ಬೆಂಗಳೂರು: ಎದೆ ಎತ್ತರಕ್ಕೆ ಬೆಳೆದ ಮಕ್ಕಳನ್ನು ಕಳೆದುಕೊಂಡ ಹೆತ್ತವರ ಕಣ್ಣೀರು, ಆಕ್ರಂದನ ನಮ್ಮ ಮನಸನ್ನ ತಲ್ಲಣಗೊಳಿಸಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R Ashoka) ಹೇಳಿದ್ದಾರೆ.
ಈ ಕುರಿತಂತೆ ಟ್ವಿಟ್ ಮಾಡಿರುವ ಅವರು, ಸಿಎಂ ಸಿದ್ದರಾಮಯ್ಯ (Cmsiddaramaiah) ಹಾಗು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಬಹುಶಃ ಕ್ರಿಕೆಟ್ ಆಟಗಾರರ ಜೊತೆ ತೆಗೆಸಿಕೊಂಡ ಸೆಲ್ಫಿ, ಪೋಟೋಗಳನ್ನು ನೋಡಿಕೊಂಡು ನಿನ್ನೆ ನಿಶ್ಚಿಂತೆಯಿಂದ ಮಲಗಿರಬಹುದು.
ಆದರೆ ನನಗಂತೂ ನಿನ್ನೆ ರಾತ್ರಿ ಒಂದು ಕ್ಷಣವೂ ಕಣ್ಣು ಮುಚ್ಚಲು ಸಾಧ್ಯವಾಗಲಿಲ್ಲ. ಕಷ್ಟಪಟ್ಟು ಸಾಕಿ ಸಲಹಿದ ಮಕ್ಕಳು, ಬಾಳಿ ಬದುಕಬೇಕಾದ ಮಕ್ಕಳನ್ನು ಕಳೆದುಕೊಂಡ ಪೋಷಕರ, ಕುಟುಂಬಸ್ಥರ ಕಣ್ಣೀರು, ನೋವು, ಶೋಕವೇ ಇಡೀ ರಾತ್ರಿ ಕಣ್ಣು ಮುಂದೆ ಬರುತ್ತಿತ್ತು.
ನಿನ್ನೆ ಸತ್ತಿದ್ದು 11 ಜನ ಮಾತ್ರವಲ್ಲ, ಮಾನವೀಯತೆ ಇಲ್ಲದ ಹೃದಯಹೀನ ಕಾಂಗ್ರೆಸ್ ಪಕ್ಷವೂ ಕನ್ನಡಿಗರ ಪಾಲಿಗೆ ನಿನ್ನೆಯೇ ಸತ್ತು ಹೋಯಿತು.