When the cloud moves

ಹರಿತಲೇಖನಿ ದಿನಕ್ಕೊಂದು ಕಥೆ: ಮೋಡ ಸರಿದಾಗ

Harithalekhani; ಧಾರುಣಿ ಹುಟ್ಟು ಅಂಗವಿಕಲೆ. ಭಗವಂತನ ಶಾಪವೋ ಎಂಬಂತೆ ನೀಲಮ್ಮ ಕೇಶವರಾಯರಿಗೆ ನಾಲ್ಕು ಮಕ್ಕಳಲ್ಲಿ ಮೂರನೆಯವಳಾಗಿ ಹುಟ್ಟಿದವಳು.

ಮೊದಲೆರಡು ಗಂಡು ಮಕ್ಕಳು. ಕೊನೆಯವಳು ಮತ್ತೊಬ್ಬಳು ಶ್ರಾವಣಿ. ಈಕೆ ಸುರ ಸುಂದರಿ ಎಂದೇ ಹೇಳಬಹುದು. ಅಷ್ಟೇ ಅಲ್ಲ ಸಕಲ ಕಲಾ ವಲ್ಲಭೆ. ಹಾಡು, ನೃತ್ಯ ಯಾವುದೇ ಚಟುವಟಿಕೆ ಇರಲಿ.. ಶ್ರಾವಣಿ ಅಲ್ಲಿ ಇದ್ದೇ ಇರುತಿದ್ದಳು.

ಹೆತ್ತವರಿಗೂ ಮುದ್ದಿನ ಮಗಳಾದಳು. ಮೊದಲೆರಡು ಗಂಡು ಮಕ್ಕಳ ಸ್ಥಾನ ಬೇರೇನೇ ಇತ್ತು. ಇನ್ನು ಉಳಿದದ್ದು ಪಾಪ ಧಾರುಣಿ ನಡೆಯಲಾಗದ ನತದೃಷ್ಟೆ. ಎಲ್ಲದಕ್ಕೂ ಪರರ ಆಶ್ರಯ ಬೇಕು.ಸ್ವಲ್ಪ ಮಟ್ಟಿಗೆ ಮೂಲೆ ಗುಂಪೇ ಆದಳು ಎನ್ನಬಹುದು. ಆದರೆ ತಂಗಿಯ ಚಟುವಟಿಕೆಯ ನೋಡಿ ನಾನು ಏನಾದರು ಮಾಡಬೇಕು,ಸಾಧಿಸಬೇಕು ಎನ್ನುವ ಹಂಬಲ ಮನದೊಳಗೆ ಇತ್ತು.

ಉಳಿದ ಮಕ್ಕಳ ಹಾಗೆ ತಾನು ಶಾಲೆಗೆ ಹೋಗುವ ಹಾಗಿಲ್ಲ.. ಮನೆಯಲ್ಲಿ ಅಣ್ಣನವರು,ತಂಗಿ ಓದುತಿದ್ದ ಪಾಠಗಳು ಕಿವಿಗೆ ಬಿದ್ದ ಕ್ಷಣ ಅದನ್ನು ಜ್ಞಾಪಿಸಿಕೊಳ್ಳುವ ಶಕ್ತಿ ದೇವರು ಕರುಣಿಸಿದ್ದ.ಹಾಗೆ ತಂಗಿ ಮಾಡುತಿದ್ದ ಸಂಗೀತದ ಹಾಡು ತನ್ನಷ್ಟಕ್ಕೆ ತಾನೇ ಹಾಡಿಕೊಳ್ಳುತಿದ್ದಳು..

ಸ್ವರವೂ ಇಂಪಾಗಿತ್ತು.. ಒಂದು ಭಾರಿ ಅವರ ಮನೆಗೆ ಬಂದ ಬಳಗದವರೊಬ್ಬರು ಧಾರುಣಿ ಗುಣುಗುತಿದ್ದ ಹಾಡು ಕೇಳುತ್ತಾರೆ. ಈ ಹುಡುಗಿಗೆ ಸರಿಯಾದ ದಾರಿ ತೋರಿದರೆ ಒಳ್ಳೆ ಸಂಗೀತ ಗಾರ್ತಿಯಾದರು ಆಗಬಹುದು ಎಂದು ಕೇಶವರಾಯರಲ್ಲಿ ಪ್ರಸ್ತಾಪಿಸುತ್ತಾರೆ. ಆದರೆ ರಾಯರು ಅಷ್ಟೊಂದು ಉತ್ಸಾಹ ತೋರಿಸುವುದಿಲ್ಲ.

ಇತ್ತ ಶ್ರಾವಣಿಗೆ ಒಂದು ಟಿವಿಯ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಗ್ತದೆ. ಒಂದು ದಿನ ಅಲ್ಲಿ ಅವಳ ಅಕ್ಕನ ಬಗ್ಗೆ ಹೇಳುವಾಗ ತೀರ್ಪುಗಾರರು ಅಲ್ಲಿಗೆ ಬಂದ ಧಾರುಣಿಯಲ್ಲೂ ಹಾಡಲು ಹೇಳುತ್ತಾರೆ. ಅವಳ ಹಾಡು ಕೇಳಿದ ಎಲ್ಲರೂ ದಂಗಾಗಿ ದೇವರು ಕಾಲು ಕೊಡದಿದ್ದರೆ ಏನಂತೆ.. ಕಂಠವಾದರೂ ಕೊಟ್ಟಿದ್ದಾರಲ್ಲ ಅನ್ನುತ್ತಾ ಅವಳಿಗೂ ಮಾರ್ಗದರ್ಶನಕ್ಕಾಗಿ ಒಂದು ಶಿಕ್ಷಕಿಯನ್ನು ನೀಡುತ್ತಾರೆ.

ಧಾರುಣಿ ಎಲ್ಲ ಪ್ರಕಾರದ ಸಂಗೀತವನ್ನು ಕೂಡಲೇ ಕಲಿಯುತ್ತಿದ್ದಳು. ಧಾರುಣಿಗೆ ಟಿವಿ ಯವರು ನಡೆಸಿದ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಬರ್ತದೆ.

ಅವಳ ಬಾಳಿನಲ್ಲೂ ಕಪ್ಪು ಮೋಡಗಳು ಸರಿದು ಬೆಳದಿಂಗಳಾಗಿ ಹರಡುತ್ತದೆ ಅವಳ ಜೀವನದ ಪಥವೇ ಬದಲಾಗುತ್ತದೆ. ಗಾಲಿ ಚಕ್ರ ಹೋಗಿ ಮುಂದೆ ಕೃತಕ ಕಾಲು ಜೋಡಿಸಿ ಅವಳು ನಡೆಯುವಂತಾಗುತ್ತಾಳೆ… ದೊಡ್ಡ ಸಂಗೀತಗಾರಳಾಗಿ ಎಲ್ಲರ ಮನ ಸೆಳೆದು ಮನೆ ಮಾತಾಗುತ್ತಾಳೆ.

ಕೃಪೆ: ಶೋಭಾ ಆರ್ ಕಲ್ಕೂರ್ (ಸಾಮಾಜಿಕ ಜಾಲತಾಣ)

ರಾಜಕೀಯ

ಭಾರತ ಯುದ್ಧವನ್ನು ಕೊನೆಗೊಳಿಸಬಹುದು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಭಾರತ ಯುದ್ಧವನ್ನು ಕೊನೆಗೊಳಿಸಬಹುದು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat) ಅವರು ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷವನ್ನು ಭಾರತವು ಕೊನೆಗೊಳಿಸಬಹುದು ಎಂದು ಶುಕ್ರವಾರ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಹೆಗಲಿಗೆ ಜವಾಬ್ದಾರಿ ಹೊರೆಸಿದ್ದಾರೆ.

[ccc_my_favorite_select_button post_id="120350"]
ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ತುಘಲಕ್‌ ನೀತಿಗಳಿಂದಲೇ ದುರಾಡಳಿತಕ್ಕೆ ಹೆಸರಾಗಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಇದರಿಂದ ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ (R. Ashoka)

[ccc_my_favorite_select_button post_id="120234"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ಪೊಲೀಸ್‌ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು..!: ಲಾಕಪ್ ಡೆತ್ ಆರೋಪ

ಪೊಲೀಸ್‌ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು..!: ಲಾಕಪ್ ಡೆತ್ ಆರೋಪ

ಯುಗಾದಿ ಹಬ್ಬದ ದಿನ ಜೂಜಾಟದಲ್ಲಿ ತೊಡಗಿದ್ದವರ ಬಂಧಿಸಿದ್ದ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದು, ಬಂಧಿತರಲ್ಲಿ ಓರ್ವ ಸಾವನಪ್ಪಿರುವ ಕಾರಣ, ಲಾಕಪ್ ಡೆತ್ (lockup death) ಆರೋಪ ಕೇಳಿಬಂದಿದೆ.

[ccc_my_favorite_select_button post_id="120325"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕ್ಯಾಂಟರ್..ಕಂಟೈನರ್ ನಡುವೆ ಅಪಘಾತ.. ಬೈಕ್ ಸವಾರನಿಗೆ ಗಂಭೀರ ಪೆಟ್ಟು..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕ್ಯಾಂಟರ್..ಕಂಟೈನರ್ ನಡುವೆ ಅಪಘಾತ.. ಬೈಕ್ ಸವಾರನಿಗೆ ಗಂಭೀರ ಪೆಟ್ಟು..!

ಬೆಳ್ಳಂಬೆಳಗ್ಗೆ ಕ್ಯಾಂಟರ್ ಹಾಗೂ ಕಂಟೈನರ್ ನಡುವೆ ಡಿಕ್ಕಿ ಸಂಭವಿಸಿ (Accident), ಬೈಕ್ ಸವಾರ ಗಾಯಗೊಂಡಿರುವ ಘಟನೆ ಚನ್ನಾದೇವಿ ಅಗ್ರಹಾರದ ಬಳಿ ಇಂದು ಮುಂಜಾನೆ 5,30 ರ ವೇಳೆಗೆ ಸಂಭವಿಸಿದೆ.

[ccc_my_favorite_select_button post_id="120173"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!