ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಕೃಷ್ಣ ಪಕ್ಷ ದ ಏಕಾದಶಿ ಜನವರಿ.25.2025 ಶನಿವಾರ ಎಲ್ಲರಿಗೂ ಸಹ ಈ ದಿನ ಸಂಜೆಯಲ್ಲಿ ವಾರಾಹಿ ಅಮ್ಮನವರ ಪೂಜೆಯನ್ನು ಮಾಡಿ ಅನುಗ್ರಹಕ್ಕೆ ಪಾತ್ರರಾಗಬಹುದು.
ಮೇಷ ರಾಶಿ: ಅತ್ಯಂತ ಶ್ರೇಷ್ಠವಾದ ಧನಾಗಮ ಅನುಕೂಲವಾಗಿದೆ. ವಿದ್ಯಾಭ್ಯಾಸವು ಸಹ.. ಅನುಕೂಲರೊಂದಿಗೆ ಸ್ವಲ್ಪಮಟ್ಟಿನ ಕಲಹ, ದ್ವೇಷ ಭಾವನೆಗೆ ಎಡೆ ಕೊಡಬೇಡಿ. (ಪರಿಹಾರಕ್ಕಾಗಿ ಶಿವನನ್ನು ಆರಾಧನೆ ಮಾಡಿ)
ವೃಷಭ ರಾಶಿ: ಸ್ವಲ್ಪ ರೋಗ ಬಾದೆ, ಅನಾವಶ್ಯಕ ಚಿಂತೆ, ಭಾದೆಗಳ ನಿವಾರಣೆ ಗಾಗಿ ಪ್ರಾರ್ಥನೆ. ಆರಂಭಿಕವಾಗಿ ಚಿಂತೆ ಯತ್ನಾನುಕೂಲ, ಎಲ್ಲಾ ಕಾರ್ಯದಲ್ಲೂ ಯಶಸ್ಸು. (ಪರಿಹಾರಕ್ಕಾಗಿ ದುರ್ಗಾ ಮಂತ್ರವನ್ನು ಜಪಿಸಿ)
ಮಿಥುನ ರಾಶಿ: ಸ್ವಲ್ಪ ಅನಾವಶ್ಯಕ ಪೀಡೆಗಳು, ರೋಗಭಾದೆ, ಭಯ, ಆತಂಕ ಕೂಡ, ದುಃಖ ಆದರೂ ಸಹ ಕಾರ್ಯಗಳನ್ನು ಮಾಡಬೇಕೆಂಬ ಆಸಕ್ತಿ.. ದೃಢವಾದ ನಿರ್ಧಾರ, ಎತ್ತರದ ಚಿಂತೆ ಶುಭವಾಗುತ್ತದೆ. (ಪರಿಹಾರಕ್ಕಾಗಿ ಲಕ್ಷ್ಮಿನಾರಾಯಣರ ದೇವಾಲಯದಲ್ಲಿ ಪೂಜೆ ಮಾಡಿ)
ಕಟಕ ರಾಶಿ: ಚಿಂತೆಯಲ್ಲಿ ಓದಿನ ಬಗ್ಗೆ ನಿರಾಸಕ್ತಿ. ಆಗುವ ಕಾಲಕ್ಕೆ ಎಲ್ಲವೂ ಪೂರ್ಣಗೊಳ್ಳುತ್ತದೆ, ನಿಶ್ಚಯವಾಗಿ ಆಲೋಚನೆ ಮಾಡಿ ಕಾರ್ಯವನ್ನು ಶುರು ಮಾಡಿ. (ಪರಿಹಾರಕ್ಕಾಗಿ ಸಂಜೀವಿನಿ ಮಂತ್ರವನ್ನು ಜಪಿಸಿ)
ಸಿಂಹ ರಾಶಿ: ಯಾವಾಗಲೂ ವಿಶ್ರಾಂತಿಯಲ್ಲಿದ್ದರೆ ಕಾರ್ಯಗಳು ತುಂಬಾ ಕಷ್ಟ, ಹೇಳಿ ಎದ್ದು ಕಾರ್ಯದಲ್ಲಿ ಮುನ್ನುಗ್ಗಿ.. ಅನುಕೂಲವಾಗುತ್ತದೆ, ವಿದ್ಯಾಭ್ಯಾಸ ಅನುಕೂಲವಾಗಿದೆ. (ಪರಿಹಾರಕ್ಕಾಗಿ ಮಹಾ ಸರಸ್ವತಿಯ ಬೀಜ ಮಂತ್ರವನ್ನು ಜಪ ಮಾಡಿ)
ಕನ್ಯಾ ರಾಶಿ: ದುಡ್ಡಿನ ಹಿಂದೆ ಹೋಗುವುದು ಬೇಡ. ಕಳೆದು ಹೋದದಕ್ಕಾಗಿ ಚಿಂತಿಸುವುದು ಬಲವಿಲ್ಲ, ಹಾಗಾಗಿ ಇರುವುದನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಿ. ಎತ್ತರಕ್ಕೆ ಏರುತ್ತಿರಿ ಯಾವುದೇ ಸಂದೇಹವಿಲ್ಲ. (ಪರಿಹಾರಕ್ಕಾಗಿ ಆಂಜನೇಯ ಮಂತ್ರವನ್ನು ಜಪಿಸಿ)
ತುಲಾ ರಾಶಿ: ಸ್ವಲ್ಪ ರಚನೆ ಎಲ್ಲ ಕಾರ್ಯದಲ್ಲೂ ವಿರೋಧ, ಅತಿಯಾದ ಅಹಂ ಭಾವ, ಇದರಿಂದ ಸ್ವಲ್ಪ ಆರೋಗ್ಯ ತೊಂದರೆ. ಆಹಾರದಲ್ಲಿ ಸ್ವಲ್ಪ ಮಿತಿ ಇರಲಿ. ( ಪರಿಹಾರಕ್ಕಾಗಿ ಧನ್ವಂತ್ರಿ ಮಂತ್ರ ಜಪ ಮಾಡಿ)
ವೃಶ್ಚಿಕ ರಾಶಿ: ಅನಾವಶ್ಯಕವಾಗಿ ಜನರನ್ನು ಅತಿಯಾಗಿ ಹಚ್ಚಿಕೊಳ್ಳಬೇಡಿ. ಸ್ವಲ್ಪ ದುಃಖದ ಜೊತೆ ಕಷ್ಟದ ವಾತಾವರಣ, ಇರುತ್ತದೆ ಎಲ್ಲವೂ ಭಾನುವಾರದಿಂದ ಶುಭವಾಗುತ್ತದೆ. ಧನಾಗಮನ ಸ್ವಲ್ಪ ಕಷ್ಟ. ( ಪರಿಹಾರಕ್ಕಾಗಿ ನಾರಾಯಣನ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿ )
ಧನಸ್ಸು ರಾಶಿ: ಅನಾವಶ್ಯಕ ಚಿಂತೆ ಬೇಡ ಒಳ್ಳೆಯದಾಗಿದೆ, ಮುಂದು ಒಳ್ಳೆಯದಾಗುತ್ತದೆ.. ಎಚ್ಚರಿಕೆ ಬಹಳ ಅಗತ್ಯ, ಯೋಚಿಸಿ ಕಾರ್ಯಗಳನ್ನು ಮಾಡಿ ಶುಭವಾಗುತ್ತದೆ. (ಪರಿಹಾರಕ್ಕಾಗಿ ಔದುಂಬರ ವೃಕ್ಷಕ್ಕೆ ಪೂಜೆ ಮಾಡಿ)
ಮಕರ ರಾಶಿ: ಒಳ್ಳೆಯ ಶುಭ ಕ್ಷಣಗಳು ಆದರೆ ಸ್ವಲ್ಪ ಕೊರತೆ. ಮನಸ್ಸಿನಲ್ಲಿ ವಿಕಾರಗಳು ಧನಾಗಮ ಉತ್ತಮವಾಗಿದೆ. ಆದರೆ ಅಹಂಕಾರದತ್ತ ಮನಸ್ಸುವಾಲುತ್ತದೆ ಎಚ್ಚರಿಕೆ. ( ಪರಿಹಾರಕ್ಕಾಗಿ ಮಹಾ ಸುದರ್ಶನ ಹೋಮವನ್ನು ಮಾಡಿಸಿಕೊಳ್ಳಿ)
ಕುಂಭ ರಾಶಿ: ಜೀವನ ಬಹಳ ಚಿಕ್ಕದು ಎಂಬ ಧ್ವನಿ ಗೊತ್ತಾಗುತ್ತದೆ. ನಿಮಗೆ ಹತ್ತಿರದವರು ಸ್ವಲ್ಪ ದೂರವಾಗುತ್ತಾರೆ. ಕಾರ್ಯಗಳಲ್ಲಿ ಸ್ವಲ್ಪ ಮನಸ್ಸನ್ನು ಕೊಟ್ಟು ಕೆಲಸ ಮಾಡಿ. (ಪರಿಹಾರಕ್ಕಾಗಿ ಭೂದೇವಿಯನ್ನು ಸ್ತುತಿ ಮಾಡಿ)
ಮೀನ ರಾಶಿ: ಅನುಕೂಲವಾದ ಸಮಯ, ಭಗವಂತನ ದರ್ಶನ ಭಾಗ್ಯ. ಎಲ್ಲಾ ಕಾರ್ಯದಲ್ಲೂ ಧರ್ಮದಿಂದ ಆಚರಣೆ ಮತ್ತು ಸತ್ ಕೀರ್ತಿ ಉಂಟಾಗುತ್ತದೆ. ಯಶಸ್ಸು, ಕೀರ್ತಿ, ವಿದ್ಯೆ,. ಎಲ್ಲವೂ ಪ್ರಾಪ್ತಿಯಾಗುತ್ತದೆ. (ಪರಿಹಾರಕ್ಕಾಗಿ ಕುಲದೇವತೆಯ ಸ್ತುತಿ ಮಾಡಿ)
ರಾಹುಕಾಲ: 9-00AM ರಿಂದ 10-30AM
ಗುಳಿಕಕಾಲ: 1-30 PM ರಿಂದ 3-00 PM
ಯಮಗಂಡಕಾಲ: 10-30AMರಿಂದ 12-00PM
ಹೆಚ್ಚಿನ ಮಾಹಿತಿಗಾಗಿ: ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ ಎಸ್ ಶರ್ಮ,
ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572