Donation done with Arrogance

ಹರಿತಲೇಖನಿ ದಿನಕ್ಕೊಂದು ಕಥೆ: ಅಹಂಕಾರದಿಂದ ಮಾಡುವ ದಾನ

Harithalekhani; ದಾನವನ್ನು ಅಹಂಕಾರ ಅರ್ಥಾತ್ ‘ನನ್ನ’ ತನದಿಂದ ನೀಡಬಾರದು. ಅಹಂಕಾರದಿಂದ ಮಾಡಿರುವ ದಾನಕ್ಕೆ ಯಾವುದೇ ಲಾಭವಿರುವುದಿಲ್ಲ. ಇದರ ಮಹತ್ವವನ್ನು ಒಂದು ಕಥೆಯಿಂದ ತಿಳಿದುಕೊಳ್ಳೋಣ.

ಮಹಾಭಾರತ ಕಾಲದ ಕಥೆಯಾಗಿದೆ. ಒಬ್ಬ ಬ್ರಾಹ್ಮಣನು ಭಿಕ್ಷೆಯನ್ನು ಬೇಡಿ ತನ್ನ ಕುಟುಂಬದವರ ಹೊಟ್ಟೆಯನ್ನು ತುಂಬಿಸುತ್ತಿದ್ದನು. ಒಮ್ಮೆ ಆ ಬ್ರಾಹ್ಮಣ ಹಾಗೂ ಅವನ ಕುಟುಂಬದವರು ಊಟವನ್ನು ತಯಾರಿಸುತ್ತಿದ್ದರು.

ಅದೇ ಸಮಯದಲ್ಲಿ ಒಬ್ಬ ವೃದ್ಧ ವ್ಯಕ್ತಿ ಅವರ ಮನೆಯ ಬಾಗಿಲಿಗೆ ಬಂದನು. ಅವನು ಹಸಿದಿದ್ದನು ಮತ್ತು ಅವನು ಭಿಕ್ಷೆಯಲ್ಲಿ ಏನಾದರೂ ತಿನ್ನಲು ಕೊಡುವಂತೆ ಕೇಳಿದನು. ಬ್ರಾಹ್ಮಣ ಕುಟುಂಬದವರು ತಮ್ಮ ಸಂಪೂರ್ಣ ಊಟವನ್ನು ಆ ವೃದ್ಧ ಅತಿಥಿಗೆ ಅರ್ಪಿಸಿದರು. ಆ ವೃದ್ಧ ಅತಿಥಿ ಅನ್ನವನ್ನು ಗ್ರಹಣ ಮಾಡಿ ತೃಪ್ತನಾದನು. ತದನಂತರ ಅತಿಥಿಯು ತನ್ನ ಕೈಗಳನ್ನು ತೊಳೆದನು.

ಅದೇ ಸಮಯದಲ್ಲಿ ಅಲ್ಲಿಗೆ ಒಂದು ಮುಂಗುಸಿ ಬಂದಿತು ಮತ್ತು ಎಲ್ಲಿ ಆ ಅತಿಥಿಯು ಕೈತೊಳೆದಿದ್ದನೋ, ಆ ಸ್ಥಾನದಲ್ಲಿ ಬಿದ್ದ ನೀರಿನಲ್ಲಿ ಆ ಮುಂಗುಸಿ ಹೊರಳಾಡತೊಡಗಿತು. ಮುಂಗುಸಿಯ ಅರ್ಧಶರೀರ ಬಂಗಾರದ ಬಣ್ಣದ್ದಾಯಿತು. ಈ ವಿಷಯವು ಅರಣ್ಯದಲ್ಲಿ ಹರಡುವ ಬೆಂಕಿಯಂತೆ ಎಲ್ಲೆಡೆಯೂ ಹಬ್ಬಿತು.

ಧರ್ಮರಾಜ ಯುಧಿಷ್ಠಿರನಿಗೂ ಈ ವಿಷಯ ತಲುಪಿತು. ಆಗ ಅವನ ಮನಸ್ಸಿನಲ್ಲಿ ‘ನಾನಂತೂ ಲಕ್ಷಾಂತರ ಜನರಿಗೆ ಪ್ರತಿದಿನ ಊಟವನ್ನು ಹಾಕುತ್ತೇನೆ. ಒಂದು ವೇಳೆ ಇಲ್ಲಿಗೆ ಬಂದು ಆ ಮುಂಗುಸಿ ಹೊರಳಾಡಿದರೆ ಅದರ ಉಳಿದರ್ಧ ಭಾಗವೂ ಬಂಗಾರದ ಬಣ್ಣವಾಗುವುದು’ ಎಂದು ವಿಚಾರ ಮಾಡಿದರು.

ಯುಧಿಷ್ಠಿರನು ಒಂದು ಅನ್ನ ಛತ್ರವನ್ನು ಆಯೋಜಿಸಿದನು. ಅಲ್ಲಿಯೂ ಅದೇ ಮುಂಗುಸಿ ಬಂದಿತು ಮತ್ತು ಅದು ಅದೇ ರೀತಿ ಮಾಡಿತು; ಆದರೆ ಅದರ ಉಳಿದರ್ಧ ಶರೀರ ಮೂಲ ಬಣ್ಣದ್ದಾಗಿಯೇ ಉಳಿಯಿತು. ಧರ್ಮರಾಜನು ಇದರ ಕಾರಣವನ್ನು ಕೇಳಿದಾಗ, ಭಗವಾನ ಶ್ರೀಕೃಷ್ಣನು ‘ಹೇ ರಾಜಾ! ನೀನು ಎಷ್ಟು ಜನರಿಗೆ ಭೋಜನವನ್ನು ಬಡಿಸಬಲ್ಲೆ, ಅನ್ನದಾನ ಮಾಡಬಲ್ಲೆ ಎನ್ನುವ ಅಹಂಕಾರ ನಿನಗೆ ಇದೆ.

ಈ ಅಹಂಕಾರದ ಕಾರಣವೇ ಈ ಮುಂಗುಸಿಯ ಶರೀರ ಬಂಗಾರದ ಬಣ್ಣಕ್ಕೆ ತಿರುಗಲಿಲ್ಲ. ಆ ಬಡ ಬ್ರಾಹ್ಮಣನ ಕುಟುಂಬದವರು ಮಾತ್ರ ಮನೆಗೆ ಬಂದ ಅತಿಥಿ ಬರಿಹೊಟ್ಟೆಯಲ್ಲಿ ಹಿಂದಿರುಗಿ ಹೋಗಬಾರದು ಎಂದು ತಾವು ಬರಿಹೊಟ್ಟೆಯಲ್ಲಿದ್ದರೂ ಅತಿಥಿಗೆ ಊಟವನ್ನು ಬಡಿಸಿದರು. ಅದರ ಹಿಂದೆ ಯಾವುದೇ ಸ್ವಾರ್ಥ ಅಥವಾ ಅಹಂಕಾರವಿರಲಿಲ್ಲ’ ಎಂದು ಹೇಳಿದನು.

ಕೃಪೆ: ಸಾಮಾಜಿಕ ಜಾಲತಾಣ.

ರಾಜಕೀಯ

ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕರ ಬಂಡಾಯವೆಂದು ಜೆಡಿಎಸ್ ಪ್ರತಿಭಟನೆ

ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕರ ಬಂಡಾಯವೆಂದು ಜೆಡಿಎಸ್ ಪ್ರತಿಭಟನೆ

ರಾಜ್ಯ ಕಾಂಗ್ರೆಸ್ ಸರ್ಕಾರ (Congress government) ಅತೀವ ಬ್ರಷ್ಟಾಚಾರದ ಮುಳುಗಿದ್ದು, ವಿಧಾನಸಭೆ ಕ್ಷೇತ್ರಗಳ ಅಭಿವೃದ್ಧಿಗೆ ಬಿಡಿಗಾಸು ಕೊಡಲು ಹಣವಿಲ್ಲದ ದುಸ್ಥಿತಿಯಲ್ಲಿ ಇದೆ ಎಂದು ಜೆಡಿಎಸ್ (JDS)

[ccc_my_favorite_select_button post_id="110424"]
ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್‌ ಅವರಿಗೆ ಬಿ.ವೈ.ವಿಜಯೇಂದ್ರ ಸನ್ಮಾನ

ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್‌ ಅವರಿಗೆ ಬಿ.ವೈ.ವಿಜಯೇಂದ್ರ ಸನ್ಮಾನ

ಬಮೂಲ್ (Bamul) ನಿರ್ದೇಶಕ ಸ್ಥಾನಕ್ಕೆ ದೊಡ್ಡಬಳ್ಳಾಪುರದಿಂದ ವಿಜೇತರಾದ ಬಿ.ಸಿ.ಆನಂದ್ ಕುಮಾರ್ (B.C.Ananad Kumar) ಅವರನ್ನು ಬಿ.ವೈ.ವಿಜಯೇಂದ್ರ (B.Y.Vijayendra)

[ccc_my_favorite_select_button post_id="110404"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ದೊಡ್ಡಬಳ್ಳಾಪುರ: ಗೋಣಿ ಚೀಲದಲ್ಲಿ ಅಪರಿಚಿತ ಶವ ಪತ್ತೆ.. !

ದೊಡ್ಡಬಳ್ಳಾಪುರ: ಗೋಣಿ ಚೀಲದಲ್ಲಿ ಅಪರಿಚಿತ ಶವ ಪತ್ತೆ.. !

ದೊಡ್ಡಬಳ್ಳಾಪುರ: ನಗರದ ಹೊರವಲಯದಲ್ಲಿರುವ ಬಾಶೆಟ್ಟಿಹಳ್ಳಿ ಬಳಿ ಗೋಣಿ ಚೀಲದಲ್ಲಿ ಅಪರಿಚಿತ ಪುರುಷನ ಶವ (Unknown corpse) ಪತ್ತೆಯಾಗಿದೆ. ಬಾಶೆಟ್ಟಿಹಳ್ಳಿಯ ಪೆಟ್ರೋಲ್ ಬಂಕ್ ಹಿಂಭಾಗದ ಕಾಂಪ್ಲೆಕ್ಸ್‌ ಬಳಿ ಮೂಟೆ ಕಟ್ಟಿ ಎಸೆದಿರುವ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಸ್ಥಳಕ್ಕೆ ಎಸ್ಪಿ ಸಿಕೆ ಬಾಬಾ, ಡಿವೈಎಸ್

[ccc_my_favorite_select_button post_id="110342"]
ದೊಡ್ಡಬಳ್ಳಾಪುರ: ವಿದ್ಯುತ್ ತಂತಿ ಬಿದ್ದು ಇಬ್ಬರು ಕಾರ್ಮಿಕರ ಸ್ಥಿತಿ ಗಂಭೀರ..!

ದೊಡ್ಡಬಳ್ಳಾಪುರ: ವಿದ್ಯುತ್ ತಂತಿ ಬಿದ್ದು ಇಬ್ಬರು ಕಾರ್ಮಿಕರ ಸ್ಥಿತಿ ಗಂಭೀರ..!

ವಿದ್ಯುತ್ ತಂತಿಬಿದ್ದು ಇಬ್ಬರು ಕಾರ್ಮಿಕರು (laborer) ಗಂಭೀರವಾಗಿ ಗಾಯಗೊಂಡರುವ ಘಟನೆ ಕರೇನಹಳ್ಳಿಯಲ್ಲಿ ಮಂಗಳವಾರ ಮದ್ಯಾಹ್ನ ನಡೆದಿದೆ.

[ccc_my_favorite_select_button post_id="110354"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]