ಬೆಂಗಳೂರು: ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ 12 ಅಂತಿಮ ಹಂತಕ್ಕೆ ಬಂದಿದ್ದು, ಗಿಲ್ಲಿ ನಟ (Gilli Nata) ಅವರು ತಮ್ಮ ಕ್ರೇಜ್ನಿಂದ ಎಲ್ಲರ ಗಮನ ಸೆಳೆದಿದ್ದಾರೆ.
ಈಗಾಗಲೇ ಫಿನಾಲೆ ತಲುಪಿರುವ ಗಿಲ್ಲಿ ನಟ ಈ ಬಾರಿ ಟ್ರೋಫಿಯನ್ನು ಎತ್ತುವ ಸಾಧ್ಯತೆಗಳು ಜಾಸ್ತಿಯೇ ಇವೆ. ಸಾಮಾಜಿಕ ಜಾಲತಾಣದಲ್ಲಿ ಅವರ ಪರವಾದ ದೊಡ್ಡ ಅಲೆ ಇದೆ, ಈ ನಡುವೆ ಮಂಡ್ಯದ ಕೆಲ ರಾಜ ಕಾರಣಿಗಳು ಕೂಡ ಗಿಲ್ಲಿ ಪರವಾಗಿ ಧ್ವನಿ ಎತ್ತಿದ್ದಾರೆ
ಶಾಸಕ ಸ್ವಾಮಿ ಹೇಳಿಕೆ: ನಾಡಿನ ಸಮಸ್ತ ಜನತೆಗೆ ನಮಸ್ಕಾರ.. ಮಳವಳ್ಳಿಯ ಹೆಮ್ಮೆಯ ನಟರಾಜ್, ಗಿಲ್ಲಿ ನಟ ಬಿಗ್ ಬಾಸ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಅಂತಿಮ ಘಟ್ಟಕ್ಕೆ ಬಂದಿರುವ ಸಂದರ್ಭದಲ್ಲಿ, ಆತನ ಕಲೆ ಮತ್ತು ಆತನ ಪ್ರಾಮಾಣಿಕ ಪ್ರಯತ್ನವನ್ನು ಸರ್ವರೂ ಬೆಂಬಲಿಸಬೇಕು.
ನಮ್ಮ ಮಳವಳ್ಳಿಯ ಹೊಸ ಪ್ರತಿಭೆಯನ್ನು ಸೃಷ್ಟಿಯಾಗಲು ಆಶೀರ್ವಾದ ಮಾಡಿ. ಗಿಲ್ಲಿ ನಟನನ್ನು ಬೆಂಬಲಿಸಿ, ಆತನಿಗೆ ಅತೀ ಹೆಚ್ಚಿನ ಮತಗಳನ್ನು ನೀಡಿ ಎಂದು ಮಳವಳ್ಳಿಯ ಶಾಸಕ ನರೇಂದ್ರ ಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.
ಟ್ರೋಫಿಗೆ ಅವರು ಅತ್ಯಂತ ಯೋಗ್ಯ ಸ್ಪರ್ಧಿ: ಡಿ.ಸಿ. ತಮ್ಮಣ್ಣ
ಉತ್ತಮತನಕ್ಕೇ ಅಂತಿಮ ಗೆಲುವು’ ‘ಗಿಲ್ಲಿ ನಟ ಅವರು ಕಾರ್ಯ ಕ್ರಮಕ್ಕೆ ಕಾಲಿಟ್ಟ ದಿನದಿಂದಲೂ ತಮ್ಮದೇ ಆದ ಗುರುತು ಮೂಡಿಸಿದ್ದು, ಕೃತಕ ಮತ್ತು ಆರ್ಭಟದ ಆಟವನ್ನು ಬಿಟ್ಟು ನೈಜತೆ, ಮಾನವೀಯತೆ ಮತ್ತು ಸಮತೋಲನದಿಂದ ನಡೆದುಕೊಂಡಿ ದ್ದಾರೆ, ಅವರ ಗೆಲುವು ಕೇವಲ ಒಂದು ಪ್ರಶಸ್ತಿ ಅಲ್ಲ ಅದು ಲಕ್ಷಾಂತರ ಜನಗಳ ಧ್ವನಿ. ಅವರ ಮೇಲೆ ಇರುವ ನಂಬಿಕೆ.
ಭರವಸೆ, ಮತ್ತು ಉತ್ತಮತನವೇ ಅಂತಿಮ ಗೆಲುವು ಎಂಬ ಸಂದೇಶಕ್ಕೆ ಮುದ್ರೆಯಾಗಲಿ. ಈ ಸೀಸನ್ ಟ್ರೋಫಿಗೆ ಅವರು ಅತ್ಯಂತ ಯೋಗ್ಯ ಸ್ಪರ್ಧಿ ಎಂದು ಭಾವಿಸುತ್ತಾ ಶುಭವಾಗಲಿ’ ಎಂದು ಹಾರೈಸುತ್ತೇನೆ ಎಂದು ಡಿ.ಸಿ. ತಮ್ಮಣ್ಣ ಹೇಳಿದ್ದಾರೆ.