ಹರಿತಲೇಖನಿ ದಿನಕ್ಕೊಂದು ಕಥೆ: ಬಂಗಾರದ ನವಿಲು| peacock

ಬ್ರಹ್ಮದತ್ತನು ಕಾಶೀರಾಜ್ಯವನ್ನು ಆಳುತ್ತಿದ್ದಕಾಲದಲ್ಲಿ ಬೋಧಿಸತ್ವನು ಒಂದು ಬಂಗಾರದ ನವಿಲಾಗಿ ಜನ್ಮವೆತ್ತಿದನು. ಅದು ಅಪರೂಪವೆಂಬಂತಹ ಅಪ್ಪಟ ಬಂಗಾರದ ನವಿಲಾಗಿತ್ತು (peacock). ಅದು ದಂಡಕಾರಣ್ಯ ಪ್ರಾಂತ್ಯದಲ್ಲಿ ವಿಹರಿಸಿಕೊಂಡಿತ್ತು.

ಬಂಗಾರದ ನವಿಲಿನ (peacock) ಸುದ್ದಿ ಕಿವಿಯಿಂದ ಕಿವಿಗೆ ನಾಡಿನಲ್ಲಿ ಹಬ್ಬಿತು. ಕಾಶೀರಾಜನ ಪತ್ನಿಗೂ ಬಂಗಾರದ ನವಿಲಿನ ಕನಸು ಬಿದ್ದಿತು. ಅವಳು ಅದನ್ನು ತನಗೆ ತರಿಸಿಕೊಡುವಂತೆ ಕಾಶೀರಾಜನಿಗೆ ಹೇಳಿದಳು, ಬಂಗಾರದ ನವಿಲು ದಂಡಕಾರಣ್ಯದಲ್ಲಿರುವುದು ರಾಜನಿಗೆ ಗೊತ್ತಾಯಿತು.

ರಾಜನು ದಂಡಕಾರಣ್ಯ ಪ್ರಾಂತದ ಅಧಿಕಾರಿಯಾಗಿರುವವನಿಗೆ ಆ ನವಿಲನ್ನು ಹಿಡಿದು ತರಲು ಹೇಳಿಕಳಿಸಿದ. ಆ ಅಧಿಕಾರಿಯು ಒಬ್ಬ ಬೇಟೆಗಾರನನ್ನು ಕರೆಸಿ ‘ಈ ನಿನ್ನ ಪ್ರಾಂತದ ಅರಣ್ಯಭಾಗದಲ್ಲಿ ಒಂದು ಬಂಗಾರದ ನವಿಲು ಹಾರಾಡಿಕೊಂಡಿದೆಯಂತೆ. ಅದನ್ನು ಜೀವಂತವಾಗಿ ಹಿಡಿದು ತಂದು ನನಗೆ ಕೊಡು. ನಾನು ಮಹಾರಾಜರಿಂದ ನಿನಗೆ ಬಹುದೊಡ್ಡ ಬಹುಮಾನ ಕೊಡಿಸುತ್ತೇನೆ’ ಎಂದು ಹೇಳಿದನು.

ಅದಕ್ಕೆ ಬೇಟೆಗಾರನು ಒಪ್ಪಿಕೊಂಡನು. ಅವನು ಒಳ್ಳೆಯ ಬಹುಮಾನದ ಆಸೆಯಿಂದ ನವಿಲಿಗಾಗಿ ಹೊಂಚುಹಾಕಿ ಹುಡುಕಿದನು. ಆದರೆ ಅವನು ಎಷ್ಟು ಹುಡುಕಿದರೂ ನವಿಲು ಅವನ ಕಣ್ಣಿಗೆ ಬೀಳಲಿಲ್ಲ.

ಬೇಟೆಗಾರನು ಸತತವಾಗಿ ಏಳು ವರ್ಷಗಳ ಕಾಲ ಹುಡುಕಿದರೂ ನವಿಲು ಅವನ ಬಲೆಗೆ ಸಿಕ್ಕಿ ಬೀಳಲಿಲ್ಲ. ಆ ಬೇಟೆಗಾರ ಸತ್ತೂ ಆಯಿತು. ನವಿಲನ್ನು ಕೇಳಿದ ರಾಣಿಯೂ ಸತ್ತಳು. ಕನಸಿನಲ್ಲಿ ಕಂಡ ನವಿಲಿಗಾಗಿ ರಾಣಿಯು ಹಂಬಲಿಸಿ ಅದು ಸಿಗದ ಕೊರಗಿನಲ್ಲಿ ಸತ್ತಳೆಂದು ರಾಜನಿಗೆ ಕೋಪಬಂತು. ರಾಜನು ‘ದಂಡಕಾರಣ್ಯದಲ್ಲಿ ಇರುವ ಬಂಗಾರದ ನವಿಲನ್ನು ಹಿಡಿದು ಅದರ ಮಾಂಸವನ್ನು ತಿಂದವರಿಗೆ ಜರಾಮರಣಗಳು ಬರುವುದಿಲ್ಲ’ ಎಂದು ಒಂದು ಪ್ರಕಟಣೆಯನ್ನು ಬರೆಸಿ ತನ್ನ ಅರಮನೆಯ ಮಹಾದ್ವಾರದ ಮೇಲೆ ಎಲ್ಲರಿಗೂ ಕಾಣುವಂತೆ ನೇತಾಡಿಸಿದನು.

ಆ ರಾಜನು ತೀರಿಹೋದ ಮೇಲೆ ನಂತರ ಬಂದ ರಾಜರು ನವಿಲನ್ನು ಹಿಡಿಯುವ ಪ್ರಯತ್ನ ಮಾಡಿದರು. ಆದರೆ ಏನೂ ಪ್ರಯೋಜನ ಆಗಲಿಲ್ಲ, ಬಂಗಾರದ ನವಿಲು ಯಾರ ಕೈಗೂ ಸಿಗಲಿಲ್ಲ. ಹೀಗೆ ಆರು ತಲೆಮಾರುಗಳು ಆಗಿ ಹೋದವು.

ಯಾವ ಬೇಟೆಗಾರರಿಗೂ ಅದು ಸಿಗಲೇ ಇಲ್ಲ. ಹೀಗೆಯೇ ಮತ್ತಷ್ಟು ಕಾಲ ಕಳೆಯಿತು. ಏಳನೇ ತಲೆಮಾರಿನ ರಾಜನು ನವಿಲನ್ನು ಹಿಡಿದು ತರಲು ಬೇಟೆಗಾರರನ್ನು ನೇಮಿಸಿ ಕಳಿಸಿದನು. ಅವನಿಗೆ ಮಹಾದ್ವಾರದ ಮೇಲಿದ್ದ ಪ್ರಕಟಣೆಯನ್ನು ನೋಡಿ ನವಿಲನ್ನು ತಿನ್ನುವ ಆಸೆಯಾಗಿತ್ತು.

ಬಂಗಾರದ ನವಿಲಾಗಿದ್ದ ಬೋಧಿಸತ್ವನಿಗೆ ರಾಜನಿಗೆ ಬುದ್ದಿ ಮಾತು ಹೇಳುವ ಮನಸ್ಸಾಯಿತು. ಅದಕ್ಕಾಗಿ ಆತನು ತಾನಾಗಿಯೇ ಒಂದು ಬೇಟೆಗಾರನ ಬಲೆಗೆ ಸಿಕ್ಕಿ ಬಿದ್ದನು. ಬೇಟೆಗಾರನು ಬಂಗಾರದ ನವಿಲನ್ನು ತಂದು ರಾಜನಿಗೆ ಒಪ್ಪಿಸಿ ದೊಡ್ಡ ಬಹುಮಾನ ಪಡೆದು ಹೊರಟುಹೋದನು. ಬಂಗಾರದ ನವಿಲನ್ನು ನೋಡಿ ರಾಜನಿಗೆ ಆಶ್ಚರ್ಯವಾಯಿತು. ನವಿಲಿನ ಗಂಭೀರಭಾವವನ್ನು ನೋಡಿ ಅದರ ಮೇಲೆ ತುಂಬ ಗೌರವ ಬಂತು. ತನ್ನ ಎದುರು ಉತ್ತಮವಾದ ಪೀಠದಲ್ಲಿ ಅದನ್ನು ಕೂರಿಸಿದನು.

ನವಿಲಿನ ರೂಪದಲ್ಲಿರುವ ಬೋಧಿಸತ್ವನು ‘ರಾಜಾ! ನಿನಗೆ ನನ್ನನ್ನು ಕೊಂದು ತಿನ್ನುವ ಉದ್ದೇಶವಿರುವುದು ನನಗೆ ಗೊತ್ತಾಗಿದೆ. ನಾನು ಕೆಲವು ಬುದ್ದಿ ಮಾತುಗಳನ್ನು ಹೇಳಲು ಇಲ್ಲಿಗೆ ಬಂದಿದ್ದೇನೆ’ ಎಂದು ನುಡಿದ. ಅದಕ್ಕೆ ರಾಜನು ‘ನೀನು ಅಪೂರ್ವವಾದ ನವಿಲು. ನನಗೆ ನಿನ್ನನ್ನು ಕೊಂದು ತಿಂದು ಜರಾಮರಣಗಳಿಂದ ದೂರಾಗುವ ಉದ್ದೇಶವಿದೆ. ನಿನ್ನ ಮಾತುಗಳನ್ನು ಕೇಳಲು ನಾನೂ ಉತ್ಸುಕನಾಗಿದ್ದೇನೆ’ ಎಂದು ನುಡಿದನು.

ಅದಕ್ಕೆ ಆ ನವಿಲು ‘ಹುಚ್ಚಾ! ಹುಟ್ಟುವ ಎಲ್ಲ ಜೀವಿಗಳಿಗೆ ಜರಾಮರಣಗಳು ತಪ್ಪಿದ್ದಲ್ಲ. ನನಗೆ ಮರಣವು ಬರುವುದು ನಿಜವೆಂದಾದರೆ ನನ್ನ ಮಾಂಸ ತಿಂದವನಿಗೆ ಸಾವು ಬರುವುದಿಲ್ಲವೆಂದರೇನು ಅರ್ಥ? ನನಗೆ ಬಂಗಾರದ ನವಿಲಿನ ಜನ್ಮ ಬಂದಿರುವುದಕ್ಕೆ ನಾನು ಹಿಂದಿನ ಜನ್ಮದಲ್ಲಿ ಮಾಡಿದ ಪುಣ್ಯದ ಕೆಲಸಗಳು. ಅದರಂತೆ ನೀನು ಪ್ರಜೆಗಳಿಗೆ ಒಳ್ಳೆಯದನ್ನು ಮಾಡುತ್ತ ಧರ್ಮದಿಂದ ರಾಜ್ಯವಾಳಿದರೆ ನಿನಗೂ ಉತ್ತಮ ಜನ್ಮ ಬರುತ್ತದೆ. ಇದನ್ನು ಹೇಳಲೆಂದೇ ಇಲ್ಲಿಗೆ ನಾನಾಗಿಯೇ ಬಂದಿದ್ದೇನೆ’ ಎಂದು ಹೇಳಿತು.

ನವಿಲು ತನ್ನ ಮಾತನ್ನು ಮುಂದುವರಿಸಿ

*ರಾಜಾ! ನನಗೆ ಬಂಗಾರದ ದೇಹ ಬಂದ ಕಾರಣವನ್ನು ಹೇಳುತ್ತೇನೆ ನಾನು ನನ್ನ ಹಿಂದಿನ ಜನ್ಮದಲ್ಲಿ ಈ ರಾಜ್ಯದ ರಾಜನಾಗಿದ್ದೆ. ನನ್ನ ನ್ಯಾಯ ನೀತಿಯ ಪಾಲನೆಯಿಂದ ಧರ್ಮವು ಸರಿಯಾಗಿ ನಿಂತುಕೊಂಡಿತ್ತು. ನಾನು ಅಹಿಂಸೆಯನ್ನೂ ಪಾಲಿಸಿದ್ದೆ. ಅದರ ಫಲದಿಂದ ಈ ಜನ್ಮದಲ್ಲಿ ಬಂಗಾರದ ನವಿಲಾಗಿ ಹುಟ್ಟಿದ್ದೇನೆ’ ಎಂದು ರಾಜನಿಗೆ ಹೇಳಿತು.

ಕಾಶೀರಾಜನು ಬೆರಗಾಗಿ ‘ಏನಿದು? ನಿನ್ನ ಮಾತಿಗೆ ಯಾವುದಾದರೂ ರುಜುವಾತು ಇದೆಯೇ? ನಿನ್ನ ಮಾತನ್ನು ನಾನು ಹೇಗೆ ನಂಬಲಿ?’ ಎಂದು ನವಿಲನ್ನು ಪ್ರಶ್ನಿಸಿದನು. ಅದಕ್ಕೆ ಬಂಗಾರದ ನವಿಲು ‘ಇಲ್ಲದೆ ಉಂಟೆ? ಅರಮನೆಯ ಉದ್ಯಾನದ ಕೊಳದ ಬಳಿ ಅಗೆಸಿದರೆ ನಾನು ಅಂದು ಉಪಯೋಗಿಸಿದ ರಥವು ಕಾಣಿಸುತ್ತದೆ’ ಎಂದು ನುಡಿಯಿತು.

ಕಾಶೀರಾಜನು ಕೊಳದ ಪಕ್ಕದಲ್ಲಿ ಅಗೆಯಿಸಿದಾಗ ಹೂತು ಹೋದ ರಥವು ಕಾಣಿಸಿತು. ಅಂದಿನಿಂದ ರಾಜನು ನವಿಲಿನ ರೂಪದ ಬೋಧಿಸತ್ವನನ್ನು ತನ್ನ ಗುರುವಾಗಿ ಭಾವಿಸಿಕೊಂಡನು. ಬೋಧಿಸತ್ವನು ರಾಜನಿಗೆ ಧರ್ಮವನ್ನು ಬೋಧಿಸುತ್ತ ಇದ್ದು ತನ್ನ ಜನ್ಮವನ್ನು ಮುಗಿಸಿದನು.

ಕೃಪೆ; ಸಾಮಾಜಿಕ ಜಾಲತಾಣ.

ರಾಜಕೀಯ

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ ಸೂಚನೆ: ಡಿಸಿಎಂ ಡಿ.ಕೆ.ಶಿವಕುಮಾರ್

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ

“ಧರ್ಮಸ್ಥಳ ವಿಚಾರದಲ್ಲಿ ಸುಳ್ಳು ಆಪಾದನೆ ಮಾಡಿದ್ದರೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದುʼ ಎಂದು ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಯವರೇ ಭರವಸೆ ನೀಡಿದ್ದಾರೆ”; ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="112789"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಅಂಗಡಿಗಳಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು (Shops robbed) ನಡೆಯುತ್ತಿದ್ದು, ವ್ಯಾಪಾರಿಗಳನ್ನು ಚಿಂತೆಗೀಡುಮಾಡಿದೆ.

[ccc_my_favorite_select_button post_id="112687"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!