ರಾಯಚೂರು: ಕಳೆದ 35 ದಿನಗಳಲ್ಲಿ ಮಂತ್ರಾಲಯದ (Mantralaya) ರಾಯರ ಮಠಕ್ಕೆ ಭರ್ಜರಿ ಆದಾಯ ಹರಿದು ಬಂದಿದೆ.
ರಾಘವೇಂದ್ರ ಸ್ವಾಮಿ ಮಠದ ಕಾಣಿಕೆ ಹುಂಡಿ ಎಣಿಕೆ ಮಾಡಲಾಗಿದ್ದು, ಇದೇ ಮೊದಲ ಬಾರಿಗೆ 5 ಕೋಟಿ ರುಪಾಯಿ ಮೀರಿ ದಾಖಲೆಯ ಕಾಣಿಕೆ ಸಂಗ್ರಹ ಆಗಿದೆ.
ಒಟ್ಟು 5,28,39,538 ರು. ಕಾಣಿಕೆ ರೂಪದಲ್ಲಿ ಭಕ್ತರು ರಾಯರಿಗೆ ಸಮರ್ಪಿಸಿದ್ದಾರೆ.
ಒಟ್ಟು ಕಾಣಿಕೆಯಲ್ಲಿ 5,13,04,958 ರು. ನಗದು ನೋಟುಗಳು ಹಾಗೂ 15,34,580 ರು. ನಾಣ್ಯಗಳು ಸಂಗ್ರಹ ಆಗಿದೆ. 43 ಗ್ರಾಂ ಚಿನ್ನ, 1837 ಗ್ರಾಂ ಬೆಳ್ಳಿ ಕಾಣಿಕೆ ಸಲ್ಲಿಕೆಯಾಗಿದೆ. ಕರ ಸೇವಕರು, ಮಠದ ಭಕ್ತರು, ಸಿಬ್ಬಂದಿ ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು.