ಘೋಲ್ತಿರ್: ಉತ್ತರಾಖಂಡದ ರುದ್ರಪ್ರಯಾಗ ಸಮೀಪದ ಘೋಲ್ತಿರ್ ಬಳಿ ಅಲಕಾನಂದ ನದಿಗೆ ಬಸ್ (Bus) ಉರುಳಿದ್ದು, ಭಾರಿ ಅವಘಡ ಸಂಭವಿಸಿದೆ.
ಮಾಹಿತಿಯ ಪ್ರಕಾರ 11 ಕ್ಕೂ ಹೆಚ್ಚು ಪ್ರಯಾಣಿಕರು ಕಾಣೆಯಾಗಿದ್ದಾರೆ. ಅನೇಕ ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಈ ಘಟನೆ ಘೋಲ್ತಿರ್ನಲ್ಲಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿದ ಬಸ್ ರುದ್ರಪ್ರಯಾಗ ಜಿಲ್ಲೆಯ ಘೋಲ್ತಿರ್ ಪ್ರದೇಶದ ಅಲಕ್ನಂದಾ ನದಿಗೆ ಬಿದ್ದಿದೆ.
ಬಸ್ ಟೆಂಪೋ ಟ್ರಾವೆಲರ್ಸ್ಗೆ ಸೇರಿದ್ದು, ಎಲ್ಲಾ ಪ್ರಯಾಣಿಕರು ಬದರಿನಾಥಕ್ಕೆ ಭೇಟಿ ನೀಡಲು ಹೋಗುತ್ತಿದ್ದರು ಎಂದು ಹೇಳಲಾಗುತ್ತಿದೆ.
ಒಟ್ಟು 19 ಸೀಟುಗಳ ಬಸ್ನಲ್ಲಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಅವರಲ್ಲಿ ಏಳು ಜನರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಒಬ್ಬರು ಸಾವನ್ನಪ್ಪಿದ್ದಾರೆ.
ಈ ಘಟನೆ ಬೆಳಿಗ್ಗೆ 7:40 ರ ಸುಮಾರಿಗೆ ಸಂಭವಿಸಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ ಆಗಿವೆ.