
ದೊಡ್ಡಬಳ್ಳಾಪುರ, (ನ.20): ಬುಧವಾರ ಆತ್ಮಹತ್ಯೆಗೆ ಶರಣಾದ ಕಛೇರಿ ಪಾಳ್ಯದ ನಿವಾಸಿ ವಿನೋದ್ (29ವರ್ಷ) ಪ್ರಕರಣದ ಕುರಿತಂತೆ, ಗ್ರಾಮಾಂತರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಶಂಕರಪ್ಪ, ಸಫಾರಿ ನಾರಾಯಣಪ್ಪ, ವಸಂತ ಹಾಗೂ ಗುಂಡಣ್ಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಗರದ ಕಚೇರಿ ಪಾಳ್ಯದ ಯುವ ಮುಖಂಡ ವಿನೋದ್ ಆಕಾಲಿಕ ಸಾವು, ನಗರವಾಸಿಗಳನ್ನು ದಿಗ್ಬ್ರಮೆಗೀಡುಮಾಡಿತ್ತು.
ಮೃತ ವಿನೋದ್ ಕಚೇರಿ ಪಾಳ್ಯದ ಜನರ ಸಮಸ್ಯೆಗೆ ಸ್ವಂದಿಸುತ್ತಾ ಜನರ ಬಳಿ ಒಡನಾಟವಿಟ್ಟುಕೊಂಡಿದ್ದ ವ್ಯಕ್ತಿ. ಹೀಗಾಗಿ ರಾಜಕೀಯ ನಾಯಕರು ಸಹ ಆತನನ್ನ ತಮ್ಮ ಪಕ್ಷಕ್ಕೆ ಬರಮಾಡಿಕೊಂಡು ಪಕ್ಷಕ್ಕಾಗಿ ದುಡಿಸಿಕೊಳ್ಳುತ್ತಿದ್ದರು. ಆದರೆ ಎಲ್ಲರೊಂದಿಗೆ ಚೆನ್ನಾಗಿದ್ದ ಆತ ಬುಧವಾರ ಮನೆಯಿಂದ ಹೊರ ಹೋದವನು, ಅದೇ ದಿನ ರಾತ್ರಿ ಶವವಾಗಿ ಪತ್ತೆಯಾಗಿದ್ದ.
ಇತ್ತೀಚೆಗಷ್ಟೆ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದ ವಿನೋದ್, ಸ್ಥಳೀಯ ರಾಜಕೀಯ ಕಿರುಕುಳದಿಂದ ಮಾನಸಿಕವಾಗಿ ನೊಂದು ಆರು ಜನರ ಹೆಸರನ್ನು ಡೆತ್ ನೋಟ್ನಲ್ಲಿ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿತ್ತು.
ತಳಗವಾರ ಕೆರೆಯ ಏರಿ ಮೇಲೆ ಮೊಬೈಲ್, ಚಪ್ಪಲಿ ಹಾಗೂ ಒಂದು ಪತ್ರವನ್ನು ಬರೆದಿಟ್ಟು ಕಾಣೆಯಾಗಿದ್ದರು. ಸ್ಥಳೀಯರು ಮೋಬೈಲ್ ರಿಂಗ್ ಆಗುತ್ತಿರುವುದು ಗಮನಿಸಿ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿತ್ತು.
ವಿನೋದ್ ಡೆತ್ ನೋಟ್ನಲ್ಲಿ ಬರೆದಿರುವ ಹೆಸರುಗಳ ಆಧಾರದ ಮೇಲೆ ಗ್ರಾಮಾಂತರ ಠಾಣೆ ಪೊಲೀಸರು ಕಛೇರಿಪಾಳ್ಯದ ನಿವಾಸಿಗಳಾದ ಸತೀಶ್ ನಾರಾಯಣಪ್ಪ, ಧರಣೇಶ್, ಟಿ.ಮಂಜುನಾಥ್, ಗುಂಡಣ್ಣ, ವಿಶ್ವನಾಥ, ಶಂಕರಪ್ಪ ಇವರ ವಿರುದ್ಧ ದೂರು ದಾಖಲಿಸಿಕೊಂಡಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
