ನೆಲಮಂಗಲ (harithalekhani); ಸಂಸದರ ಸ್ಥಳೀಯ ಪ್ರದೇಶ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ತಾಲ್ಲೂಕಿನ ಅರಿಶಿನಕುಂಟೆ ವಾರ್ಡ್ ನಂ 31ರ ಆದರ್ಶ ನಗರದ ಮಾರುತಿ ಸರ್ಕಲ್ ಬಳಿ ಹಾಗೂ ಶ್ರೀ ಸಾಯಿ ರಾಮ್ ಲೇಔಟ್ ನ ಬಸವನಹಳ್ಳಿ ವಾರ್ಡ್ ನಂ 22 ರಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸುವ ಕಾಮಗಾರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಸಂಸದರಾದ ಡಾ.ಕೆ ಸುಧಾಕರ್ (Dr.k.Sudhakar) ಅವರು ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ನೆಲಮಂಗಲ ಮಾಜಿ ಶಾಸಕರಾದ ಎಂ ವಿ ನಾಗರಾಜ್, ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಉಪಸ್ಥಿತರಿದ್ದರು.