ಲಖನೌ: ಚುನಾವಣೆಗಳು ಮುಗಿಯುತ್ತಿದ್ದಂತೆ ವಾಣಿಜ್ಯ ಎಲ್ಪಿಜಿ (LPG) ಸಿಲಿಂಡರ್ಗಳ ಬೆಲೆಯನ್ನು ಏಕಾಏಕಿ ರೂ.993 ಹೆಚ್ಚಳ ಮಾಡಿರುವ ಕುರಿತು ದೇಶಾದ್ಯಂತ ಆಕ್ರೋಶ ತೀವ್ರಗೊಂಡಿವೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಲಿಂಡರ್ಗಳ ಬೆಲೆ ಏರಿಕೆಯೊಂದಿಗೆ ಅವು ದುಬಾರಿಯಾಗುವುದಲ್ಲದೆ, ಆಹಾರ, ಪಾನೀಯಗಳು ಮತ್ತು ಬ್ರೆಡ್ ಕೂಡ ದುಬಾರಿಯಾಗಲು ಪ್ರಾರಂಭಿಸುತ್ತವೆ.
ಕಷ್ಟಪಟ್ಟು ದುಡಿದು, ಕೊಂಡು ತಿನ್ನುವವರಿಗೆ ಮಾತ್ರ ಅದರ ನೋವು ಗೊತ್ತಾಗುತ್ತದೆ. ಆದರೆ ಬೇರೆಯವರ ಮನೆಯಲ್ಲಿ ತಿನ್ನುವವರಿಗೆ ಅಥವಾ ಜನರ ತಟ್ಟೆಯಿಂದ ಆಹಾರ ಕದಿಯುವವರಿಗೆ ಇದು ಅರ್ಥವಾಗುವುದಿಲ್ಲ. ಬೇರೆ ಯಾವ ವಸ್ತುಗಳು ದುಬಾರಿಯಾಗುತ್ತವೆ ಎಂಬುದನ್ನು ಕಾದು ನೋಡಿ ಎಂದು ಹೇಳಿದ್ದಾರೆ.
Not cylinder but people's food gets expensive: Akhilesh Yadav pic.twitter.com/9a1uE5e5P9
— News Arena India (@NewsArenaIndia) May 1, 2026
‘ಸಿಲಿಂಡರ್ ಬೆಲೆಯನ್ನು ಏರಿಸಲೇಬೇಕು ಎಂದಿದ್ದರೆ ನೇರವಾಗಿ ₹1,000 ಹೆಚ್ಚಿಸಬೇಕಿತ್ತು. ಅದರಲ್ಲಿ ₹7 ಕಡಿಮೆ ಮಾಡಿ ಯಾರಿಗೆ ಉಪಕಾರ ಮಾಡುತ್ತಿದ್ದಾರೆ? ಎಂದು ಅಖಿಲೇಶ್ ವ್ಯಂಗ್ಯವಾಡಿದರು.
ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ₹2,078ರಿಂದ ದಾಖಲೆಯ ₹3,071ಕ್ಕೆ ಏರಿಕೆಯಾಗಿದೆ. ಆದರೆ, ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹಣದುಬ್ಬರ, ನಿರುದ್ಯೋಗ ಮತ್ತು ಆರ್ಥಿಕ ಹಿಂಜರಿತದ ಬಗ್ಗೆ ಬಿಜೆಪಿ ಯಾವಾಗ ನಿಂದನಾ ನಿರ್ಣಯ ತರುತ್ತದೆ ಎಂದು ಅವರು ಪ್ರಶ್ನಿಸಿದರು.
ವರದಿಗಳ ಪ್ರಕಾರ, ವಾಣಿಜ್ಯ ಮತ್ತು ಸಣ್ಣ ಸಿಲಿಂಡರ್ಗಳ ಬೆಲೆಯಲ್ಲಿ ಹೆಚ್ಚಳದ ಬಗ್ಗೆ ಮಾತನಾಡಲಾಗುತ್ತಿದೆ, ಇದು ಸಾಮಾನ್ಯ ಜನರು ಮತ್ತು ವ್ಯವಹಾರಗಳ ಮೇಲೆ ಪರಿಣಾಮ ಬೀರಬಹುದು ಎಂದಿದ್ದಾರೆ.
ಬೆಲೆ ಏರಿಕೆಯ ಪರಿಣಾಮ
ಚುನಾವಣೆ ಮುಗಿಯುತ್ತಿದ್ದಂತೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಬೆಲೆ ಏಕಾಏಕಿ 993 ರೂಪಾಯಿಗಳವರೆಗೆ ಹೆಚ್ಚಾಗಿದೆ. ಇದರ ಬೆನ್ನಲ್ಲೇ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇದರ ಬೆಲೆ ₹3,071.50 ಕ್ಕೆ ಏರಿದೆ.
ಆದಾಗ್ಯೂ, ದೇಶೀಯ ಗ್ರಾಹಕರಿಗೆ ಬಳಸುವ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಪ್ರಸ್ತುತ ಯಾವುದೇ ಬದಲಾವಣೆಯಾಗಿಲ್ಲ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಸ್ಪಷ್ಟಪಡಿಸಿದೆ.
ವಾಣಿಜ್ಯ ಅನಿಲ ಬೆಲೆಗಳಲ್ಲಿನ ನಿರಂತರ ಹೆಚ್ಚಳವು ಸಣ್ಣ ವ್ಯವಹಾರಗಳು, ಹೋಟೆಲ್ ಮತ್ತು ರೆಸ್ಟೋರೆಂಟ್ ವಲಯಗಳ ಮೇಲೆ ಪರಿಣಾಮ ಬೀರಲಾರಂಭಿಸಿದೆ, ಈಗಾಗಲೆ ಆಟೋ ಗ್ಯಾಸ್ ಬೆಲೆ 5 ರೂ. ಹೆಚ್ಚಳವಾಗಿದ್ದು, ಗ್ಯಾಸ್ ಗಾಗಿ ಪರದಾಡುತ್ತಿರುವ ಬಡ ಆಟೋ ಚಾಲಕರು, ಈಗ ಹೆಚ್ಚುವರಿ ಹಣ ನೀಡಬೇಕಾದ ಅನಿರ್ವಾರ್ಯತೆಗೆ ಸಿಲುಕಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇನ್ನೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಗ್ಯಾಸ್ ಬೆಲೆ ಏರಿಕೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಮಹಿಳಾ ಮೀಸಲಾತಿ ಮಸೂದೆ ಕುರಿತಾದ ಉತ್ತರ ನೀಡಿ ಟ್ರೋಲ್ಗೆ ಒಳಗಾಗಿದ್ದಾರೆ.
ಪತ್ರಕರ್ತ 1: ಎಲೆಕ್ಷನ್ ಮುಗಿದ ತಕ್ಷಣ ಸಿಲಿಂಡರ್ ರೇಟ್ ಜಾಸ್ತಿ ಮಾಡಿದ್ದೀರಿ ಅಂತ ಬಹಳಷ್ಟು ಜನ ಆರೋಪ ಮಾಡಿದ್ದಾರೆ. ಏನ್ ಹೇಳ್ತೀರಿ?
— Mutturaju (@Mutturaju7) May 1, 2026
ಪತ್ರಕರ್ತ 2: ಇದರ ವಿರುದ್ಧ ಕಾಂಗ್ರೆಸ್ನವರು ಹೋರಾಟ ಮಾಡಲು ಸಿದ್ದತೆ ನಡೆಸಿದ್ದಾರೆ.
ಶೋಭಕ್ಕ: ಮಹಿಳಾ ಮೀಸಲಾತಿ ಮಸೂದೆ ಮತ್ತು ಡಿಲಿಮಿಟೇಶನ್ ಬಿಲ್ ಅನ್ನು ಇಂಡಿ ಅಲೆಯೆನ್ಸ್ ಸೋಲಿಸಿಬಿಟ್ಟವು. 😆😆😆 pic.twitter.com/qwuKzMIVPy

