ಹರಿತಲೇಖನಿ ದಿನಕ್ಕೊಂದು ಕಥೆ: ನುಡಿದರೆ ಮುತ್ತಿನ ಹಾರದಂತಿರಬೇಕು

Nudidare muttina haradantirabeku

Harithalekhani; ಒಂದು ಊರಿನಲ್ಲಿ ಒಬ್ಬ ರಾಜನಿದ್ದ. ಆತನು ತುಂಬ ಸುಸಂಸ್ಕೃತನಾಗಿದ್ದ. ನಡೆ ನುಡಿಗಳಲ್ಲಿ ಪ್ರಜೆಗಳಿಗೆ ಒಳ್ಳೆಯ ಮಾರ್ಗದರ್ಶನಕನಾಗಿದ್ದ. ಆತನು ಆಗಾಗ್ಗೆ ಮಾರುವೇಷದಲ್ಲಿ ರಾಜ್ಯವನ್ನು ಸುತ್ತುತ್ತ, ದುಷ್ಟರನ್ನು ಶಿಕ್ಷಿಸುತ್ತ ಶಿಷ್ಟರನ್ನು ರಕ್ಷಿಸುತ್ತಿದ್ದ. ಹಾಗಾಗಿ ಆ ರಾಜ್ಯ ಸುಭಿಕ್ಷದಿಂದ ತಾಂಡವಾಡುತ್ತಿತ್ತು.

ಒಮ್ಮೆ ರಾಜನು ತನ್ನ ಸೈನಿಕರೊಂದಿಗೆ ಬೇಟೆಗಾಗಿ ಕಾಡಿಗೆ ತೆರಳಿದ್ದ. ಅಲ್ಲೂ ಕೂಡ ಅವನು ಅನವಶ್ಯಕವಾಗಿ ಪ್ರಾಣಿಗಳನ್ನು ಬೇಟೆಯಾಡುತ್ತಿರಲಿಲ್ಲ. ಯಾವುದಾದರೂ ದುಷ್ಟಪ್ರಾಣಿಯಿಂದ ತನ್ನ ಪ್ರಜೆಗಳಿಗೆ ತೊಂದರೆಯಾದರೆ ಅಂಥ ಪ್ರಾಣಿಗಳನ್ನು ಮಾತ್ರ ಹುಡುಕಿ ಕೊಲ್ಲುತ್ತಿದ್ದ. ಆ ದಿನ ರಾಜನು ತನ್ನ ಸೈನಿಕರೊಂದಿಗೆ ಎಷ್ಟು ಸುತ್ತಿದರೂ ಒಂದೇ ಒಂದು ಬೇಟೆಯೂ ಸಿಗಲಿಲ್ಲ.

ಕಾಡಿನೊಳಗೆಲ್ಲಾ ಸುತ್ತಿ, ಸುತ್ತಿ ರಾಜನಾದಿಯಾಗಿ ಎಲ್ಲರಿಗೂ ತುಂಬಾ ಬಾಯಾರಿಕೆಯಾಯಿತು. ಅವರೆಲ್ಲಾ ನೀರಿಗಾಗಿ ತುಂಬಾ ಹುಡುಕಾಡಿದರು. ಎಷ್ಟೇ ಹುಡುಕಿದರೂ ಅವರಿಗೆ ಕುಡಿಯಲು ಒಂದೇ ಒಂದು ಹನಿ ನೀರು ಕೂಡಾ ದೊರಕಲಿಲ್ಲ. ಯಾವುದೇ ಕೆರೆಯಾಗಲೀ, ಕೊಳವಾಗಲೀ, ಬಾವಿಗಳಾಗಲೀ ಅಥವಾ ಹೊಳೆಯಾಗಲೀ ಗೋಚರಿಸಲಿಲ್ಲ. ಅವರು ಹಾಗೇ ಮುಂದುವರಿಯುತ್ತ ಬಾಯಾರಿಕೆಯಿಂದ ತಮ್ಮ ಪ್ರಯಾಣವನ್ನು ಮುಂದುವರಿಸುತ್ತಿದ್ದರು.

ಆಗ ಹಾದಿಯಲ್ಲಿ ಒಬ್ಬ ಕುರುಡನು ತನ್ನ ಸ್ವಂತ ಬಾವಿಯಿಂದ ದಾರಿಹೋಕರಿಗೆಲ್ಲ ನೀರುಕೊಡುತ್ತಿದ್ದ ದೃಶ್ಯ ಕಂಡುಬಂದಿತು. ಆಗ ರಾಜನು ತನ್ನ ಸೇವಕನ ಬಳಿ ಅಲ್ಲಿಗೆ ಹೋಗಿ ಸ್ವಲ್ಪ ನೀರನ್ನು ಕೇಳಿ ತರಲು ಹೇಳಿದನು.

ಅಂತೆಯೇ ಸೇವಕನು ಅವನ ಬಳಿ ಹೋಗಿ ದರ್ಪದಿಂದ, “ಏ ಕುರುಡ, ನಮಗೆ ತುಂಬಾ ಬಾಯಾರಿಕೆಯಾಗಿದೆ, ಕುಡಿಯಲು ಒಂದು ಕೊಡ ನೀರು ಕೊಡು,” ಎಂದು ಘರ್ಜಿಸಿದ.

ಆಗ ಆ ಮುದುಕನು ಅಷ್ಟೇ ಒರಟಾಗಿ, “ಇದು ನನ್ನ ಸ್ವಂತ ಬಾವಿ. ನಾನು ಇಲ್ಲೇನೂ ನೀರನ್ನು ಮಾರಾಟಕ್ಕೆ ಇಟ್ಟಿಲ್ಲ. ಇಟ್ಟಿದ್ದರೂ ನಿನ್ನಂತಹ ಮೂರ್ಖನಿಗೆ ನಾನು ಒಂದು ಹನಿ ನೀರನ್ನೂ ಕೊಡುವುದಿಲ್ಲ. ಹೋಗು, ಹೋಗು” ಎಂದು ಘರ್ಜಿಸಿದ.

ಅಲ್ಲಿಂದ ಹಿಂತಿರುಗಿದ ಸೇವಕನು , ಆ ಮುದುಕ ತುಂಬಾ ಒರಟನೆಂದೂ, ನಾನು ಎಷ್ಟೇ ಕೇಳಿಕೊಂಡರೂ ಒಂದು ಹನಿ ನೀರನ್ನೂ ಕೊಡುವುದಿಲ್ಲ ಎಂದು ಗದರಿಸಿ ಕಳುಹಿಸಿದ ಎಂದು ರಾಜನಿಗೆ ವರದಿ ಮಾಡಿದ. ಆಗ ರಾಜನು ಸೇನಾಧಿಪತಿಯ ಕಡೆಗೆ ತಿರುಗಿ, “ನೀನು ಹೋಗಿ ಪ್ರಯತ್ನಿಸು” ಎಂದು ಆದೇಶಿಸಿದನು.

ಅಂತೆಯೇ ಸೇನಾಧಿಪತಿ೦‌ುು ವೃದ್ಧನ ಬಳಿಗೆ ಹೋಗಿ, “ಏ ಮುದುಕ, ಕಣ್ಣಿಲ್ಲದೇ ಕುರುಡನಾಗಿದ್ದರೂ, ಎಷ್ಟೊಂದು ಅಹಂಕಾರ ನಿನಗೆ. ಒಳ್ಳೆಯ ಮಾತಿನಲ್ಲಿ ನೀರನ್ನು ಕೊಟ್ಟರೆ ಸರಿ, ಇಲ್ಲದಿದ್ದರೆ ನಿನ್ನ ಗತಿ ನೆಟ್ಟಗಾಗುವುದಿಲ್ಲ” ಎಂದು ಗದರಿಸಿದ. ಆದರೆ ಆ ಮುದುಕನು ಸೇನಾದಿಕಾರಿಯ ಮಾತಿಗೆ ಕಿಂಚಿತ್ತೂ ಬೆಲೆ ಕೊಡದೇ, “ಹೋಗು, ಹೋಗು, ಇದು ನನ್ನ ಬಾವಿ, ನೀರುಕೊಡುವುದೂ ಬಿಡುವುದೂ ನನಗೆ ಸೇರಿದ್ದು. ನನ್ನನ್ನು ಬೆದರಿಸಲು ನೀನಾರು? ನೀನು ಅದೇನು ಮಾಡುವೆಯೋ ಮಾಡಿಕೋ, ನಾನು ನೋಡಿ ಕೊಳ್ಳುತ್ತೇನೆ. ನಾನಂತೂ ನಿನಗೆ ನೀರು ಕೊಡುವುದಿಲ್ಲ” ಎಂದು ಅಷ್ಟೇ ಒರಟಾಗಿ ಉತ್ತರಿಸಿದ.

ಬಾಕಿ ಸಂದರ್ಭದಲ್ಲಾದರೆ ಸೈನ್ಯಾಧಿಕಾರಿ ಹೇಳಿದಂತೆ ಒದ್ದು ತರುತ್ತಿದ್ದನೋ ಏನೋ, ಆದರೆ ಅಲ್ಲಿ ರಾಜನಿದ್ದುದರಿಂದ ಏನೂ ಮಾಡಲಾಗದೇ ಹಾಗೇ ಹಿಂತಿರುಗಿದನು. ರಾಜನಿಗೆ ಮುದುಕನ ವಿಷಯವಾಗಿ ಹೇಳುತ್ತ, “ಆ ಮುದುಕನು ಬಹಳ ವರಟನಿದ್ದಾನೆ. ಅದು ತನ್ನ ಬಾವಿ, ತಾನು ಯಾರಿಗೂ ನೀರನ್ನು ಕೊಡುವುದಿಲ್ಲ. ಅದರ ಬಳಿ ಯಾರೂ ಸುಳಿಯಬಾರದು ಎಂದು ಎಗರಾಡುತ್ತಿದ್ದಾನೆ” ಎಂದನು.

“ಈಗ ನಾನೇ ಪ್ರಯತ್ನಿಸುತ್ತೇನೆ”, ಎನ್ನುತ್ತಾ ರಾಜನು ಆ ವೃದ್ಧನ ಬಳಿಗೆ ಹೋಗಿ ಅತ್ಯಂತ ವಿನಯದಿಂದ, “ಮಹಾಸ್ವಾಮಿ, ನನಗೆ ತಾವು ಯಾರೆಂದು ತಿಳಿಯದು. ಆದರೆ ತಾವು ಈ ಬಾವಿಯ ಮಾಲೀಕರು, ಬಂದವರಿಗೆಲ್ಲ ನಿಮ್ಮ ಬಾವಿ ನೀರನ್ನು ಕೊಟ್ಟು, ಅವರ ಬಾಯಾರಿಕೆಯನ್ನು ನಿವಾರಿಸುವ ಪುಣ್ಯಾತ್ಮರು ಎಂಬುದು ತಿಳಿದಿದೆ. ನಾನು ನನ್ನ ಸೇವಕರು ತುಂಬಾ ಬಾಯಾರಿಕೆಯಿಂದ ಬಳಲುತ್ತಿದ್ದೇವೆ. ದಯಮಾಡಿ ಸ್ವಲ್ಪ ನೀರನ್ನು ಕೊಟ್ಟು ಕಾಪಾಡುತ್ತೀರಾ?” ಎಂದು ಪ್ರಾರ್ಥಿಸಿದನು.

ಕಣ್ಣಿಲ್ಲದ ಕುರುಡನಾದರೂ ಆ ವೃದ್ಧನ ಮೊಗವು ಸಂತೋಷದಿಂದ ಅರಳಿತು. ಆತನು ಅತಿಯಾದ ಶ್ರದ್ಧಾಭಕ್ತಿಯಿಂದ,

“ಸ್ವಾಮೀ, ತಾವು ಈ ದೇಶದ ಮಹಾರಾಜರಲ್ಲವೇ? ತಾವು ನೀರು ಕೇಳಿದರೆ ಇಲ್ಲ ಎನ್ನುವೆನೇ? ದಯಮಾಡಿ ಆಗಮಿಸಿ, ತಮ್ಮ ದಾಹ ಇಂಗುವತನಕ ನೀರು ಕುಡಿಯಿರಿ. ನಂತರ ತಮ್ಮ ಪರಿವಾರದೊಂದಿಗೆ ನನ್ನ ಅಳಿಲು ಆತಿಥ್ಯವನ್ನು ಸ್ವೀಕರಿಸಿ, ವಿಶ್ರಾಂತಿ ಪಡೆಯುವ ಕೃಪೆ ಮಾಡಬೇಕು” ಎಂದು ಪ್ರಾರ್ಥಿಸಿದನು.

ರಾಜ ಮತ್ತು ಅವನ ಸೈನಿಕರು ಮನಸಾರೆ ನೀರು ಕುಡಿದು ಹಣ್ಣು ಹಂಪಲು ತಿಂದು ಸಂತೃಪ್ತನಾದ ನಂತರ ರಾಜನು, “ಮಹಾತ್ಮ, ನಮ್ಮೆಲ್ಲರನ್ನೂ ಸಂತೃಪ್ತಿ ಪಡಿಸಿದುದಕ್ಕೆ ನಿನಗೆ ತುಂಬಾ ಧನ್ಯವಾದಗಳು. ಆದರೆ ನನ್ನ ಸೇವಕರ ಮಾತುಗಳಿಗೆ ಕಿವಿಗೊಡದ ನೀನು, ನನ್ನನ್ನು ರಾಜ ಎಂದು ಹೇಗೆ ಗುರುತಿಸಿದಿ” ಎಂದು ಕೇಳಿದನು.

ಅದಕ್ಕೆ ಆ ವೃದ್ಧನು, ‘ಪ್ರಭು, ನನಗೆ ನೋಡುವ ಕಣ್ಣಿಲ್ಲದಿದ್ದರೂ ಅರಿ೦ಯುವ ಹೃದಯವಿದೆ. ತಮ್ಮ ಸೇವಕರ ಮಾತುಗಳಲ್ಲಿ ಅಧಿಕಾರ, ಅಹಂಕಾರದ ಸೊಕ್ಕು ಕಾಣಿಸುತ್ತಿತ್ತು. ಆದರೆ ತಮ್ಮ ಸವಿ ಮಾತುಗಳಲ್ಲಿ ಆದರ್ಶ, ಆತ್ಮೀಯತೆ ಎದ್ದು ಕಾಣುತ್ತಿತ್ತು. ಒಬ್ಬ ರಾಜನಿಗಿರಬೇಕಾದ ವ್ಯಕ್ತಿತ್ವ ತಮ್ಮಲ್ಲಿ ಎದ್ದು ಕಾಣುತ್ತಿತ್ತು. ಅದರಿಂದ ನಾನು ನಿಮ್ಮನ್ನು ರಾಜ ಎಂದು ಗುರುತಿಸಿದೆ. ನೀವು ಇದೇ ರೀತಿ ನೂರ್ಕಾಲ ಬದುಕಿ ಬಾಳಿ’ ಎಂದು ಹಾರೈಸಿದನು.

ಅದಕ್ಕೇ ಅಲ್ಲವೇ ಹೇಳುವುದು. ‘ನುಡಿದರೆ ಮುತ್ತಿನ ಹಾರದಂತಿರಬೇಕು’ ನಾವಾಡುವ ಮಾತು ಮತ್ತು ಎಸಗುವ ಕಾರ್ಯಗಳು ನಮ್ಮ ವ್ಯಕ್ತಿತ್ವನ್ನು ನಿರೂಪಿಸುತ್ತವೆ.

ಕೃಪೆ; ಗಣೇಶ ವಂದಗದ್ದೆ ಸಾಗರ ( ಸಾಮಾಜಿಕ ಜಾಲತಾಣ)

ರಾಜಕೀಯ

ಮೋದಿ, ಶಾ ಶ್ರಮದಿಂದ 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ: ಬಿ.ವೈ. ವಿಜಯೇಂದ್ರ

ಮೋದಿ, ಶಾ ಶ್ರಮದಿಂದ 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ: ಬಿ.ವೈ. ವಿಜಯೇಂದ್ರ

ಬಿಜೆಪಿಯ (BJP) ಗತವೈಭವದ ದಿನಗಳು ದಾವಣಗೆರೆಯಲ್ಲಿ ಮರುಕಳಿಸಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (B.Y. Vijayendra) ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

[ccc_my_favorite_select_button post_id="121758"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಶೆಯಾಗಲಿದೆ. ಎಂಎಸ್ ಧೋನಿಯನ್ನು (MS Dhoni) ಮೈದಾನದಲ್ಲಿ ಕಣ್ಣುಂಬಿಸಿಕೊಳ್ಳಲು ಎದುರು ನೋಡುತ್ತಿದ್ದವರಿಗೆ ಈ ಆವೃತ್ತಿಯಲ್ಲಿ ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಆತಂಕ ಎದುರಾಗಿದೆ‌.

[ccc_my_favorite_select_button post_id="121736"]
ದೊಡ್ಡಬಳ್ಳಾಪುರ: ಕಾರಿನಲ್ಲಿ ಮಹಿಳೆ ಭಸ್ಮ ಪ್ರಕರಣ.. ಗೃಹಿಣಿಯ ಗುರುತು ಪತ್ತೆ

ದೊಡ್ಡಬಳ್ಳಾಪುರ: ಕಾರಿನಲ್ಲಿ ಮಹಿಳೆ ಭಸ್ಮ ಪ್ರಕರಣ.. ಗೃಹಿಣಿಯ ಗುರುತು ಪತ್ತೆ

ಜಿಂಕೆಬಚ್ಚಹಳ್ಳಿ ಸಮೀಪ ಶನಿವಾರ ಬೆಂಕಿಗೆ ಆಹುತಿಯಾಗಿದ್ದ ಕಾರಿನಲ್ಲಿ (Car) ಅನುಮಾನಸ್ಪದ ರೀತಿಯಲ್ಲಿ ಸುಟ್ಟು ಹೋಗಿದ್ದ ಮಹಿಳೆಯ (Woman) ಅಸ್ಥಿಪಂಜರ ಪತ್ತೆಯಾಗಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

[ccc_my_favorite_select_button post_id="121693"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]