Daily story: Infatuation that hurts

ಹರಿತಲೇಖನಿ ದಿನಕ್ಕೊಂದು ಕಥೆ: ನೋವನ್ನುಂಟು ಮಾಡುವ ಮೋಹ

Daily story; ಇತ್ತೀಚಿಗೆ ಒಂದು ಬೋಡೊ ಭಾಷೆಯ ಕಥೆಯನ್ನು ಇಂಗ್ಲಿಷ್‌ನಲ್ಲಿ ಓದಿದೆ. ಧುಬಡಿ ಎಂಬ ಊರಿನಲ್ಲಿ ಶಾಲಾ ಇನ್‌ಸ್ಪೆಕ್ಟರ್‌ ಕಚೇರಿಯಲ್ಲಿ ಯಾದವ ಬೋರಾ ಎಂಬ ವ್ಯಕ್ತಿ ಮುಖ್ಯ ಗುಮಾಸ್ತ.

ಈತನ ಮೇಲೆ ಸಬ್‍ ಇನ್‌ಸ್ಪೆಕ್ಟರ್‌ ಮತ್ತು ಇನ್‌ಸ್ಪೆಕ್ಟರ್‌ ಇದ್ದಾರೆ. ಯಾದವ ಬೋರಾ ಕೂರುವುದು ಕಚೇರಿಯ ಒಂದು ಮೂಲೆಯಲ್ಲಿದ್ದ ಕೊಠಡಿಯಲ್ಲಿ. ಹಳೆಯ ಮರದ ಮೇಜು, ಅದರ ಮೇಲೆ ಹಸಿರು ಪ್ಲಾಸ್ಟಿಕ್ ಬಟ್ಟೆ ಹೊದಿಸಿದ್ದಾರೆ.

ಮೇಜಿನ ಮೇಲೆಲ್ಲ ಫೈಲುಗಳು. ಒಂದೆರಡು ಬಳಸಿ, ಬಳಸಿ ನುಣುಪಾದ ಕಲ್ಲುಗಳು ಕಾಗದಗಳು ಹಾರಿ­ಹೋಗ­ದಂತೆ ನೋಡಿಕೊಳ್ಳುತ್ತವೆ.

ಮೇಜಿನ ಮಧ್ಯದಲ್ಲಿರುವುದು ಹೊಳೆಹೊಳೆವ ಕರೆಗಂಟೆ. ಯಾದವ ಬೋರಾನಿಗೆ ಈ ಕರೆಗಂಟೆ ಅಧಿಕಾರದ ಲಾಂಛನ. ಅದು ಬ್ರಿಟಿಷರ ಕಾಲದ ಗಂಟೆ.

ಬೋರಾನ ಅಧಿಕಾರಿಗಳ ಹತ್ತಿರವೂ ಕರೆಗಂಟೆ­ಗಳಿದ್ದರೂ ಅವುಗಳ ಧ್ವನಿ ಇಷ್ಟು ತೀಕ್ಷ್ಣವಾಗಿಲ್ಲ. ಅದಲ್ಲದೇ ಅವು ಹಲ­ವಾರು ಬಾರಿ ಬದಲಾಗಿವೆ. ಆದರೆ, ಬೋರಾನ ಕರೆಗಂಟೆ ಮಾತ್ರ ದಶಕ­ಗಳಿಂದ ಹಾಗೆಯೇ ಇದೆ.

ತಾನು ಎರಡನೇ ದರ್ಜೆ ಗುಮಾಸ್ತನಾಗಿ­ದ್ದಾಗಿ­ನಿಂದ ಈ ಕರೆಗಂಟೆಯನ್ನು ಕೇಳಿದ್ದಾನೆ. ತಾನೂ ಮುಂದೆ ಮುಖ್ಯ ಗುಮಾಸ್ತ­ನಾದ ಮೇಲೆ ತನಗೂ ಆ ಕರೆಗಂಟೆ ಒತ್ತುವ ಅವಕಾಶ ಬರುತ್ತದೆಂದು ಕನಸು ಕಂಡಿದ್ದಾನೆ.

ಅದೇನು ಶಕ್ತಿ ಆ ಕರೆಗಂಟೆಗೆ! ಅದರ ಸ್ಪ್ರಿಂಗ್‌ಗಳನ್ನು ತಿರುಗಿಸಿ ಬಟನ್ ಮೇಲೆ ಬೆರಳಿಟ್ಟು ಒತ್ತಿದರೆ ಇಡೀ ಆಫೀಸಿನ ಮೂಲೆ ಮೂಲೆಗೂ ಅದರ ಧ್ವನಿ ಕೇಳಿಸುತ್ತದೆ. ಅಷ್ಟೇ ಅಲ್ಲ, ಮುಖ್ಯ ಗುಮಾಸ್ತರ ಸೇವೆಗೆಂದು ಇದ್ದ ಮೂವರಲ್ಲಿ ಒಬ್ಬ ಓಡಿ ಬರುತ್ತಾನೆ.

ಕೈ ಕಟ್ಟಿ, ‘ಏನಪ್ಪಣೆ ಬಾಬೂ?’ ಎಂದು ವಿನಯದಿಂದ ಕೇಳುತ್ತಾನೆ. ಆರಡಿ ಎತ್ತರದ ಮನುಷ್ಯ­ನೊಬ್ಬನನ್ನು ತನ್ನ ಧ್ವನಿಯಿಂದ ಓಡಿ ಬರುವಂತೆ ಮಾಡುವ ಕರೆಗಂಟೆಯ ಶಕ್ತಿ ಸಣ್ಣದೇ?

ಇಂದು ಯಾದವ ಬೋರಾ ಕರೆ­ಗಂಟೆಯನ್ನು ಮೇಲಿಂದ ಮೇಲೆ ಬಾರಿಸುತ್ತಿದ್ದಾನೆ. ಸದ್ದು ಕೇಳಿ ಒಳಬಂದ ಸೇವಕನಿಗೆ ಒಂದು ಕೆಲಸ ಹೇಳಿ ಆತ ಕೊಠಡಿಯಿಂದ ಹೊರಡುವ ಮೊದಲೇ ಮತ್ತೊಮ್ಮೆ ಗಂಟೆ ಬಾರಿಸುತ್ತಾನೆ.

ಇವರ ಕೈಕೆಳಗೆ ಕೆಲಸಮಾಡುವ ಮತ್ತೊಬ್ಬ ಗುಮಾಸ್ತ ಕೇಳಿದ, ‘ಬಾಬೂ ಇವತ್ತು ನಿಮ್ಮ ಕರೆಗಂಟೆ ನಿಲ್ಲುವಂತೆ ಕಾಣುವುದಿಲ್ಲ. ಏನು ವಿಶೇಷ?’ ದುಃಖ ತುಂಬಿದ ಧ್ವನಿಯಲ್ಲಿ ಯಾದವ ಬೋರಾ ಹೇಳಿದ, ‘ನಿನಗೆ ಇದರ ಮರ್ಮ ಅರ್ಥವಾಗುವುದಿಲ್ಲ ಮಗೂ. ಇಂದು ನನ್ನ ಸೇವೆಯ ಕೊನೆಯ ದಿನ.

ನಾಳೆಯಿಂದ ನಾನು ಕಚೇರಿಗೆ ಬರುವುದಿಲ್ಲ. ಇಂದೇ ನನ್ನ ಪ್ರೀತಿಯ ಈ ಕರೆಗಂಟೆಯನ್ನು ಬಾರಿಸುವ ಕೊನೆಯ ದಿನ. ನಾಳೆ ನಾನು ಕರೆಗಂಟೆ ಇಲ್ಲದೇ ಹೇಗಿರುತ್ತೇನೋ ತಿಳಿಯದು’. ಹೀಗೆ ಹೇಳಿ ತನ್ನ ಕರವಸ್ತ್ರದಿಂದ ಆ ಕರೆ­ಗಂಟೆಯನ್ನು ನಯವಾಗಿ ಒರೆಸಿ ಅದರ ಮೇಲೆ ಬೆರಳಾಡಿಸಿದ.

ಈ ಮಾತು­ಗಳನ್ನು ಕೇಳುತ್ತಿದ್ದ ಸೇವಕನೊಬ್ಬ ಹೇಳಿದ, ‘ಬಾಬೂ, ನಾವೆಲ್ಲ ಸಾಹೇಬ­ರಿಗೆ ಹೇಳಿ ಈ ಕರೆಗಂಟೆಯನ್ನು ನಿಮಗೇ ಕೊಡುವಂತೆ ಕೇಳುತ್ತೇವೆ. ನೀವು ಮನೆಯಲ್ಲಿ ಕುಳಿತು ಗಂಟೆ ಬಾರಿಸಿದರೆ ನಿಮ್ಮ ಹೆಂಡತಿ, ಮಕ್ಕಳು ಓಡಿ ಬರುತ್ತಾರೆ’. ಎಲ್ಲರೂ ನಕ್ಕರು. ಆದರೆ ಯಾದವ ಬೋರಾ ನಗಲಿಲ್ಲ. ಮರುದಿನ ಯಾದವ ಬೋರಾನಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಆಫೀಸಿನಿಂದ ಹೊರಡುವಾಗ ತಮ್ಮ ಕರೆಗಂಟೆಯನ್ನು ಮೇಜಿನ ಮೇಲೆಯೇ ಇಟ್ಟು ಹೊರಟಾಗ ತುಂಬ ಹತ್ತಿರದವರು ಯಾರೋ ತೀರಿ­ಹೋದಂತೆ ಭಾಸವಾಗಿ ಎದೆ ಭಾರವಾ­ಯಿತು. ಎದೆ ಬಡಿತ ಹೆಚ್ಚಾಯಿತು. ಮನೆಗೆ ಬಂದಾಗ ಹೆಂಡತಿ, ಮಕ್ಕಳು ಸ್ವಾಗತಿಸಿದರು.

ಯಾದವ ಬೋರಾ ಕುರ್ಚಿಯಲ್ಲಿ ಕುಸಿದು ಕುಳಿತರು. ನಾಳೆಯಿಂದ ಅಧಿಕಾರವಿಲ್ಲ, ಅದರ ಸಂಕೇತವಾದ ಕರೆಗಂಟೆಯಿಲ್ಲ ಎಂಬು­ದನ್ನು ಕಲ್ಪಿಸಲೂ ಸಾಧ್ಯವಾಗಲಿಲ್ಲ. ಅಷ್ಟು ಹೊತ್ತಿಗೆ ಆಫೀಸಿನ ಸೇವಕ ಬಂದ. ‘ಬಾಬೂ, ನಮ್ಮ ಸಾಹೇಬರು, ನೀವು ಅಷ್ಟು ಪ್ರೀತಿಸಿದ ಕರೆಗಂಟೆಯನ್ನು ನಿಮಗೇ ಕೊಡಲು ಹೇಳಿ ಕಳುಹಿಸಿದ್ದಾರೆ, ದಯವಿಟ್ಟು ಸ್ವೀಕರಿಸಿ’ ಎಂದು ಹೇಳಿ ಕರೆಗಂಟೆಯನ್ನು ಕೊಟ್ಟು ಹೋದ. ಬೋರಾನಿಗೆ ಸಂತೋಷದ ಕಾಮನ­ಬಿಲ್ಲು ಕಾಣಿಸಿತು, ಅವೇಶ ಗಗನ­ಕ್ಕೇರಿತು, ಉಸಿರಾಡಲು ಅಸಾಧ್ಯ­ವೆನಿಸಿತು.

ಆದರೂ ನಿಧಾನವಾಗಿ ಬಟನ್ ಮೇಲೆ ಬೆರಳಿಟ್ಟು ಒತ್ತಿದ. ಅದರ ತೀಕ್ಷ್ಣ ಶಬ್ದ ಮನೆಯಲ್ಲಿ ಅನುರಣಿಸಿತು. ಮೊದಲೆಂದೂ ಇಂಥ ಶಬ್ದ ಕೇಳಿರದ ಹೆಂಡತಿ ಮಕ್ಕಳು ಓಡಿ ಬಂದರು. ಯಾದವ ಬೋರಾನ ಬೆರಳು ಇನ್ನೂ ಕರೆಗಂಟೆಯ ಬಟನ್ ಮೇಲೆಯೇ ಇತ್ತು. ಆದರೆ ಅತಿಯಾದ ಅವೇಶದ ಹೃದಯಾಘಾತದಿಂದ ಅವನ ಪ್ರಾಣಪಕ್ಷಿ ಮಾತ್ರ ದೇಹದಲ್ಲಿರಲಿಲ್ಲ.

ಮೋಹದಿಂದ ಪಾರಾಗುವುದು ಬಹಳ ಕಷ್ಟ. ಆದರೆ ಅದನ್ನು ಮಿತಿಯಲ್ಲಿ­ಡು­ವುದು ಕ್ಷೇಮ. ಮೋಹಕ್ಕೂ ನೋವಿಗೂ ಅತ್ಯಂತ ನಿಕಟ ಸಂಬಂಧ. ಮೋಹ ಹೆಚ್ಚಾದಷ್ಟೂ ನೋವು ಅದರ ನೆರಳಲ್ಲೇ ಬಲಿಯುತ್ತದೆ. ಯಾವುದೇ ವಸ್ತು, ವ್ಯಕ್ತಿಯ ಜೊತೆಗಿನ ಅತಿಯಾದ ಮೋಹ, ಆ ವಸ್ತು, ವ್ಯಕ್ತಿ ಮರೆಯಾ­ದೊಡನೆ ನೋವಾಗಿ ಅಮರಿಕೊಳ್ಳು­ತ್ತದೆ, ಜೀವ ಹಿಂಡುತ್ತದೆ.

ಸ್ನೇಹಿತರೆ ಯಾವುದೇ ವಸ್ತು, ವ್ಯಕ್ತಿ, ಹೊನ್ನು, ಮಣ್ಣು ಅಥವಾ ಇನ್ನಾವುದೇ ವಸ್ತುವಿನ ಮೇಲೆ ಪ್ರೀತಿ ಇರಲಿ.ಆದರೆ ಅತಿಯಾದ ಮೋಹ ಬೇಡ. ಏನಂತೀರಿ.

ಕೃಪೆ; ಸಾಮಾಜಿಕ ಜಾಲತಾಣ

ರಾಜಕೀಯ

ಭಾರತ ಯುದ್ಧವನ್ನು ಕೊನೆಗೊಳಿಸಬಹುದು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಭಾರತ ಯುದ್ಧವನ್ನು ಕೊನೆಗೊಳಿಸಬಹುದು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat) ಅವರು ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷವನ್ನು ಭಾರತವು ಕೊನೆಗೊಳಿಸಬಹುದು ಎಂದು ಶುಕ್ರವಾರ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಹೆಗಲಿಗೆ ಜವಾಬ್ದಾರಿ ಹೊರೆಸಿದ್ದಾರೆ.

[ccc_my_favorite_select_button post_id="120350"]
ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ತುಘಲಕ್‌ ನೀತಿಗಳಿಂದಲೇ ದುರಾಡಳಿತಕ್ಕೆ ಹೆಸರಾಗಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಇದರಿಂದ ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ (R. Ashoka)

[ccc_my_favorite_select_button post_id="120234"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ಪೊಲೀಸ್‌ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು..!: ಲಾಕಪ್ ಡೆತ್ ಆರೋಪ

ಪೊಲೀಸ್‌ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು..!: ಲಾಕಪ್ ಡೆತ್ ಆರೋಪ

ಯುಗಾದಿ ಹಬ್ಬದ ದಿನ ಜೂಜಾಟದಲ್ಲಿ ತೊಡಗಿದ್ದವರ ಬಂಧಿಸಿದ್ದ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದು, ಬಂಧಿತರಲ್ಲಿ ಓರ್ವ ಸಾವನಪ್ಪಿರುವ ಕಾರಣ, ಲಾಕಪ್ ಡೆತ್ (lockup death) ಆರೋಪ ಕೇಳಿಬಂದಿದೆ.

[ccc_my_favorite_select_button post_id="120325"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕ್ಯಾಂಟರ್..ಕಂಟೈನರ್ ನಡುವೆ ಅಪಘಾತ.. ಬೈಕ್ ಸವಾರನಿಗೆ ಗಂಭೀರ ಪೆಟ್ಟು..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕ್ಯಾಂಟರ್..ಕಂಟೈನರ್ ನಡುವೆ ಅಪಘಾತ.. ಬೈಕ್ ಸವಾರನಿಗೆ ಗಂಭೀರ ಪೆಟ್ಟು..!

ಬೆಳ್ಳಂಬೆಳಗ್ಗೆ ಕ್ಯಾಂಟರ್ ಹಾಗೂ ಕಂಟೈನರ್ ನಡುವೆ ಡಿಕ್ಕಿ ಸಂಭವಿಸಿ (Accident), ಬೈಕ್ ಸವಾರ ಗಾಯಗೊಂಡಿರುವ ಘಟನೆ ಚನ್ನಾದೇವಿ ಅಗ್ರಹಾರದ ಬಳಿ ಇಂದು ಮುಂಜಾನೆ 5,30 ರ ವೇಳೆಗೆ ಸಂಭವಿಸಿದೆ.

[ccc_my_favorite_select_button post_id="120173"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!