ಹರಿತಲೇಖನಿ ದಿನಕ್ಕೊಂದು ಕಥೆ: ಕಾರಣ..!

Reason

Reason: ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ಹೊರಟು ಎಂಟೂವರೆಗೆ ಆ ಶಾಲೆಯ ಮುಂದೆ ಹಾದು ಹೋಗುವಾಗ ಏನೋ ಗುಂಪು ಸೇರಿದ್ದು ಕಂಡು ಕುತೂಹಲದಿಂದ ಅತ್ತ ನಡೆದೆ. ನೋಡಿದರೆ, ಅಯ್ಯೋ..! ಆ ಮುದಿ ತಾತ ನೆಲಕ್ಕೊರಗಿದ್ದಾರೆ. ಕೆಲವೇ ನಿಮಿಷಗಳಾಗಿರಬಹುದು.

ಕಳೆದೆರೆಡು ದಶಕಗಳಿಂದ, ಈ ತಾತ, ದಿನಾ ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ಸರಿಯಾಗಿ ಬಂದು, ಆ ಹಳೆಯ ಶಾಲೆಯ ಆವರಣವನ್ನೆಲ್ಲ ಶುಚಿಗೊಳಿಸಿ ಎದುರಿನ ಕಟ್ಟೆಯಲ್ಲಿ ಒಬ್ಬರೇ ಸುಮ್ಮನೇ ಕುಳಿತಿರುತ್ತಿದ್ದರು. ಸಂಜೆ ಆರರ ನಂತರ ಎದ್ದು ಮನೆ ಕಡೆ ಹೊರಡುತ್ತಿದ್ದರು.

ಶಾಲೆಗೆ ಬರುವ ಮಕ್ಕಳನ್ನೆಲ್ಲಾ ಮಾತಾಡಿಸಿ, ಊಟದ ಸಮಯದಲ್ಲಿ ಆ ಮಕ್ಕಳಿಗೆ ಅದೂ ಇದೂ ಸಹಾಯ ಮಾಡಿ, ಚಾಕೋಲೇಟ್, ಐಸ್ಕ್ರೀಂ ಎಲ್ಲ ಕೊಡಿಸುವುದರ ಜೊತೆಗೆ ತಮ್ಮ ಬುತ್ತಿಯನ್ನು ಕೂಡ ಅವರೊಂದಿಗೆ ಹಂಚಿಕೊಂಡು ಇಲ್ಲೇ ಉಣ್ಣುತ್ತಿದ್ದರು.

ಆಟದ ವೇಳೆಯಲ್ಲಂತೂ ಅವರೂ ಮಕ್ಕಳೊಂದಿಗೆ ಕೂಡಿ ಆಡುತ್ತಿದ್ದರು ಎಂದು ಆ ಶಾಲೆಯ ನನ್ನ ಸ್ನೇಹಿತ ಮೇಷ್ಟ್ರು ಹೇಳುತ್ತಿದ್ದರು. ಈಗಂತೂ ಕರೋನಾ ಕಾರಣದಿಂದ ಶಾಲೆ ತೆರೆಯದಿದ್ದರೂ ಸಹ ಇದೇ ಪ್ರವೃತ್ತಿಯನ್ನು ಕಂಡು, ಕುತೂಹಲದಿಂದ ನಾನೊಮ್ಮೆ ಅವರನ್ನೇ ಕೇಳಿದಾಗ ಒಲ್ಲದ ಮನಸ್ಸಿನಿಂದ ಹೇಳಿದ್ದರು.

“ನಿವೃತ್ತ ನೌಕರ ನಾನು. ಇಲ್ಲೇ ಶಾಲೆ ಹತ್ತಿರದಲ್ಲೇ ಕೆಲವು ದಶಕಗಳಿಂದ ಚಿಕ್ಕ ಸ್ವಂತ ಮನೆಯಲ್ಲಿದ್ದೇನೆ. ಬಾಲ್ಯದಲ್ಲಿ ನನ್ನ ಮಕ್ಕಳಿಬ್ಬರೂ ಇದೇ ಶಾಲೆಯಲ್ಲಿ 10ರವರೆಗೆ ಓದುವಾಗ ಆ ಇಬ್ಬರು ಮಕ್ಕಳನ್ನೂ ದಿನಾ ಸೈಕಲ್ನಲ್ಲಿ ಕೂರಿಸಿ ಕರೆದು ಕೊಂಡು ಬಂದು ಶಾಲೆ ಬಿಡುವಾಗ ಪುನಃ ಕರೆದುಕೊಂಡು ಹೋಗುತ್ತಿದ್ದೆ.

ಆ ದಿನಗಳ ಖುಷಿಯಂತೂ ಮರೆಯೋ ಹಾಗಿಲ್ಲ..! ಆವಾಗೆಲ್ಲಾ, ಶಾಲೆ ಬಿಡುವ ಹೊತ್ತಿಗೆ ಇದೇ ಕಟ್ಟೆಯ ಮೇಲೆ ಕುಳಿತು ಕಾಯುತ್ತಿದ್ದೆ. ಬೆಳೆದು ಹೆಚ್ಚಿನ ಓದಿಗೆ ಶಹರಕ್ಕೆ ಹೋಗ ತೊಡಗಿದ ಮೇಲೆ ಅವರ ಒಡನಾಟ ಸ್ವಲ್ಪ ಸ್ವಲ್ಪವೇ ಕಡಿಮೆಯಾಗಿ, ವಿದೇಶಕ್ಕೆ ಹೋದ ಮೇಲಂತೂ ನಿಂತೇ ಹೋದಂತಾಗಿದೆ.

ಮಕ್ಕಳಿಬ್ಬರೂ ಮಕ್ಕಳೊಂದಿಗೆ ವಿದೇಶದಲ್ಲೇ ನೆಲೆಸಿದ್ದಾರೆ. ಯಾವಾಗಲೋ ಒಮ್ಮೆ ಮನಸ್ಸು ಬಂದರೆ ಮಾತಾಡ್ತಾರೆ ಅಷ್ಟೇ. ನನ್ನವಳೂ ಕೂಡ ಗತಿಸಿ ಕೆಲವು ವರ್ಷಗಳಾಗಿ, ಅವಳಿಚ್ಛೆಯಂತೆ ಕಟ್ಟಿಸಿದ ಮನೆಯಲ್ಲೇ ಇರುಳೆಲ್ಲ ಅವಳ ನೆನಪಿನಲ್ಲೇ ಕಳೆದರೂ.

ಹಗಲು ಸವೆಯಲು, ಬಾಲ್ಯದಲ್ಲಿ ಮಕ್ಕಳು ಆಡಿ ಬೆಳೆದ ಈ ಶಾಲೆಯನ್ನಾದರೂ ನೋಡುತ್ತ ಕುಳಿತಿದ್ದರೆ, ಸಮಯ ಹೋದೀತೆಂದು ದಿನಾ ಬಂದು ಕಳೆಯುತ್ತೇನೆ! ಆಡುವ ಮಕ್ಕಳಲ್ಲಿ ದೂರದಲ್ಲಿರುವ ನನ್ನ ಮಕ್ಕಳು, ಮೊಮ್ಮಕ್ಕಳನ್ನು ಅರಸುತ್ತ, ಕಳೆದ ದಿನಗಳ ನೆನೆದು ಆಯಸ್ಸು ಕಳೆಯುತ್ತಿದ್ದೇನೆ!.

ನನ್ನವಳ, ನನ್ನ ಮಕ್ಕಳ, ಮೊಮ್ಮಕ್ಕಳ ಮಧುರ ನೆನಪು ತರುವ ಈ ಹಳೆಯ ಶಾಲೆ, ಯಾವುದೇ ದೇವಾಲಯಕ್ಕಿಂತ ಪೂಜ್ಯವೆಂದು ಭಾವಿಸಿ, ಶುಚಿಗೊಳಿಸಿ, ಇಲ್ಲೇ ಸಮಯ ಕಳೆಯುತ್ತಿದ್ದೇನೆ.! ಬರುವ ಪಿಂಚಣಿಯಿಂದ ಅಲ್ಪ ಸ್ವಲ್ಪ ಶಾಲೆಯ ಅಭಿವೃದ್ಧಿಗೆ ವಿನಿಯೋಗಿಸುತ್ತೇನೆ!

ಕೃಪೆ: ಸಾಮಾಜಿಕ ಜಾಲತಾಣ.

ರಾಜಕೀಯ

ಮೋದಿ, ಶಾ ಶ್ರಮದಿಂದ 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ: ಬಿ.ವೈ. ವಿಜಯೇಂದ್ರ

ಮೋದಿ, ಶಾ ಶ್ರಮದಿಂದ 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ: ಬಿ.ವೈ. ವಿಜಯೇಂದ್ರ

ಬಿಜೆಪಿಯ (BJP) ಗತವೈಭವದ ದಿನಗಳು ದಾವಣಗೆರೆಯಲ್ಲಿ ಮರುಕಳಿಸಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (B.Y. Vijayendra) ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

[ccc_my_favorite_select_button post_id="121758"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಶೆಯಾಗಲಿದೆ. ಎಂಎಸ್ ಧೋನಿಯನ್ನು (MS Dhoni) ಮೈದಾನದಲ್ಲಿ ಕಣ್ಣುಂಬಿಸಿಕೊಳ್ಳಲು ಎದುರು ನೋಡುತ್ತಿದ್ದವರಿಗೆ ಈ ಆವೃತ್ತಿಯಲ್ಲಿ ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಆತಂಕ ಎದುರಾಗಿದೆ‌.

[ccc_my_favorite_select_button post_id="121736"]
ದೊಡ್ಡಬಳ್ಳಾಪುರ: ಕಾರಿನಲ್ಲಿ ಮಹಿಳೆ ಭಸ್ಮ ಪ್ರಕರಣ.. ಗೃಹಿಣಿಯ ಗುರುತು ಪತ್ತೆ

ದೊಡ್ಡಬಳ್ಳಾಪುರ: ಕಾರಿನಲ್ಲಿ ಮಹಿಳೆ ಭಸ್ಮ ಪ್ರಕರಣ.. ಗೃಹಿಣಿಯ ಗುರುತು ಪತ್ತೆ

ಜಿಂಕೆಬಚ್ಚಹಳ್ಳಿ ಸಮೀಪ ಶನಿವಾರ ಬೆಂಕಿಗೆ ಆಹುತಿಯಾಗಿದ್ದ ಕಾರಿನಲ್ಲಿ (Car) ಅನುಮಾನಸ್ಪದ ರೀತಿಯಲ್ಲಿ ಸುಟ್ಟು ಹೋಗಿದ್ದ ಮಹಿಳೆಯ (Woman) ಅಸ್ಥಿಪಂಜರ ಪತ್ತೆಯಾಗಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

[ccc_my_favorite_select_button post_id="121693"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]