ದೊಡ್ಡಬಳ್ಳಾಪುರ, (ಡಿ.01): ಎಚ್ಐವಿ ಸೋಂಕಿತರ ಪರವಾಗಿ 2017ರಲ್ಲಿ ಕಾನೂನು ಜಾರಿಗೆ ಬಂದಿದೆ. ಸೋಂಕಿತರ ಕುರಿತ ಯಾವುದೇ ತಾರತಮ್ಯ ಮಾಡಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಅರವಿಂದ ಸಾಯಿಬಣ್ಣ ಹಾಗಾರಗಿ ಹೇಳಿದರು.

ಅವರು ನಗರದ ಡಾ.ರಾಜ್ಕುಮಾರ್ ಕಲಾಭವನದಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಹಯೋಗದಲ್ಲಿ ಗುರುವಾರ ನಡೆದ ವಿಶ್ವ ಏಡ್ಸ್ ದಿನ-2022 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಮಾಜದಲ್ಲಿ ಶಾಂತಿ, ಸಹಭಾಳ್ವೆಯಿಂದ ಇರುವಂತೆ ಮಾಡುವ ಸಲುವಾಗಿ ಕಾನೂನು ಜಾರಿಯಲ್ಲಿವೆ. ಆದರೆ ಎಲ್ಲರಿಗೂ ಸಾಮಾಜಿ ಜಾವಾಬ್ದಾರಿ, ನೈತಿಕತೆಯ ಪಾಲನೆ ಮಾಡುವ ಮೂಲಕ ಬದುಕಬೇಕಿದೆ. ಕಾನೂನಿಗಿಂತಲು ಸಾಮಾಜಿಕ ನೈತಿಕೆ ದೊಡ್ಡದಾಗಿರುತ್ತದೆ. ಇದನ್ನು ಅರಿತು ಎಲ್ಲರೊಂದಿಗೂ ಗೌರವಿದಿಂದ ನಡೆದುಕೊಳ್ಳಬೇಕಿದೆ. ವೈದ್ಯಕೀಯ ವಿದ್ಯಾರ್ಥಗಳು ಎಚ್ಐವಿ ಸೋಂಕಿತರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳೂವ ಮೂಲಕ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕಿದೆ. ಕೋವಿಡ್ ಸೇರಿದಂತೆ ತಳಮಟ್ಟದಲ್ಲಿನ ಆರೋಗ್ಯ ಸೇವೆಗಳಲ್ಲಿ ಆಶಾ ಕಾರ್ಯಕರ್ತೆಯರ ಕೆಲಸ ಶ್ಲಾಘನೀಯ. ತಿಂಗಳಲ್ಲಿ ಒಂದು ದಿನ ಸಮ್ಮಿಳನ ಕಾರ್ಯಕ್ರಮವನ್ನು ಎಚ್ಐವಿ ಸೋಂಕಿತರೊಂದಿಗೆ ನಡೆಸವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಲು ನ್ಯಾಯಾಲಯದ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಪ್ರೇಮ್ ಕುಮಾರ್ ಮಾತನಾಡಿ, ಮದರ್ ತೆರೆಸಾ ಅವರು ಜನರ ಸೇವೆ ಮಾಡುವ ಮೂಲಕವೇ ಹೆಸರಾದವರು. ಸೇವಾ ಮನೋಭಾವನೆಯಿಂದ ಸಮಾಜದಲ್ಲಿ ಆರೋಗ್ಯಯುತವಾಗಿ ಎಲ್ಲರೂ ಬದುಕುವಂತೆ ಮಾಡಬೇಕಿದೆ ಎಂದರು.
ಸಮಾರಂಭಕ್ಕು ಮುನ್ನ ನಗರದ ತಾಲೂಕು ಆರೋಗ್ಯ ಆಡಳಿತಾಧಿಕಾರಗಳ ಕಚೇರಿಯಿಂದ ವಿವಿಧ ಶಾಲಾ, ಕಾಲೇಜಗಳಿಂದ ಜಾಥಾ ನಡೆಸಲಾಯಿತು.
ಸಮಾರಭದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ್, ತಾಲ್ಲೂಕು ವಕೀಲರ ಸಂಘಧ ಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಬಿ.ಕೆ.ವಿಜಯೇಂದ್ರ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಹಾಗೂ ನಿಯಂತ್ರಣ ಘಟಕದ ಕಾರ್ಯಕ್ರಮ ಅಧಿಕಾರಿ ಡಾ.ನಾಗೇಶ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಪರಮೇಶ್ವರ, ಜಿಲ್ಲಾ ಪಂಚಾಯಿತಿ ಅಧಿಕಾರಿ ನರಸಿಂಹ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶ್ರೀನಿವಾಸ್, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಧರ್ಮೇಂದ್ರ ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
