Harithalekhani story: Revenge for injustice

ಹರಿತಲೇಖನಿ ದಿನಕ್ಕೊಂದು ಕಥೆ: ಅನ್ಯಾಯಕ್ಕೆ ಪ್ರತೀಕಾರ

Harithalekhani story: ಸಂತರ ದಯೆ-ಕರುಣೆಗೆ ಮಿತಿಯಿಲ್ಲ ಎಂದು ನಿಮಗೆಲ್ಲ ತಿಳಿದಿದೆ. ಆದರೆ ಅವರು ಅನ್ಯಾಯದ ವಿರುದ್ಧ ಪ್ರತೀಕಾರ ಸಹ ಮಾಡುತ್ತಾರೆ ಮತ್ತು ಅನ್ಯಾಯ ಮಾಡುವವರಿಗೆ ಶಿಕ್ಷೆಯನ್ನೂ ವಿಧಿಸುತ್ತಾರೆ ಎಂದು ಈ ಕಥೆಯಿಂದ ನಮಗೆ ಕಲಿಯಲು ಸಿಗಲಿದೆ.

ಸಮರ್ಥ ರಾಮದಾಸ ಸ್ವಾಮಿ ಒಬ್ಬ ಶ್ರೇಷ್ಠ ಸಂತರು ಮತ್ತು ಶಿವಾಜಿ ಮಹಾರಾಜರ ಗುರುಗಳೂ ಆಗಿದ್ದರು. ಸಮರ್ಥ ರಾಮದಾಸ ಸ್ವಾಮಿಯವರ ಶಿಷ್ಯರು ಪ್ರಚಾರಕ್ಕಾಗಿ ಎಲ್ಲೆಡೆ ಪ್ರಯಾಣಿಸುತ್ತಿದ್ದರು. ಇದು ಶಿವಾಜಿ ಮಹಾರಾಜರು ಉದಯಕ್ಕೆ (ಪ್ರವರ್ಧಮಾನಕ್ಕೆ) ಬರುತ್ತಿದ್ದಂತಹ ಕಾಲವಾಗಿತ್ತು. ಹಿಂಸಾಚಾರಿ ಮೊಘಲರು ಭಾರತದ ವಿವಿಧ ಸ್ಥಳಗಳಲ್ಲಿ ಜನರನ್ನು ಪೀಡಿಸುತ್ತಿದ್ದರು. ಮಹಾರಾಷ್ಟ್ರದ ಸತಾರಾ ಪ್ರದೇಶವು ವಿಜಾಪುರದ ಆದಿಲಶಾಹ ನ ನಿಯಂತ್ರಣದಲ್ಲಿತ್ತು. ಅವನ ಮೊಘಲ್ ಠಾಣೇದಾರನೊಬ್ಬನು ಸಂಗಮ ಮಾಹುಲಿ ಎಂಬ ಊರಿನಲ್ಲಿ ವಾಸಿಸುತ್ತಿದ್ದನು. ಈ ಠಾಣೇದಾರನು ಕ್ರೂರ ಅತ್ಯಾಚಾರಿಯಾಗಿದ್ದನು. ಅವನು ಯಾವಾಗಲೂ ಸಜ್ಜನ ಬ್ರಾಹ್ಮಣರು, ಸಾಧುಗಳು, ಸನ್ಯಾಸಿಗಳು, ತಪಸ್ವಿಗಳನ್ನು ಹಿಂಸಿಸುತ್ತಿದ್ದನು. ಅವನು ಬ್ರಾಹ್ಮಣರ ಸ್ನಾನ-ಸಂಧ್ಯಾ, ಯಜ್ಞ ಮತ್ತು ಯಾಗಗಳನ್ನು ನಿಲ್ಲಿಸಿ ಬಿಟ್ಟಿದ್ದನು. ಪುರಾಣ-ಓದುವುದು ಮತ್ತು ಕೀರ್ತನೆ ಮಾಡುವುದನ್ನು ಸಹ ನಿಲ್ಲಿಸಿದ್ದನು.

ಅದೇ ಸಮಯದಲ್ಲಿ ಶ್ರೀ ಸಮರ್ಥ ರಾಮದಾಸ ಸ್ವಾಮಿಯವರ ಶಿಷ್ಯ ಉದ್ಧವ ಸ್ವಾಮಿ ಮಾಹುಲಿಯಲ್ಲಿ ನೆಲೆಸಿದ್ದರು. ಅವರು ತಮ್ಮ ಭಕ್ತರೊಂದಿಗೆ ಸ್ನಾನ, ಸಂಧ್ಯಾ, ಪೂಜೆಯನ್ನು ಪ್ರಾರಂಭಿಸಿದರು. ಕೃಷ್ಣ ನದಿಯ ಘಟ್ಟಗಳಲ್ಲಿ ಪ್ರವಚನವನ್ನು ಪ್ರಾರಂಭಿಸಲಾಯಿತು. ಈ ವಿಷಯವನ್ನು ತಿಳಿದ ಠಾಣೇದಾರನು, ತಕ್ಷಣವೇ ಕೃಷ್ಣಾ ನದಿಯ ಘಟ್ಟಕ್ಕೆ ತಲುಪಿ ಉದ್ಧವ ಸ್ವಾಮಿಜಿಯನ್ನು ಹಿಡಿದು ಅವರನ್ನು ಥಳಿಸಿ ಉದ್ಧವ ಸ್ವಾಮಿಜಿ ಮತ್ತು ಅವರ ನಾಲ್ಕು ಶಿಷ್ಯರನ್ನು ಬಂಧಿಸಿ ಕತ್ತಲ ಕೋಣೆಯಲ್ಲಿ ಕೂಡಿಹಾಕಿದನು. ಎಲ್ಲ ಜನರು ಭಯಭೀತರಾಗಿ ಓಡಲು ಪ್ರಾರಂಭಿಸಿದರು. ಸಮರ್ಥ ರಾಮದಾಸ ಸ್ವಾಮೀಜಿಯವರ ಒಬ್ಬ ಶಿಷ್ಯನು ಅವಕಾಶ ಸಿಕ್ಕಿದ ತಕ್ಷಣ ಓಡಿಹೋದನು.

ಆ ಸಮಯದಲ್ಲಿ ಶ್ರೀ ಸಮರ್ಥರು ಚಾಫಳ ಎಂಬ ಗ್ರಾಮದಲ್ಲಿದ್ದರು. ಆ ಶಿಷ್ಯನು ಓಡಿಹೋಗಿ ಮರುದಿನ ಬೆಳಗ್ಗೆ ಚಾಫಳ ತಲುಪಿದನು. ನಡೆದ ಘಟನೆಯನ್ನು ಶ್ರೀ ಸಮರ್ಥ ರಾಮದಾಸಸ್ವಾಮಿಜಿಯವರಿಗೆ ತಿಳಿಸಿದನು. ಸಮರ್ಥರು ಕೋಪದಿಂದ ಕೆಂಡಾಮಂಡಲವಾದರು. ಅವರು ತಮ್ಮ ಎರಡನೆಯ ಶಿಷ್ಯ ಕಲ್ಯಾಣಸ್ವಾಮಿಗೆ ಬೆತ್ತವನ್ನು ತರಲು ಆದೇಶಿಸಿ ಪೀಠದಿಂದ ಎದ್ದರು ಮತ್ತು ನೇರವಾಗಿ ಮಾಹುಲಿಯತ್ತ ಪ್ರಯಾಣ ಬೆಳೆಸಿದರು. ಸಮರ್ಥರು ಏನನ್ನೂ ತಿನ್ನದೇ ಕುಡಿಯದೆ ಹೊರಟಿದ್ದರು.

ಸೂರ್ಯಾಸ್ತದ ಒಂದು ಗಂಟೆ ಮೊದಲು ಅವರು ಮಾಹುಲಿಯನ್ನು ತಲುಪಿ ನೇರವಾಗಿ ಠಾಣೆದಾರನ ಮನೆ ಪ್ರವೇಶಿಸಿದರು. ಆ ಸಮಯದಲ್ಲಿ ಠಾಣೆದಾರನು ಹುಕ್ಕಾ ಸೇದುತ್ತಾ ಕುಳಿತಿದ್ದನು. ಅವರು ಠಾಣೇದಾರನ ಕುತ್ತಿಗೆಯನ್ನು ಹಿಡಿದು ಅವನನ್ನು ಎಳೆದು ಅರ್ಧ ಜೀವವಾಗುವ ತನಕ ತಮ್ಮ ಕೈಯಲ್ಲಿದ್ದ ಬೆತ್ತದಿಂದ ಹೊಡೆದರು. ಸಮರ್ಥರು ಅವನನ್ನು ಎಳೆದುಕೊಂಡು ರಸ್ತೆಗೆ ಕರೆತಂದರು. ಠಾಣೇದಾರನ ಚೀರಾಟವು ವಾತಾವರಣದಲ್ಲಿ ಪ್ರತಿಧ್ವನಿಸುತ್ತಿತ್ತು. ಠಾಣೆದಾರನ ಸೇವಕರೋ, ಒಂದೇ ಒಂದು ಶಬ್ದ ಬಾಯಿಂದ ಹೊರ ತೆಗೆಯದೆ ನಿಂತಿದ್ದರು. ಸಮರ್ಥ ಸ್ವಾಮೀಜಿಯವರ ಉಗ್ರನರಸಿಂಹನ ಕೋಪದ ರೂಪವನ್ನು ನೋಡಿ ಎಲ್ಲರೂ ಗಾಬರಿಗೊಂಡರು. ಠಾಣೆದಾರನನ್ನು ಬಿಡಿಸುವ ಧೈರ್ಯ ಯಾರಲ್ಲಿಯೂ ಇರಲಿಲ್ಲ.

ಠಾಣೇದಾರನ ದೇಹದಿಂದ ರಕ್ತ ಹರಿಯುತ್ತಿತ್ತು. ಅವನು ಕರುಣೆಗಾಗಿ ಬೇಡಿಕೊಳ್ಳುತ್ತ ಸಮರ್ಥ ಮಹಾರಾಜರ ಚರಣಗಳಲ್ಲಿ ಎರಗಿದನು. ಕತ್ತಲು ಕೋಣೆಯಲಿರುವವರನ್ನು ಮೊದಲು ಬಿಡುಗಡೆ ಮಾಡು ಎಂದು ಶ್ರೀ ಸಮರ್ಥ ಮಹಾರಾಜರು ಗರ್ಜಿಸಿದರು. ಠಾಣೆದಾರನು ಜೀವ ಉಳಿಸಲು ತನ್ನ ಸೇವಕರಿಗೆ ಆದೇಶಿಸಿದನು. ಕತ್ತಲು ಕೋಣೆಯನ್ನು ತೆರೆಯಲಾಯಿತು. ಉದ್ಧವಸ್ವಾಮಿ ಮತ್ತು ಅವರ ಭಕ್ತರು ಸಮರ್ಥರ ಚರಣಗಳಲ್ಲಿ ಬಿದ್ದರು. ಠಾಣೆದಾರನು ಶ್ರೀ ಸಮರ್ಥ ಮಹಾರಾಜರಿಂದ ಬಹಳ ಪ್ರಭಾವಿತನಾದನು. ಅವನು ಸಮರ್ಥ ಮಹಾರಾಜರ ಚರಣಗಳನ್ನು ಹಿಡಿದು ಕ್ಷಮೆಯಾಚಿಸಿದನು ಮತ್ತು ಭವಿಷ್ಯದಲ್ಲಿ ಯಾರನ್ನೂ ಹಿಂಸಿಸುವುದಿಲ್ಲ, ಭಜನೆ-ಕೀರ್ತನೆ ಮತ್ತು ಪುರಾಣ ಓದುವುದನ್ನು ನಿಲ್ಲಿಸುವುದಿಲ್ಲ ಮತ್ತು ಯಾರಿಗೂ ಅನ್ಯಾಯ ಮಾಡುವುದಿಲ್ಲ , ಎಂದು ಆಣೆ ಮಾಡಿದನು.

ಅನಂತರ, ದಯಾಮಯ ಅಂತಃಕರಣದಿಂದ ಶ್ರೀ ಸಮರ್ಥ ರಾಮದಾಸ್ವಾಮಿಯವರು ಅವನನ್ನು ಕ್ಷಮಿಸಿದರು ಮತ್ತು ಅವನ ಗಾಯಗಳಿಗೆ ಔಷಧಿ ಗಿಡಮೂಲಿಕೆಗಳ ಲೇಪ ಹಚ್ಚಿಸಿ ಚಿಕಿತ್ಸೆ ನೀಡಿದರು. ಶ್ರೀ ಸಮರ್ಥ ಮಹಾರಾಜರು ದಿನವಿಡಿ ಏನನ್ನೂ ತಿನ್ನಲಿಲ್ಲ ಎಂದು ಗ್ರಾಮಸ್ಥರಿಗೆ ತಿಳಿದಾಗ, ಗ್ರಾಮದ ಜನರು ಸಮರ್ಥ ರಾಮದಾಸ್ವಾಮಿ ಮತ್ತು ಉದ್ಧವಸ್ವಾಮಿ ಮತ್ತು ಇತರ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಸಹ ಮಾಡಿದರು.

ಆ ರಾತ್ರಿ ಶ್ರೀ ಸಮರ್ಥ ಸ್ವಾಮೀಜಿಯವರು ಮಾಹುಲಿಯ ಘಟ್ಟದಲ್ಲಿ ವಿವಿಧ ದೃಷ್ಟಾಂತ ಹಾಗೂ ಉದಾಹರಣೆಗಳೊಂದಿಗೆ ಪ್ರವಚನವನ್ನು ನೀಡಿದರು. ಈ ಪ್ರವಚನವನ್ನು ಕೇಳಿದ ಮಾಹುಲಿಯ ಜನರು ತೃಪ್ತರಾದರು.
ಕೃಪೆ: ಹಿಂದೂ ಜಾಗೃತಿ (ಸಾಂದರ್ಭಿಕ ಚಿತ್ರ ಬಳಸಲಾಗಿದೆ)

ರಾಜಕೀಯ

ಭಾರತ ಯುದ್ಧವನ್ನು ಕೊನೆಗೊಳಿಸಬಹುದು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಭಾರತ ಯುದ್ಧವನ್ನು ಕೊನೆಗೊಳಿಸಬಹುದು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat) ಅವರು ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷವನ್ನು ಭಾರತವು ಕೊನೆಗೊಳಿಸಬಹುದು ಎಂದು ಶುಕ್ರವಾರ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಹೆಗಲಿಗೆ ಜವಾಬ್ದಾರಿ ಹೊರೆಸಿದ್ದಾರೆ.

[ccc_my_favorite_select_button post_id="120350"]
ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ತುಘಲಕ್‌ ನೀತಿಗಳಿಂದಲೇ ದುರಾಡಳಿತಕ್ಕೆ ಹೆಸರಾಗಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಇದರಿಂದ ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ (R. Ashoka)

[ccc_my_favorite_select_button post_id="120234"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ಪೊಲೀಸ್‌ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು..!: ಲಾಕಪ್ ಡೆತ್ ಆರೋಪ

ಪೊಲೀಸ್‌ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು..!: ಲಾಕಪ್ ಡೆತ್ ಆರೋಪ

ಯುಗಾದಿ ಹಬ್ಬದ ದಿನ ಜೂಜಾಟದಲ್ಲಿ ತೊಡಗಿದ್ದವರ ಬಂಧಿಸಿದ್ದ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದು, ಬಂಧಿತರಲ್ಲಿ ಓರ್ವ ಸಾವನಪ್ಪಿರುವ ಕಾರಣ, ಲಾಕಪ್ ಡೆತ್ (lockup death) ಆರೋಪ ಕೇಳಿಬಂದಿದೆ.

[ccc_my_favorite_select_button post_id="120325"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕ್ಯಾಂಟರ್..ಕಂಟೈನರ್ ನಡುವೆ ಅಪಘಾತ.. ಬೈಕ್ ಸವಾರನಿಗೆ ಗಂಭೀರ ಪೆಟ್ಟು..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕ್ಯಾಂಟರ್..ಕಂಟೈನರ್ ನಡುವೆ ಅಪಘಾತ.. ಬೈಕ್ ಸವಾರನಿಗೆ ಗಂಭೀರ ಪೆಟ್ಟು..!

ಬೆಳ್ಳಂಬೆಳಗ್ಗೆ ಕ್ಯಾಂಟರ್ ಹಾಗೂ ಕಂಟೈನರ್ ನಡುವೆ ಡಿಕ್ಕಿ ಸಂಭವಿಸಿ (Accident), ಬೈಕ್ ಸವಾರ ಗಾಯಗೊಂಡಿರುವ ಘಟನೆ ಚನ್ನಾದೇವಿ ಅಗ್ರಹಾರದ ಬಳಿ ಇಂದು ಮುಂಜಾನೆ 5,30 ರ ವೇಳೆಗೆ ಸಂಭವಿಸಿದೆ.

[ccc_my_favorite_select_button post_id="120173"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!