ಸಾವಯವ ಟಾಸ್ಕ್ ಪೋರ್ಸ್ ರಚಿಸುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಾವಯವ ಟಾಸ್ಕ್ ಪೋರ್ಸ್’(ಕಾರ್ಯಪಡೆ)ರಚಿಸುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚಿಸಿದ್ದಾರೆ.

ನಗರದ ಕೃಷಿ ಆಯುಕ್ತರ ಕಚೇರಿಯಲ್ಲಿ ರಾಜ್ಯ ಮಟ್ಟದ ಸಾವಯವ ಕೃಷಿ ಉನ್ನತ ಮಟ್ಟದ ಅಧಿಕಾರಯುಕ್ತ ಸಮಿತಿ ಅಧ್ಯಕ್ಷರಾದ ಆನಂದ್ ಉಪ್ಪಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು. 

2004ರಲ್ಲಿ ದೇಶದಲ್ಲಿ ಪ್ರಥಮ ಬಾರಿಗೆ ಸಾವಯವ ಕೃಷಿ ನೀತಿಯನ್ನು ಕರ್ನಾಟಕ ಸರ್ಕಾರವ ಹೊರತಂದಿದ್ದು ಇದರ ಪರಿಣಾಮವಾಗಿ ರಾಜ್ಯದಲ್ಲಿ ಹಲವಾರು ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳ ಅನುಷ್ಠಾನದಿಂದ ರೈತರಲ್ಲಿ ಹೆಚ್ಚಿನ ಅರಿವು ಮೂಡಿಸಿ ಸಾವಯವ ವಿಸ್ತಿರ್ಣವನ್ನುಸುಮಾರು1.00ಲಕ್ಷ ಹೆಕ್ಟೇರ್ ಗಳಿಗೆ ವಿಸ್ತರಿಸಲಾಗಿದೆ. 2017ರಲ್ಲಿ ಸಾವಯವ ಕೃಷಿ ನೀತಿಯನ್ನು ಪರಿಷ್ಕರಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಸದರಿ ನೀತಿಯನ್ನು ಮತ್ತಷ್ಟು ಉತ್ತೇಜಿತ ಕಾರ್ಯಕ್ರಮಗಳನ್ನೊಳಗೊಂಡಂತೆ ದೇಶಕ್ಕೆ ಮಾದರಿಯಾಗುವಂತಹ ಸಮಗ್ರ ಸಾವಯವ ಕೃಷಿ ನೀತಿಯನ್ನು ಹೊರತರಬೇಕು ಎಂದರು.

ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಕರ್ನಾಟಕ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಈಗಾಗಲೇ “ಬೆಂಗಳೂರು ಸಾವಯಕ ಕೃಷಿ ರಾಜಧಾನಿ” ಎಂದು ಗುರುತಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ “ಕರ್ನಾಟಕವೇ ದೇಶದ ಸಾವಯವ ರಾಜಧಾನಿ” ಎನ್ನುವಂತಾಗಬೇಕು. ಈ ನಿಟ್ಟಿನಲ್ಲಿ ಒಂದು ಕಾರ್ಯಪಡೆ ಸಮಿತಿ ರಚಿಸುವಂತೆ ಬಿ.ಸಿ.ಪಾಟೀಲರು ಸೂಚಿಸಿದರು.

ಸಿರಿಧಾನ್ಯ ರೈತ ಸಿರಿಧಾನ್ಯ ಯೋಜನೆ ಯಶಸ್ವಿಯಾಗಿದ್ದು, ಸಿರಿಧಾನ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ದೇಶೀಯ ಸ್ಥಳೀಯ ಔಷಧಿಭರಿತ ಸಿರಿಧಾನ್ಯಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು.ರಾಜ್ಯದಲ್ಲಿ ಸಿರಿಧಾನ್ಯ ಪ್ರದೇಶವನ್ನು ವಿಸ್ತರಿಸುವ ಜೊತೆಗೆ ಸಿರಿಧಾನ್ಯಗಳ ಸಂಸ್ಕರಣೆಗೆ ಹೆಚ್ಚಿನ ಒತ್ತುಕೊಡವ ಕಾರ್ಯಕ್ರಮಗಳನ್ನು ರೂಪಿಸಬೇಕು. ಅಲ್ಲದೇ ಉತ್ಪಾದಿಸಿದ ಸಿರಿಧಾನ್ಯಗಳ ಉತ್ಪನ್ನಗಳನ್ನು ಸರ್ಕಾರದ ಯೋಜನೆಗಳಾದ ಮಧ್ಯಾೂಹ್ನದ ಬಿಸಿಊಟ, ಸಾರ್ವಜನಿಕ ವಿತರಣಾವ್ಯವಸ್ಥೆ, ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುವ ಆಹಾರಗಳು ಮುಂತಾದ ಕಾರ್ಯಕ್ರಮಗಳಡಿ ಬಳಸಿಕೊಳ್ಳಲು ಕ್ರಮ ಕೈಗೊಳ್ಳಲು ಯೋಜನೆ ರೂಪಿಸಲು ಸಭೆಯಲ್ಲಿ ಸಚಿವರು ಅಧಿಕಾರಿಗಳ ಜೊತೆ ಚರ್ಚಿಸಿದರು.

ಆನಂದ್ ಉಪ್ಪಳ್ಳಿ ಮಾತನಾಡಿ, 2004-05 ನಲ್ಲಿ ಸಾವಯವ ಹೊಸ ಸಾವಯವ ನೀತಿ ಜಾರಿಯಾಗಿದ್ದು, 2017 ರಲ್ಲಿ ನೀತಿಯನ್ನು ಪರಿಷ್ಕರಿಸಲಾಗಿದ್ದು,ಈ ನಿಟ್ಟಿನಲ್ಲಿ ಸಾವಯವ ಕೃಷಿಯನ್ನು ಬೃಹತ್ ಮಟ್ಟದಲ್ಲಿ ರಾಜ್ಯಾದ್ಯಂತ ವಿಸ್ತರಿಸಲು ರೂಪುರೇಷೆ ತಯಾರಿಸಬೇಕು. ಇದಕ್ಕಾಗಿ“ಸಾವಯವ ಟಾಸ್ಕ್ ಪೋರ್ಸ್’’ ರಚಿಸಬೇಕು ಎಂದರು.

ರಾಜ್ಯದ ಎಲ್ಲಾ ಕೃಷಿ ವಿಶ್ವವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಆಧುನಿಕ ಸಾವಯವ ತಾಂತ್ರಿಕತೆಗಳನ್ನು ಒಳಗೊಂಡ ಪ್ರಾತ್ಯಕ್ಷಿತೆಗಳನ್ನು ಮಾದರಿ ಕ್ಷೇತ್ರಗಳನ್ನಾಗಿ ಅಭಿವೃದ್ದಿಪಡಿಸಬೇಕು.ಸಾವಯವ ಉತ್ಫನ್ನಗಳ ಪ್ಯಾಕಿಂಗ್ನಲ್ಲಿ ಉತ್ಪಾದಕರ ಹೆಸರು, ಸರ್ವೇ ನಂ., ಉತ್ಪಾದನಾಪ್ರಮಾಣ, ಖರೀದಿ ಪ್ರಮಾಣಗಳ ಮಾಹಿತಿಗಳನ್ನು ಮುದ್ರಿಸಲು ನಿರ್ಣಯಿಸಲಾಯಿತು. ರಾಜ್ಯದಲ್ಲಿ ಸಿರಿಧಾನ್ಯ ಪ್ರದೇಶವನ್ನು ವಿಸ್ತರಿಸುವ ಜೊತೆಗೆ ಸಿರಿಧಾನ್ಯಗಳ ಸಂಸ್ಕರಣೆಗೆ ಹೆಚ್ಚಿನಒತ್ತುಕೊಡವ ಕಾರ್ಯಕ್ರಮಗಳನ್ನು ರೂಪಿಸಲು ತೀರ್ಮಾನಿಸಲಾಯಿತು.. ಹಾಗೂ  ಸಾವಯವ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಹೆಚ್ಚಿನ ಪ್ರಚಾರ ಒದಗಿಸುವ ಸಲುವಾಗಿ “ಸಾವಯವಮಾತುಕತೆ” ಎಂಬ ಪ್ರಾಯೋಜಿತ ಕಾರ್ಯಕ್ರಮವನ್ನು ಆಕಾಶವಾಣಿ ಮುಖಾಂತರ ರಾಜ್ಯ ವ್ಯಾಪ್ತಿ ಬಿತ್ತರಿಸುವ ನಿರ್ಣಯ ಕೈಗೊಳ್ಳಲಾಯಿತು.

ರೈತ ಸಿರಿ ಯೋಜನೆಯಡಿ ಸಿರಿಧಾನ್ಯಗಳ ಜೊತೆಗೆ ಸ್ಥಳೀಯವಾಗಿ ಹಾಗೂ ವಿರಳವಾಗಿ ಬೆಳೆಯುವ

ಔಷಧೀಯ ಗುಣಗಳುಳ್ಳ ಹಾಗೂ ಹೆಚ್ಚಿನ ಪೌಷ್ಠಿಕಭರಿತ ದೇಶಿ ಭತ್ತ ಹಾಗೂ ಇನ್ನಿತರ ಬೆಳೆಗಳನ್ನು ಸೇರ್ಪಡಿಸುವ ಅವಶ್ಯಕತೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಒಕ್ಕೂಟಗಳಿಂದ ಉತ್ಪಾದಿಸಿದ ಉತ್ಪನ್ನಗಳನ್ನು ಇಲಾಖೆಯಿಂದ ಹೊರತರಲಾಗಿರುವ ಬ್ರ್ಯಾಂಡ್ಗಳ ಹೆಸರಿನಲ್ಲಿ ಮಾರಾಟ ಮಾಡಲು ತಿಳಿಸಲಾಯಿತು ಹಾಗೂ ಉತ್ಪನ್ನಗಳ ಪ್ಯಾಕೆಟ್ ಗಳ ಮೇಲೆ ಉತ್ಪಾದಕರ ಹೆಸರು, ಸರ್ವೇ ನಂ., ಉತ್ಪಾದನಾ ಪ್ರಮಾಣ, ಖರೀದಿ ಪ್ರಮಾಣಗಳ ಮಾಹಿತಿಗಳನ್ನು ಮುದ್ರಿಸಿ ಮಾರಾಟಮಾಡಲು ಕ್ರಮಕೈಗೊಳ್ಳಲು ಎಲ್ಲಾ ಒಕ್ಕೂಟಗಳಿಗೆ ನಿರ್ದೇಶಿಸಲಾಯಿತು.

ರಾಜಕೀಯ

ವಿಜಯೇಂದ್ರಗೆ ಮುಖಭಂಗ.. ಪಟ್ಟು ಸಾಧಿಸಿದ ಡಾ.ಕೆ ಸುಧಾಕರ್‌..!

ವಿಜಯೇಂದ್ರಗೆ ಮುಖಭಂಗ.. ಪಟ್ಟು ಸಾಧಿಸಿದ ಡಾ.ಕೆ ಸುಧಾಕರ್‌..!

ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷರಾಗಿ ಸಂದೀಪ್ ರೆಡ್ಡಿ ನೇಮಕಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಸಂಸದ ಡಾ.ಕೆ.ಸುಧಾಕರ್, ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ವಿಜಯೇಂದ್ರ ಬಣದ ನಾಯಕರು ಸಹ ಸುಧಾಕ‌ರ್ ವಿರುದ್ಧ ಟೀಕಾಪ್ರಹಾರ

[ccc_my_favorite_select_button post_id="102551"]
ವಿಜಯೇಂದ್ರನ ತೆಗೆದುಬಿಡ್ತಾರೆ ಅಂತ ಕೆಲ ನ್ಯೂಸ್ ಚಾನಲ್ ಬಾಸ್‌ಗಳಿಗೆ ಚಿಂತೆಯಾಗಿದೆ; ಯತ್ನಾಳ್ ಲೇವಡಿ

ವಿಜಯೇಂದ್ರನ ತೆಗೆದುಬಿಡ್ತಾರೆ ಅಂತ ಕೆಲ ನ್ಯೂಸ್ ಚಾನಲ್ ಬಾಸ್‌ಗಳಿಗೆ ಚಿಂತೆಯಾಗಿದೆ; ಯತ್ನಾಳ್ ಲೇವಡಿ

ನ್ಯೂಸ್ ಚಾನಲ್ ನಲ್ಲಿ ಸೇರ್ಕೊಂಡು ಅವನ ಪರವಾಗಿಯೇ ಸುದ್ದಿ ಮಾಡ್ತಾ ಇದ್ದಾರೆ. ಅವರನ್ನ ಗಮನಿಸಿದ್ದಾರೆ. ನಿಮ್ದ್ ನೀವ್ ಹೊಡಿತಾ ಇರಿ, ನಮ್ದ್ ನಾವ್ ಮಾಡ್ತಾ ಇರ್ತೀವಿ ಎಂದರು. bjp

[ccc_my_favorite_select_button post_id="102468"]
MahaKumbhamela: ಮಹಾ ಕುಂಭಮೇಳದಲ್ಲಿ ಮಿಂದೆದ್ದ ರಾಷ್ಟ್ರಪತಿ| Video

MahaKumbhamela: ಮಹಾ ಕುಂಭಮೇಳದಲ್ಲಿ ಮಿಂದೆದ್ದ ರಾಷ್ಟ್ರಪತಿ| Video

ರಾಷ್ಟ್ರಪತಿ ದೌಪದಿ ಮುರ್ಮು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನದ ಬಳಿಕ ತ್ರಿವೇಣಿ ಸಂಗಮದಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ. Maha Kumbhamela

[ccc_my_favorite_select_button post_id="102507"]

Aero India 2025: ಏರ್‌ಶೋಗೆ ಇಂದು ಚಾಲನೆ..

[ccc_my_favorite_select_button post_id="102489"]

ಹರ ಹರ ಮಹಾದೇವ!: ಕುಂಭಮೇಳದಲ್ಲಿ ಡಿಸಿಎಂ‌ ಡಿಕೆ

[ccc_my_favorite_select_button post_id="102476"]

ಗುಂಡಿನ ಚಕಮಕಿ: 31 ಮಂದಿ ನಕ್ಸಲರ ಹತ್ಯೆ..

[ccc_my_favorite_select_button post_id="102472"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
Doddaballapura: ಕೌಟುಂಬಿಕ ಕಲಹ.. ಯುವತಿ ಆತ್ಮಹತ್ಯೆ..!

Doddaballapura: ಕೌಟುಂಬಿಕ ಕಲಹ.. ಯುವತಿ ಆತ್ಮಹತ್ಯೆ..!

ಮನೆಯಲ್ಲಿ ನೇಣಿಗೆ ಬಿಗಿದುಕೊಂಡಿದ್ದ ಯುವತಿಯನ್ನು ಆಸ್ಪತ್ರೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ಬರುವ ಮುನ್ನವೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. Suicide

[ccc_my_favorite_select_button post_id="102538"]
ಚಾಲಕನಿಗೆ ಮೂರ್ಛೆ. ಮರಕ್ಕೆ KSRTC ಬಸ್‌ ಡಿಕ್ಕಿ..!

ಚಾಲಕನಿಗೆ ಮೂರ್ಛೆ. ಮರಕ್ಕೆ KSRTC ಬಸ್‌ ಡಿಕ್ಕಿ..!

ಬಸ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಯದೇ ಹೋಗಿದ್ದರೆ ಚಾಲಕನ ನಿಯಂತ್ರಣ ಕಳೆದುಕೊಂಡು ಎಡಭಾಗಕ್ಕೆ ಪಲ್ಟಿಯಾಗಿ ಅಪಾರ ಸಾವು-ನೋವು ಆಗುತ್ತಿತ್ತು KSRTC

[ccc_my_favorite_select_button post_id="102495"]

ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು

[ccc_my_favorite_select_button post_id="102325"]

Doddaballapura: ಬಸ್ ಅಪಘಾತ News update.. ಚಿಕಿತ್ಸೆ

[ccc_my_favorite_select_button post_id="102061"]

Doddaballapura: ಮತ್ತದೇ ಜಾಗದಲ್ಲಿ KSRTC ಬಸ್ ಅಪಘಾತ..!

[ccc_my_favorite_select_button post_id="102046"]

ಆರೋಗ್ಯ

ಸಿನಿಮಾ

ಸೆಲೆಬ್ರಿಟಿಗಳಿಗೆ ಕ್ಷಮೆ ಕೋರಿದ ದರ್ಶನ್.. ಕಾರಣವೇನು..? video ನೋಡಿ

ಸೆಲೆಬ್ರಿಟಿಗಳಿಗೆ ಕ್ಷಮೆ ಕೋರಿದ ದರ್ಶನ್.. ಕಾರಣವೇನು..? video ನೋಡಿ

ಜನ್ಮದಿನದ ಹಿನ್ನೆಲೆಯಲ್ಲಿ ವಿಡಿಯೋ ಮೂಲಕ ಸೆಲೆಬ್ರಿಟಿಗಳಿಗೆ ದರ್ಶನ್ ಸಂದೇಶ ನೀಡಿದ್ದಾರೆ. ಇದೇ ವೇಳೆ ಹಲವ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. Darshan

[ccc_my_favorite_select_button post_id="102428"]
error: Content is protected !!