ದೊಡ್ಡಬಳ್ಳಾಪುರ: ಬೆಸ್ಕಾಂ ಗ್ರಾಮಿಣ ಉಪ ವಿಭಾಗ ವ್ಯಾಪ್ತಿಗೆ ಬರುವ ಕನಸವಾಡಿ ವಿದ್ಯುತ್ ಉಪ ಕೇಂದ್ರ ವ್ಯಾಪ್ತಿಯಲ್ಲಿ ಅ.19 ರಂದು ಭಾನುವಾರ ನಡೆಯಬೇಕಿದ್ದ ವಿದ್ಯುತ್ (Power) ಪೂರೈಕೆ ಕಾಮಗಾರಿಯನ್ನು ಅ.26ಕ್ಕೆ ಮುಂದೂಡಲಾಗಿದೆ.
ಈ ಕುರಿತು ದೊಡ್ಡಬಳ್ಳಾಪುರ ಗ್ರಾಮೀಣ ಉಪವಿಭಾಗದ ಎಇಇ ಮಂಜುನಾಥ್ ಮಾಹಿತಿ ನೀಡಿದ್ದು, ಕನಸವಾಡಿ ವಿದ್ಯುತ್ ಉಪ ಕೇಂದ್ರದ ಎಪ್-5 ಬಿಟಿಎಸ್ ಮಿಲ್ ( ಕೈಗಾರಿಕ), ಎಪ್-7 ಕನ್ನಮಂಗಲ ( ಕೃಷಿ) & ಎಪ್-09 ಪುಟ್ಟೇನಹಳ್ಳಿ ( ನಿರಂತರ) ಮಾರ್ಗಗಳ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಕುಸುಮ ಯೋಜನೆಯ ಸೌರ ಶಕ್ತಿ ವಿದ್ಯುದ್ದೀಕರಣ ಸ್ಥಾವರಗಳನ್ನು ನಿರ್ಮಿಸುವ ಕಾಮಗಾರಿ ಕಾರ್ಯ ಕೈಗೊಳ್ಳಲಾಗಿತ್ತು.
ಈ ಹಿನ್ನೆಲೆಯಲ್ಲಿ ಅ.19 ರಂದು ವಿದ್ಯುತ್ ಸರಬರಾಜುಗುತ್ತಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಗ್ರಾಮಗಳಲ್ಲಿ ಬೆಳ್ಳಿಗೆ 10:00 ಘಂಟೆಯಿಂದ ಸಂಜೆ 6:00 ಘಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲು ಪ್ರಕಟಣೆ ನೀಡಲಾಗಿತ್ತು. ಆದರೆ ಕಾಮಗಾರಿಯನ್ನು ಅಕ್ಟೋಬರ್ 26ಕ್ಕೆ ಮುಂದೂಡಲಾಗಿದ್ದು, ವಿದ್ಯುತ್ ಅಡಚಣೆ ಬಗ್ಗೆ ಎಚ್.ಟಿ ಮತ್ತು ಎಲ್,ಟಿ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸುವಂತೆ ಎಇಇ ಮಂಜುನಾಥ್ ತಿಳಿಸಿದ್ದಾರೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು
ಪುಟ್ಟೇನಹಳ್ಳಿ, ತಿಮ್ಮಸಂದ್ರ, ವಡಗೆರೆ, ದೊಡ್ಡ ವಡಗೆರೆ, ಚಿಕ್ಕ ವಡಗೆರೆ, ವಡಗೆರೆ ಕಾಲೋನಿ, ಬೆನಚಿನಕಟ್ಟೆ, ಕಮ್ಮಸಂದ್ರ ಕಮ್ಮಸಂದ್ರ ಕಾಲೋನಿ, ಕನ್ನಮಂಗಲ/ಗೇಟ್/ಗ್ರಾಮ/ಕಾಲೋನಿ, ರಾಮರಾಯನ ಪಾಳ್ಯ, ಯಲ್ಲದಹಳ್ಳಿ, ಕೇಂಜಿಗನಹಳ್ಳಿ, ಕುರಿತಿಮ್ಮಯ್ಯನಪಾಳ್ಯ, ನಾಗೇನಹಳ್ಳಿ, ಉದ್ದಿಚಿಕ್ಕನಹಳ್ಳಿ, ಬಿಟಿಎಸ್ ಮಿಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. (ಕೊನೆಯ ಕ್ಷಣದ ಬದಲಾವಣೆ ಹೊರತುಪಡಿಸಿ)