ನವದೆಹಲಿ: ಇತ್ತೀಚೆಗಷ್ಟೆ ಕಾಂಗ್ರೆಸ್ ವಿರುದ್ಧ ಸುಳ್ಳು ಸುದ್ದಿ ವರದಿ ಮಾಡಿ FIR ದಾಖಲಾಗಿ ಸಂಕಷ್ಟಕ್ಕೆ ಸಿಲುಕಿರುವ ಖ್ಯಾತ ಪತ್ರಕರ್ತ ಆರ್ನಬ್ ಗೋಸ್ವಾಮಿ (Arnab Goswami) ವಿರುದ್ಧ ಈಗ ದೇಶ ದ್ರೋಹದಂತಹ ಗಂಭೀರ ಆರೋಪ ಕೇಳಿಬಂದಿದೆ.
ಹೌದು ತನ್ನ ಚಾನಲ್ ರೇಟಿಂಗ್ ಗೋಸ್ಕರ ಭಾರತವನ್ನು ನಿಂದಿಸಲು ಅರ್ನಬ್ ಗೋಸ್ವಾಮಿ ಪಾಕಿಸ್ತಾನದ ಪ್ಯಾನಲಿಸ್ಟ್ಗಳಿಗೆ ಹಣ ನೀಡುತ್ತಿದ್ದಾರೆಂದು ಪತ್ರಕರ್ತ ಹಾಮಿದ್ ಮೀರ್ ಆರೋಪಿಸಿದ್ದಾರೆ.
TRP ರೇಟಿಂಗ್ಸ್ ಹೆಚ್ಚಿಸಲು ಆರ್ನಬ್ ಸಾಕಷ್ಟು ಅನ್ಯ ಮಾರ್ಗಗಳನ್ನು ಅನುಸರಿಸಿದ್ದಾರೆ. ಲೈವ್ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಬುದ್ಧಿಜೀವಿಗಳು, ರಾಜಕಾರಣಿಗಳು ಮತ್ತು ಪತ್ರಕರ್ತರಿಗೆ ಹಣ ನೀಡಿ ಭಾರತವನ್ನು ಭಾರತವನ್ನು ನಿಂದಿಸಲು ಮೂರು ನಿಮಿಷ ಅವಕಾಶ ನೀಡುತ್ತಾರೆ. ಬಳಿಕ ಕೊನೆಯ ನಿಮಿಷಗಳಲ್ಲಿ ಅರ್ನಬ್ ಪಾಕಿಸ್ತಾನವನ್ನು ನಿಂದಿಸುತ್ತಾರೆ ಹಾಗ ಅವರ TRP ರೇಟಿಂಗ್ ಮೇಲಕ್ಕೆ ಹೋಗುತ್ತದೆ.
ಈ ಟ್ರಿಕ್ ಕುರಿತು ಅನೇಕ ಜನರು ನನಗೆ ಹೇಳಿದರು ಎಂದು ಹಾಮಿದ್ ಮೀರ್ ಹೇಳಿದ್ದಾರೆ.
Arnab Goswami invites Pakistanis on Republic TV and pay them to abuse India?
— Abhishek (@AbhishekSay) June 9, 2025
Pakistani journalist Hamid Mir says many politicians and journalists told him that Arnab pays them to abuse India in TV debates, after which Indian panelists are given more time to respond, all for TRP. pic.twitter.com/dlJqsta7NN
ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ರಿಪಬ್ಲಿಕ್ ಟಿವಿಯಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ನನಗೆ ತಿಳಿಯಿತು.
ಅರ್ನಬ್ ಈಗ ಪತ್ರಕರ್ತನಾಗಿ ಉಳಿದಿಲ್ಲ. ಪಾಕ್ ಬೈದು TRP ಹೆಚ್ಚಳ ಮಾಡಿಕೊಳ್ಳುವುದೇ ಅವರ ಉದ್ದೇಶ. ಅವರ ಯಾವ ಮಾತಿಗೂ ನಾನು ಪ್ರತಿಕ್ರಿಯೆ ನೀಡೋದಿಲ್ಲ ಎಂದು ಹಾಮಿದ್ ಮೀರ್ ತಿಳಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೇಷನ್ ವಾಂಟ್ಸ್ ಟೂ ನೋ ಎಂಬಂತೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.