ದೊಡ್ಡಬಳ್ಳಾಪುರ: ಜನಪದ ಕಾರ್ಯಕ್ರಮಗಳಿಗೆ ಹಳ್ಳಿಗಾಡಿನಲ್ಲಿರುವ ಆಸಕ್ತಿ ನಗರ ಪ್ರದೇಶಗಳಲ್ಲಿ ಇಲ್ಲವಾಗಿದ್ದು, ಜನಪದದ ಉಳಿವಿಗೆ ನಗರ ಪ್ರದೇಶದ ಪ್ರೋತ್ಸಾಹ ಅಗತ್ಯವೆಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಅಪ್ಪಯ್ಯಣ್ಣ ತಿಳಿಸಿದರು.
ನಗರದ ಡಾ.ರಾಜ್ ಕುಮಾರ್ ಕಲಾ ಮಂದಿರದಲ್ಲಿ ಕೇಂದ್ರ ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ, ಜಾನಪದ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಲಾ ಮಹೋತ್ಸವ 2018-19 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧಾರಾವಾಹಿ ಸಿನಿಮಾಗಳಂಥ ದೃಶ್ಯ ಮಾಧ್ಯಮಗಳಿಂದ ನಾಟಕ ಮತ್ತು ಇನ್ನಿತರ ಜನಪದ ಕಲೆಗಳು ಅಳಿವಿನಂಚಿನಲ್ಲಿವೆ. ಕಲೆಗೆ ಬೆಲೆ ಕೊಡಬೇಕಾಗಿರುವುದು ಎಲ್ಲರ ಜವಾಬ್ದಾರಿಯಾಗಬೇಕೆಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಡಿ.ಸತ್ಯನಾರಾಯಣಗೌಡ ಕಲಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಭಾರತೀಯ ಸಾಂಸ್ಕೃತಿಕ ಮತ್ತು ವಿವಿಧ ರೀತಿಯ ಕಲೆಗಳು ಪ್ರಪಂಚದಾದ್ಯಂತ ಹೆಸರುಗಳಿಸಿವೆ. ನಾವು ಸದಾ ಸಾಂಸ್ಕೃತಿಕ ಮತ್ತು ಜಾನಪದ ಕಲೆಗಳನ್ನು ಪ್ರೋತ್ಸಾಹಿಸಿ, ಕಲೆಯ ಉಳಿವಿಗಾಗಿ ಹೋರಾಡಬೇಕಿದೆ, ಈ ರಾಜಕೀಯ ಜಂಜಾಟದಲ್ಲಿ ಕಲೆ ಎಂಬುದು ಮರೆಯಾಗುತ್ತಿದೆ. ಕಲೆ ಎಂಬುದು ವ್ಯಸನ, ಬಡತನ, ನೋವನ್ನು ಮರೆಸುವ ಔಷಧ. ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದ್ದ ನಾಟಕ ಪ್ರದರ್ಶನಗಳು ಮರೆಯಾಗಿರುವು ಶೋಚನೀಯ ಎಂದು ಬೇಸರ ವ್ಯಕ್ತಪಡಿಸಿದರು.
ಕಲಾ ಮಹೋತ್ಸವದ ಅಂಗವಾಗಿ ಜಾನಪದ ಗೀತೆಗಳು, ಡೊಳ್ಳು ಕುಣಿತ, ಯಕ್ಷಗಾನ, ಏಕ ಪಾತ್ರಾಭಿನಯ, ಜನಪದ ಕೋಲಾಟ,ಭರತನಾಟ್ಯ, ವೀರಗಾಸೆ, ತಮಟೆ ವಾದನ,ಹಗಲು ವೇಷ, ಸಾಮಾಜಿಕ ನಾಟಕ, ಜಾನಪದ ನೃತ್ಯ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ, ಲಗ್ಗೆರೆ ನಾರಾಯಣ ಸ್ವಾಮಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಚ್.ಎಸ್.ಶಿವಶಂಕರ್, ಚಾಲೆಂಜರ್ ಯೂಥ್ ಫೋರಂ ಸಂಸ್ಥಾಪಕ ಡಾ.ಸುನಿಲ್ ಕುಮಾರ್, ತಾಪಂ ಸದಸ್ಯೆ ಚನ್ನಮ್ಮ ರಾಮಲಿಂಗಯ್ಯ, ಪ್ರಾಂಶುಪಾಲರಾದ ಡಾ.ಎಂ ಸುಬ್ರಮಣ್ಯ, ನಿವೃತ್ತ ಜಂಟಿ ನಿರ್ದೇಶಕ ಎಸ್ ನಾರಾಯಣಪ್ಪ, ಮುಖಂಡರಾದ ಡಾ.ಬಂಡ್ಲಹಳ್ಳಿ ವಿಜಯ್ ಕುಮಾರ್, ಕೆ.ನಾಗರತ್ನಮ್ಮ,ರಾಮಚಂದ್ರ ಶ್ಯಾಕಲದೇವನಪುರ, ಸಿದ್ದಯ್ಯ ಚಿಕ್ಕಮಾರನಹಳ್ಳಿ, ಕೃಷ್ಣಪ್ಪ ಕುಕ್ಕನಹಳ್ಳಿ, ಗಾಯಕಿ ಅಶ್ವಿನಿ ಯಲಹಂಕ, ಜಾನಪದ ಕಲಾವಿದೆ ನಿರ್ಮಲ ರವಿಶಾತ್ರಿ, ಜ್ಯೋತಿ ಬಿಡೆ ಬೆಂಗಳೂರು ಮತ್ತಿತರಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

