ದೊಡ್ಡಬಳ್ಳಾಪುರ: ಮರದಿಂದ ಬಿದ್ದು ತೀವ್ರವಾಗಿ ಗಾಯಗೊಂಡ ವ್ಯಕ್ತಿಯೋರ್ವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ (Dharmasthala Village Development Scheme) ರೂ.30 ಸಾವಿರ ಆರ್ಥಿಕ ನೆರವು ನೀಡಲಾಗಿದೆ.
ತಾಲೂಕಿನ ಮಧುರೆ ಹೋಬಳಿ ಮದಗೊಂಡನಹಳ್ಳಿ ಗ್ರಾಮದ ರಮೇಶ್ ಎಂಬುವರು ಮರದಿಂದ ಬಿದ್ದು ಗಂಬೀರ ಗಾಯಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ಅವರ ಚಿಕಿತ್ಸೆಗಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಡೆ ಅವರು ಮಂಜೂರು ಮಾಡಿದ ರೂ.30,000 ಕ್ರಿಟಿಕಲ್ ಫಂಡ್ನ್ನು ಯೋಜನಾಧಿಕಾರಿ ದಿನೇಶ್ ಹಸ್ತಾಂತರಿಸಿದರು.
ಈ ವೇಳೆ ವಲಯದ ಮೇಲ್ವಿಚಾರಕರಾದ ಗಿರಿಜಾ, ಸೇವಾಪ್ರತಿನಿಧಿ ಜಯಮ್ಮ, ಒಕ್ಕೂಟದ ಅಧ್ಯಕ್ಷೆ ಮಂಜುಳ, ಆಶಾ ಕಾರ್ಯಕರ್ತೆ, ಸಂಘದ ಸದಸ್ಯರು ಉಪಸ್ಥಿತರಿದ್ದರು.