ತಿರುವಣ್ಣಾಮಲೈ: ಕಾರ್ತಿಕ ದಿಪೋತ್ಸವದ ಅಂಗವಾಗಿ ಸುಮಾರು 3500 ಕಿ.ಗ್ರಾಂ ತುಪ್ಪ ಬಳಸಿ ಸಂಜೆ 6 ಗಂಟೆಗೆ ಮಹಾಪಾ ದೀಪವನ್ನು ಬೆಳಗಿಸಲಾಗಿದ್ದು, ಮಹಾದೀಪಂ ಸುಮಾರು 35 ಕಿ.ಮೀ ತ್ರಿಜ್ಯದಲ್ಲಿ ಗೋಚರಿಸಿರುವ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶ್ರೀ ಅರ್ಥನರೀಶ್ವರ ಈ ದಿನ ಭಕ್ತರನ್ನು ಆಶೀರ್ವದಿಸಲಿದ್ದಾನೆ ಎಂಬುದು ಭಕ್ತರ ನಂಬಿಕೆ. ಇಡೀ ಪರ್ವತ ಶಿವಲಿಂಗ. ಲಕ್ಷಾಂತರ ಭಕ್ತರು 16 ಕಿ.ಮೀ. ಗಿರಿವಾಲಂ (ಪವಿತ್ರ ಪರ್ವತದ ಸುತ್ತಳತೆ) ಆರತಿ ಬೆಳಗಿ ಪೂಜೆ ಸಲ್ಲಿಸಿದರು.ಈ ವೇಳೆ ಪಟಾಕಿ ಸದ್ದು, ಭಕ್ತರ ಸಂಭ್ರಮ ಮುಗಿಲು ಮುಟ್ಟಿತ್ತು.
ದೇವಾಲಯದಲ್ಲಿ ಮುಂಜಾನೆ ಭರನಿ ದೀಪಂ ಬೆಳಗಲಾಯಿತು. ತುಪ್ಪ ಮತ್ತು ಹತ್ತಿ ನಂದಿಸಿ ದೀಪ ಬೆಳಗಿದ ನಂತರ ಉಳಿದಿರುವ ತೇವಾಂಶದ ಕಪ್ಪು ಬೂದಿ (ಅವರು ತಮಿಳು ಭಾಷೆಯಲ್ಲಿ ‘ಮಾಯಿ’ ಎಂದು ಕರೆಯುತ್ತಾರೆ) ಮಾರ್ಗದ ಅರುದ್ರ ದರಿಸಾನಂ ದಿನದಂದು ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಯಿತು.
ಕ್ಷಣ ಕ್ಷಣದ ತಾಜಾ ಸುದ್ದಿ, ಮಾಹಿತಿಗಾಗಿ Harithalekhani Facebook – Twitter ಅನುಸರಿಸಿ.

