ದೊಡ್ಡಬಳ್ಳಾಪುರ: ಸಾರಿಗೆ ಸಚಿವ ಲಕ್ಷಣ ಸವದಿ ಸರ್ಕಾರಿ ನೌಕರರಾಗಿ ಮಾಡಲು ಸಾಧ್ಯವಿಲ್ಲವೆಂದು ಹೇಳಿದ್ದು ಇದರಿಂದ ಅಕ್ರೋಶಗೊಂಡ ಸಾರಿಗೆ ನೌಕರ ಸಚಿವರ ವಿರುದ್ಧ ಏಕವಚನದಲ್ಲಿ ತಮ್ಮ ಅಕ್ರೋಶ ವ್ಯಕ್ತಪಡಿಸಿ ನಾವು ಸತ್ತಾರೆ ಸರ್ಕಾರಿ ನೌಕರರಾಗಿ ಸಾಯುತ್ತೆವೆಂದು ಹೇಳಿದರು.
ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ಬಿಎಂಟಿಸಿ ಮತ್ತು ಕೆಎಸ್ ಆರ್ಟಿಸಿ ನೌಕರರು ನಡೆಸುತ್ತಿರುವ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ, ಸಾರಿಗೆ ನೌಕರರ ಮುಷ್ಕರ ಭುಗಿಲೆದಿದ್ದು ದೊಡ್ಡಬಳ್ಳಾಪುರದ ಸಾರಿಗೆ ನೌಕರರು ಪ್ರತಿಭಟನಾ ಮೆರವಣಿಗೆ ನಡೆಸಿ ತಮ್ಮ ಅಕ್ರೋಶ ವ್ಯಕ್ತಪಡಿಸಿದರು. (ವಿಡಿಯೋ)
ದೊಡ್ಡಬಳ್ಳಾಪುರ ನಗರದ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ ಸಾರಿಗೆ ನೌಕರರು ಸರ್ಕಾರದ ವಿರುದ್ಧ ತಮ್ಮ ಅಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ನೌಕರರು ಸಾರಿಗೆ ಸಚಿವರ ವಿರುದ್ಧ ಏಕವಚನದಲ್ಲಿ ವಾಗ್ಥಳಿ ನಡೆಸಿ ತಮ್ಮ ಅಕ್ರೋಶ ವ್ಯಕ್ತಪಡಿಸಿದರು. ಸಾಯೋವಾಗ ಸರ್ಕಾರಿ ನೌಕರರಾಗೆ ಸಾಯ್ತೇವೆ ನಾವೇಲ್ಲ, ಸರ್ಕಾರಿ ನೌಕರರನ್ನಾಗಿ ಮಾಡುವವರೆಗೂ ಉಪವಾಸ ಸತ್ಯಾಗ್ರಹ ಮಾಡ್ತೇವೆ, ಕುಟುಂಬದವರೊಂದಿಗೆ ಡಿಪೋ ಮುಂದೆ ಪ್ರತಿಭಟನೆ ಮಾಡ್ತೇವೆ, ನಾವು ಸರ್ಕಾರಿ ನೌಕರರಾಗಿ ಆಗ್ತಿವೊ, ನೀನು ಆದೇಶ ಬದಲಾಸ್ತಿರೋ ನೊಡೋಣವೆಂದು ಸಾರಿಗೆ ಸಚಿವರಿಗೆ ಸವಾಲ್ ಎಸೆದರು. (ವಿಡಿಯೋ)
ಕಾರ್ಮಿಕರು ಅಂದ್ರೆ ಏನಾಂತ ತಿಳ್ಕೊಂಡಿದ್ದಾನೆ, ಮೂರು ದಿನದಿಂದ ಕೇಳ್ತಾ ಇದ್ದೀವಿ ಅವ ಮಾಡಲ್ಲ, ಮಾಡಲ್ಲ ಅಂತಿದ್ದಾನೆ. ನೆರೆ ರಾಜ್ಯ ಆಂದ್ರ ಪ್ರದೇಶದಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಹೇಗೆ ಮಾಡಿದ್ರು, ಬೇರೆ ರಾಜ್ಯದಲ್ಲಿ ಬಸ್ ಗಳು ಖಾಲಿ ಓಡಾಡ್ತಾ ಇದಾವೆ, ನಾವು ಸ್ಟಾಂಡಿಂಗ್ ನಲ್ಲಿ ನಡೆಸ್ತಾ ಇದೇವೆ, ದೇಶದಲ್ಲೇ ನಮ್ಮ ಸಾರಿಗೆ ಮೊದಲನೇ ಸ್ಥಾನದಲ್ಲಿದೆ, ಅಧಿಕಾರಿಗಳಿಂದ ನಷ್ಟವಾಗಿದೆ ಹೊರತು, ನೌಕರರಿಂದ ಸಾರಿಗೆಗೆ ನಷ್ಟ ಆಗಿಲ್ಲ.
ಸವದಿ ಮಾಡ್ಲಿಕ್ಕೆ ಆಗಲ್ಲ ಅಂತ ಹೇಳಿದ್ದಾನೆ, ನಾವು ಬಿಡಕ್ಕೆ ಆಗಲ್ಲ, ಸಂಸಾರ ಸಮೇತ ಉಪವಾಸ ಸತ್ಯಾಗ್ರಹ ಮಾಡ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕು ಮುನ್ನ ಎಪಿಎಂಸಿ ಬಳಿ ಸೇರಿದ ನೌಕರರಿಗೆ ಪೊಲೀಸರ ಬಳಿ ಪ್ರತಿಭಟನೆಗೆ ಅನುಮತಿ ಕೇಳಿದರಾದರೂ ನೀಡಿರಲಿಲ್ಲ, ನಂತರ ಸ್ಥಳಕ್ಕೆ ಡಿವೈಎಸ್ಪಿ ಟಿ.ರಂಗಪ್ಪ ಭೇಟಿ ನೌಕರರಿಗೆ ಶಾಂತಿಯುತ ಪ್ರತಿಭಟನೆ ಬಸ್ ನಿಲ್ದಾಣದಲ್ಲಿ ನಡೆಸಲು ಅನುಮತಿ ನೀಡಿದರು
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

