಡು ಹೊರಟಿತು. ಏನೂ ಸಿಗಲಿಲ್ಲ. ಆಗ ಅದಕ್ಕೆ ಕೋಳಿಯ ನೆನಪಾಯಿತು.

ಬೇಸಿಗೆ ಕಾಲದಲ್ಲಿ ಕೋಳಿ ತಿಪ್ಪೆಯನ್ನು ಕೆದಕಿ ಕೆದಕಿ ಒಂದೊಂದೇ ಕಾಳು ಆರಿಸಿ ಮಳೆಗಾಲದಲ್ಲಿ ಮಕ್ಕಳು ಮರಿಗಳಿಗೆ ತಿನ್ನಲು ಜೋಪಾನ ಮಾಡುತ್ತದೆ. ಅದರ ಬಳಿಗೆ ಹೋಗಿ ಸಾಲ ಕೇಳಿ ತರುವುದೆಂದು ಕೋಳಿಯ ಮನೆಗೆ ಹೋಯಿತು. ‘ಕೋಳಿಯಕ್ಕಾ, ಒಂದು ಸೇರಕ್ಕಿ ಸಾಲ ಕೊಡುತ್ತೀಯಾ?’ ಎಂದು ಅಂಗಲಾಚಿತು.

ಕೋಳಿಯು, ‘ಸಾಲ ಕೊಡುತ್ತೇನೆ. ಆದರೆ ನಾಳೆ ಮಧ್ಯಾಹ್ನ ಹನ್ನೆರಡು ಗಂಟೆಗೆ ನಿನ್ನ ಮನೆಗೆ ಬಂದು ಕೇಳಿದಾಗ ಬಡ್ಡಿ ಸಹಿತ ಮರಳಿ ಕೊಡಬೇಕು, ಆಗಬಹುದೆ?’ ಎಂದು ಕೇಳಿತು. ‘ಅಯ್ಯೋ ದೇವರೇ, ಹೇಳಿದ ಮಾತಿಗೆ ತಪ್ಪುವುದುಂಟೆ? ನಾನು ಕೊಟ್ಟಿ ಸಾಲದ ಅಕ್ಕಿ ಬೇಕಾದಷ್ಟು ಇದೆ.

ಮೂಟೆಗಟ್ಟಲೆ ಅಕ್ಕಿ ಈ ದಿನ ಸಂಜೆಯೊಳಗೆ ನನ್ನ ಮನೆಗೆ ಮರಳಿ ಬರುತ್ತದೆ’ ಎಂದು ಮಂಗ ಮೀಸೆ ತಿರುವಿತು. ಕೋಳಿ ಕೊಟ್ಟ ಅಕ್ಕಿಯ ಗಂಟನ್ನು ಮನೆಗೆ ಸಾಗಿಸಿತು. ಬಳಿಕ ನರಿಯ ಮನೆಗೆ ಹೋಯಿತು. ನರಿ ಬೇಸಿಗೆಯಲ್ಲಿ ಹೊಲಗಳಿಗೆ ಹೋಗಿ ಕದ್ದು ಗಳಿಸಿದ ಅಕ್ಕಿಯನ್ನು ಜೋಪಾನ ಮಾಡುವುದು ಅದಕ್ಕೆ ಗೊತ್ತಿತ್ತು. ‘ನರಿಯಣ್ಣ, ಒಂದು ಸೇರಕ್ಕಿ ಸಾಲ ಕೊಡುವೆಯಾ?’ ಎಂದು ಹೇಳಿತು.

‘ಸಾಲ ಕೊಡುತ್ತೇನೆ. ಆದರೆ ಬಡ್ಡಿ ಕೊಡಬೇಕು. ಈಗಿನ ಕಾಲದಲ್ಲಿ ಯಾರನ್ನಾದರೂ ನಂಬುವುದು ಕಷ್ಟ. ನಾಳೆ ಮಧ್ಯಾಹ್ನ ಹನ್ನೆರಡೂವರೆ ಗಂಟೆಗೆ ನಿನ್ನ ಮನೆಗೆ ವಸೂಲಿಗೆ ನಾನು ಬರುತ್ತೇನೆ. ಆಗ ಮರಳಿ ಕೊಡದೆ ಇರಬಾರದು’ ಎಂದಿತು ನರಿ. ‘ಛೇ ಛೇ, ಹಾಗೆ ಮೋಸ ಮಾಡುವುದುಂಟೆ? ಒಂದಕ್ಕೆರಡು ಪಾಲು ಕೊಡುತ್ತೇನೆ. ಈ ದಿನ ಸಂಜೆ ನನ್ನ ಮನೆಗೆ ಎಷ್ಟು ಅಕ್ಕಿ ಬರುತ್ತದೋ ನೀನೇ ನೋಡು’ ಎಂದು ಮಂಗವು ನರಿಗೆ ಹೇಳಿತು. ಅದು ಕೊಟ್ಟ ಅಕ್ಕಿಯನ್ನು ಮನೆಗೆ ತಂದಿತು.

ಮಂಗ ಮತ್ತೆ ನಾಯಿಯ ಮನೆಗೆ ಸಾಗಿತು. ನಾಯಿ ಕುರಿಗಳನ್ನು ತೋಳಗಳಿಂದ ರಕ್ಷಿಸಲು ಕಾವಲು ಕಾದು ಯಜಮಾನ ಕೊಟ್ಟ ಅಕ್ಕಿಯನ್ನು ಸಂಗ್ರಹಿಸಿಡುವುದು ಅದಕ್ಕೆ ಗೊತ್ತಿತ್ತು. ‘ನಾಯಿಯಣ್ಣ, ಒಂದು ಸೇರಕ್ಕಿ ಸಾಲ ಕೊಡುತ್ತೀಯಾ? ಬಡ್ಡಿಯೊಂದಿಗೆ ನಾಳೆ ಮಧ್ಯಾಹ್ನ ಒಂದು ಗಂಟೆಗೆ ತಂದು ಕೊಡುತ್ತೇನೆ’ ಎಂದು ಬೇಡಿತು.

ನಾಯಿಯು ಅಕ್ಕಿಯನ್ನು ಕೊಟ್ಟಿತು. ‘ನೀನು ತಂದು ಕೊಡುವೆ ಎಂಬ ಮಾತಿನಲ್ಲಿ ನನಗೆ ನಂಬಿಕೆಯಿಲ್ಲ. ನಾಳೆ ಒಂದು ಗಂಟೆಗೆ ನಾನೇ ನಿನ್ನ ಮನೆಗೆ ಬರುತ್ತೇನೆ’ ಎಂದಿತು.

ಮಂಗ ಅಕ್ಕಿಯನ್ನು ತಂದು ಹೆಂಡತಿಗೆ ಕೊಟ್ಟು ಹುಲಿಯ ಗುಹೆಗೆ ಹೋಯಿತು. ‘ಹುಲಿಯಣ್ಣ, ಮರ್ಯಾದೆ ಹೋಗುತ್ತದೆ. ಒಂದು ಸೇರಕ್ಕಿ ಸಾಲ ಬೇಕಿತ್ತು. ಬಡ್ಡಿಯೊಂದಿಗೆ ನಾಳೆ ಮಧ್ಯಾಹ್ನ ಒಂದೂವರೆ ಗಂಟೆಗೆ ವಾಪಾಸು ಕೊಡುತ್ತೇನೆ’ ಎಂದು ಕೇಳಿತು.

ದಾರಿಯಲ್ಲಿ ಹೋಗುವ ವ್ಯಾಪಾರಿಗಳನ್ನು ಹೆದರಿಸಿ ಹುಲಿ ಮಳೆಗಾಲಕ್ಕಾಗಿ ಅಕ್ಕಿಯನ್ನು ಸಂಗ್ರಹಿಸಿ ಇಡುತ್ತಿತ್ತು. ಅದರಿಂದ ಮಂಗನಿಗೆ ಸಾಲ ಕೊಟ್ಟಿತು. ‘ನಾಳೆ ಮಧ್ಯಾಹ್ನ ನಿನ್ನ ಮನೆಗೆ ಬರುತ್ತೇನೆ. ಆಗ ಏನೂ ನೆಪ ಹೇಳದೆ ಮರಳಿ ಕೊಡದಿದ್ದರೆ ಕೊಂದು ಹಾಕಿಯೇನು’ ಎಂದು ಎಚ್ಚರಿಸಿತು. ಮಂಗ ಅಕ್ಕಿಯನ್ನು ಮನೆಗೆ ತಂದಿತು. ಹೆಂಡತಿ ಮಕ್ಕಳೊಂದಿಗೆ ಹಬ್ಬದ ಊಟ ಮಾಡಿತು.

ಮರುದಿನ ಮಂಗ ಮಕ್ಕಳೊಂದಿಗೆ ಹೆಂಡತಿಯನ್ನು ತವರುಮನೆಗೆ ಹೋಗಿ ಬರಲು ಕಳುಹಿಸಿತು. ತಾನು ಒಂದು ಕಂಬಳಿ ಹೊದ್ದುಕೊಂಡು ಮಂಚದ ಮೇಲಿನ ಹಾಸಿಗೆಯಲ್ಲಿ ನರಳುತ್ತ ಕುಳಿತುಕೊಂಡಿತು. ಮಧ್ಯಾಹ್ನ ಹನ್ನೆರಡು ಗಂಟೆಗೆ ಸಾಲ ವಸೂಲಿಗೆ ಕೋಳಿ ಬಂದಿತು. ಹೊರಗಿನಿಂದ, ‘ಮಂಗಣ್ಣಾ ಮಂಗಣ್ಣಾ, ಸಾಲ ಮರಳಿ ತಾ’ ಎಂದು ಕರೆಯಿತು.

ಮಂಗ ನರಳುತ್ತ, ‘ನನಗಿಲ್ಲಿ ಜ್ವರದಿಂದ ಪ್ರಾಣ ಹೋಗುತ್ತಿದೆ. ಸಾಲವೂ ಇಲ್ಲ, ಗೀಲವೂ ಇಲ್ಲ. ಹೋಗಾಚೆ’ ಎಂದು ಗದರಿಸಿತು. ಕೋಳಿಗೆ ಕೋಪ ಬಂತು. ‘ಏನಂದೆ, ಕೊಟ್ಟ ಮಾತಿಗೆ ತಪ್ಪಿದರೆ ಬಿಡುತ್ತೇನಾ?’ ಎನ್ನುತ್ತ ಒಳಗೆ ಬಂದಿತು. ಆಗ ಹೊರಗಿನಿಂದ, ‘ಮಂಗಣ್ಣಾ, ನನ್ನ ಸಾಲ ಹಿಂದೆ ಕೊಡು’ ಎಂದು ನರಿಯ ಧ್ವನಿ ಕೇಳಿಸಿತು. ನರಿ ಬಂದಿರುವುದು ಕೋಳಿಗೆ ಗೊತ್ತಾಯಿತು.

‘ಅಯ್ಯೋ, ನೀನು ಸಾಲ ಮರಳಿ ಕೊಡುವುದು ಬೇಡ. ನರಿಯಿಂದ ನನ್ನನ್ನು ಬಚಾವು ಮಾಡು’ ಎಂದು ಕೋರಿತು. ಮಂಗ ಕೋಳಿಯನ್ನು ಹಾಸಿಗೆಯ ಕೆಳಗೆ ಬಚ್ಚಿಟ್ಟಿತು. ‘ಸಾಲ ಮರಳಿ ಕೊಡೋದಿಲ್ಲ. ನನಗೆ ಜ್ವರ ಬರುತ್ತಿದೆ’ ಎಂದು ನರಿಗೆ ಮಂಗ ಕೂಗಿ ಹೇಳಿತು. ‘ಕೊಡದಿದ್ದರೆ ಸುಮ್ಮನೆ ಬಿಡುತ್ತೇನಾ?’ ಎಂದು ನರಿ ಒಳಗೆ ಬಂದಿತು.

ಆಗ ಹೊರಗೆ ನಾಯಿ ಕರೆಯುವ ಧ್ವನಿ ನರಿಗೆ ಕೇಳಿಸಿತು. ‘ಅಯ್ಯೋ ದೇವರೇ, ನಾಯಿ ಬಂದ ಹಾಗಿದೆ. ನೀನು ಸಾಲ ಮರಳಿಸಬೇಕಾಗಿಲ್ಲ. ನನ್ನ ಜೀವ ಕಾಪಾಡು’ ಎಂದಿತು ನರಿ, ಮಂಗ ನರಿಯನ್ನು ಹಾಸಿಗೆಯ ಕೆಳಗೆ ಅಡಗಿಸಿತು. ನಾಯಿಗೆ, ‘ಹೋಗೋ, ನಿನ್ನ ಸಾಲ ಮರಳಿಸೋದೇ ಇಲ್ಲ’ ಎಂದಿತು.

ನಾಯಿ ಒಳಗೆ ಬರುವಾಗ ಹೊರಗೆ ಹುಲಿಯ ಕರೆ ಕೇಳಿಸಿತು. ನಾಯಿ, ‘ಹುಲಿ ಬಂದ ಹಾಗಿದೆ. ನನ್ನ ಜೀವ ಕಾಪಾಡು. ನಿನ್ನ ಸಾಲ ಮರಳಿಸಬೇಕಾಗಿಲ್ಲ’ ಎಂದು ಕೇಳಿತು. ಮಂಗ ನಾಯಿಯನ್ನು ಹಾಸಿಗೆಯ ಕೆಳಗೆ ಅಡಗಿಸಿಟ್ಟಿತು. ‘ಲೋ ಹುಲಿ, ನಿನ್ನ ಅಕ್ಕಿ ಮರಳಿಸೋದಿಲ್ಲ. ಒಳಗೆ ಬಾ. ಇಲ್ಲಿರುವ ನನ್ನ ಸ್ನೇಹಿತರು ನಿನ್ನನ್ನು ಸೀಳಿ ಹಾಕುತ್ತಾರೆ’ ಎಂದು ಅಬ್ಬರಿಸಿತು.

ಹುಲಿಯನ್ನು ಸೀಳುವ ಸ್ನೇಹಿತರು ಯಾರು ಎಂದು ನೋಡಲು ಹುಲಿ ಒಳಗೆ ಬಂದು ಮಂಚದ ಮೇಲೆ ನೆಗೆಯಿತು. ಮಂಚ ಮುರಿದು ಬಿದ್ದಿತು. ಅದರೊಳಗಿದ್ದ ಕೋಳಿ ಹೊರಗೆ ಬಂದಿತು. ಕೋಳಿಯನ್ನು ಬೆನ್ನಟ್ಟಿ ನರಿ ಓಡಿತು. ನರಿಯನ್ನು ಕಂಡು ನಾಯಿ ಬೆಂಬತ್ತಿತು.

ಮಂಗ ಸದ್ದಿಲ್ಲದೆ ಮನೆಯಿಂದ ಹೊರಗೆ ಜಿಗಿದು ಮರವೇರಿ ಕುಳಿತಿತು. ಹುಲಿಯ ಭಯದಿಂದಾಗಿ ಅದು ಮತ್ತೆ ಮನೆ ಕಟ್ಟಿಕೊಳ್ಳದೆ ಮರವನ್ನು ಮನೆ ಮಾಡಿಕೊಂಡು ಅಲ್ಲೇ ವಾಸಿಸಿತು. (ಬ್ರೆಜಿಲ್ ಕಥೆ)

ಕೃಪೆ: ಪ.ರಾಮಕೃಷ್ಣ ಶಾಸ್ತ್ರಿ (ಸಾಮಾಜಿಕ ಜಾಲತಾಣ)

ಓದುಗರಿಂದ ಪ್ರೋತ್ಸಾಹ ಸಿಗದ ಕಾರಣ ಕೆಲ ದಿನಗಳಿಂದ ನಿಲ್ಲಿಸಲಾಗಿದ್ದ ಹರಿತಲೇಖನಿ ದಿನಕ್ಕೊಂದು ಕಥೆಯನ್ನು, ಮತ್ತೆ ಹರಿತಲೇಖನಿ ಓದುಗ ತಾಯಂದಿರ ಒತ್ತಾಯದ ಮೇರೆಗೆ ಆರಂಭಿಸಲಾಗಿದೆ.

ರಾಜಕೀಯ

ಮೋದಿ, ಶಾ ಶ್ರಮದಿಂದ 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ: ಬಿ.ವೈ. ವಿಜಯೇಂದ್ರ

ಮೋದಿ, ಶಾ ಶ್ರಮದಿಂದ 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ: ಬಿ.ವೈ. ವಿಜಯೇಂದ್ರ

ಬಿಜೆಪಿಯ (BJP) ಗತವೈಭವದ ದಿನಗಳು ದಾವಣಗೆರೆಯಲ್ಲಿ ಮರುಕಳಿಸಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (B.Y. Vijayendra) ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

[ccc_my_favorite_select_button post_id="121758"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಶೆಯಾಗಲಿದೆ. ಎಂಎಸ್ ಧೋನಿಯನ್ನು (MS Dhoni) ಮೈದಾನದಲ್ಲಿ ಕಣ್ಣುಂಬಿಸಿಕೊಳ್ಳಲು ಎದುರು ನೋಡುತ್ತಿದ್ದವರಿಗೆ ಈ ಆವೃತ್ತಿಯಲ್ಲಿ ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಆತಂಕ ಎದುರಾಗಿದೆ‌.

[ccc_my_favorite_select_button post_id="121736"]
ದೊಡ್ಡಬಳ್ಳಾಪುರ: ಕಾರಿನಲ್ಲಿ ಮಹಿಳೆ ಭಸ್ಮ ಪ್ರಕರಣ.. ಗೃಹಿಣಿಯ ಗುರುತು ಪತ್ತೆ

ದೊಡ್ಡಬಳ್ಳಾಪುರ: ಕಾರಿನಲ್ಲಿ ಮಹಿಳೆ ಭಸ್ಮ ಪ್ರಕರಣ.. ಗೃಹಿಣಿಯ ಗುರುತು ಪತ್ತೆ

ಜಿಂಕೆಬಚ್ಚಹಳ್ಳಿ ಸಮೀಪ ಶನಿವಾರ ಬೆಂಕಿಗೆ ಆಹುತಿಯಾಗಿದ್ದ ಕಾರಿನಲ್ಲಿ (Car) ಅನುಮಾನಸ್ಪದ ರೀತಿಯಲ್ಲಿ ಸುಟ್ಟು ಹೋಗಿದ್ದ ಮಹಿಳೆಯ (Woman) ಅಸ್ಥಿಪಂಜರ ಪತ್ತೆಯಾಗಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

[ccc_my_favorite_select_button post_id="121693"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]