ಮಣ್ಣಿನ ಆರೋಗ್ಯವನ್ನು ಮಕ್ಕಳಂತೆ ಜೋಪಾನವಾಗಿ ನೋಡಿಕೊಳ್ಳಬೇಕು

ದೊಡ್ಡಬಳ್ಳಾಪುರ: ಮಣ್ಣನ್ನು ಮಕ್ಕಳಂತೆ ಜೋಪಾನವಾಗಿ ನೋಡಿಕೊಳ್ಳದೆ ಇದ್ದರೆ ಅದು ಬೆಳೆಗಳ ಮೇಲಷ್ಟೇ ಪರಿಣಾಮ ಬೀರುವುದಿಲ್ಲ. ನಮ್ಮ ಆರೋಗ್ಯದ ಮೇಲೂ ಕೆಟ್ಟಪರಿಣಾಮ ಬೀರಲಿದೆ ಎಂದು ಸಾಯಿಲ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ವಾಸು ಹೇಳಿದರು.

ಅವರು ತಾಲ್ಲೂಕಿನ ನಾಗಸಂದ್ರ ಗ್ರಾಮದ ಮುದ್ದಪ್ಪ ಅವರ ತೋಟದಲ್ಲಿ ಯುವ ಸಂಚಲನ ವತಿಯಿಂದ ನಡೆದ ಕಳೆ ಹಾಗೂ ಬೆಳೆ ಕುರಿತದಾದ ಕಾರ್ಯಗಾರದಲ್ಲಿ ಮಾತನಾಡಿದರು.

ಮಣ್ಣಿನ ಆರೋಗ್ಯ ಸರಿಯಾಗಿ ಇಲ್ಲದೇ ಇರುವುದೇ ಮನುಷ್ಯನ ಆರೋಗ್ಯವು ಹಾಳಾಗಲು ಕಾರಣವಾಗಿದೆ. ಮಣ್ಣಿನ ಆರೋಗ್ಯ ಸರಿಹೋಗದೆ ಮನುಷ್ಯನ ಆರೋಗ್ಯ ಸರಿಯಾಗುವುದಿಲ್ಲ. ಯಾವುದೇ ರೀತಿಯ ಔಷಧಿ ನೀಡಿದರು ಸಹ ಅದು ತಾತ್ಕಾಲಿನ ಶಮನಷ್ಟೇ ವಿನಹ ಶಾಶ್ವತ ಪರಿಹಾರ ಆಗುವುದಿಲ್ಲ. ಹಸಿರು  ಕ್ರಾಂತಿ ದೇಶದ ಜನರ ಹಸಿವು ನೀಗಿಸಿದೆ ಎನ್ನಲಾಗುತ್ತದೆ. ಆದರೆ ಅದೇ ಸಂದರ್ಭದಲ್ಲಿ ಶತಮಾನಗಳ ಕಾಲದಿಂದ ಆರೋಗ್ಯಕರವಾಗಿದ್ದ ಮಣ್ಣಿಗೆ ಅಳತೆಯೇ ಇಲ್ಲದಂತೆ ರಾಸಾಯನಿಕ ಗೊಬ್ಬರಗಳನ್ನು ಸುರಿದು  ಫಲವತ್ತತೆಯನ್ನು ಹಾಳುಮಾಡಲಾಗಿದೆ. ಮತ್ತೆ ಮಣ್ಣಿನ ಆರೋಗ್ಯ ಸರಿ ಮಾಡಬೇಕಾದರೆ ದಶಕಗಳೇ ಬೇಕಾಗಲಿದೆ ಎಂದು ಹೇಳಿದರು.

ಕಳೆ ಗಿಡಗಳ ಬಗ್ಗೆ ರೈತರಿಗೆ ತಪ್ಪು ಮಾಹಿತಿ ಹಾಗೂ ವಿನಾಕಾರಣ ಭಯಪಡುವಂತೆ ಮಾಡುವ ಮೂಲಕ ರಾಸಾಯನಿಕ ಕಂಪನಿಗಳು ಲಾಭ ಮಾಡುತ್ತಿವೆ. ಯಾವತ್ತು ಸಹ ಮುಖ್ಯ ಬೆಳೆಗೆ ಕಳೆಗಿಡಗಳು ತೊಂದರೆಯುಂಟು ಮಾಡುವುದಿಲ್ಲ.ಆದರೆ ಅವುಗಳನ್ನು ಸಾಂಪ್ರದಾಯಿಕ ವಿಧಾನಗಳ ಮೂಲಕ ನಿಯಂತ್ರಿಸುವ ಕ್ರಮಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕಿದೆ. ಹಿರಿಯ ತಲೆಮಾರಿನ ರೈತರು ಎಂದೂ ಸಹ ರಾಗಿ ಬೆಳೆಗೆ ಕಳೆ ಅಡ್ಡಿಯುಂಟು ಮಾಡಿದ್ದರಿಂದ ಬೆಳೆ ಹಾಳಾಯಿತು, ಇಳುವರಿ ಕುಂಟಿತವಾಯಿತು ಎನ್ನುವ ಮಾತುಗಳನ್ನು ಹೇಳುವುದು ತೀರ ಕಡಿಮೆ ಎಂದರು.  

ಬೆಳೆಗೆ ಅಗತ್ಯ ಇರುವ 16 ಪೋಷಕಾಂಶಗಳು ಮಣ್ಣಿನಲ್ಲಿ ಶೇಖರಣೆಯಾಗಲು, ವೃದ್ಧಿಸಲು ಕಳೆ ಗಿಡಗಳು ನಮ್ಮ ಕಣ್ಣಿಗೆ ಕಾಣದಂತೆ ಸಾಕಷ್ಟು ಉಪಯುಕ್ತ ಕೆಲಸಗಳನ್ನು ಮಾಡುತ್ತವೆ. ಕಳೆಗಿಡಗಳ ಕಾರ್ಯಚಟುವಟಿಕೆಗಳನ್ನೂ ರೈತರು ತಿಳಿದುಕೊಳ್ಳಬೇಕು. ಬರೀ ಮುಖ್ಯ ಬೆಳೆಯಕಡೆಗಷ್ಟೇ ನಮ್ಮ ಗಮನ ಇರುತ್ತದೆ. ಮಣ್ಣಿಗೆ ಆರೋಗ್ಯ, ಫಲವತ್ತತೆ, ಮಣ್ಣಿನ ಆಳಕ್ಕೆ ನೀರು ಇಳಿಯಲು ಬಹುಮುಖ್ಯವಾಗಿ ಕೆಲಸ ಮಾಡುವುದೇ ಕಳೆಗಿಡಗಳು ಎಂದರು.

ಮುಖ್ಯಬೆಳೆಗೆ ಬರುವ ಕೀಟ,ರೋಗಗಳ ನಿಯಂತ್ರಣದಲ್ಲೂ ಕಳೆಗಿಡಗಳ ಪಾತ್ರವು ಮಹತ್ವದ್ದಾಗಿದೆ. ಮುಖ್ಯಬೆಳೆಯ ಬೇರುಗಳು ಮಣ್ಣಿನ ಆಳಕ್ಕೆ ಇಳಿದು ಪೋಷಕಾಂಶಗಳನ್ನು ಪಡೆಯಲು ಕಳೆಗಿಡಗಳು ಸಹಕಾರಿಯಾಗಿವೆ. ಕಳೆ ನಾಶಕ ಔಷಧಿಯನ್ನು ಸಿಂಪರಣೆ ಮಾಡುವುದರಿಂದ ಮಣ್ಣಿನ ಆರೋಗ್ಯದೊಂದಿಗೆ ಮನುಷ್ಯರ ಆರೋಗ್ಯದ ಮೇಲೂ ಕೆಟ್ಟಪರಿಣಾಮ ಬೀರುತ್ತದೆ. ಮಣ್ಣಿನಲ್ಲಿನ ಸೂಕ್ಷ್ಮಾಣು ಜೀವಿಗಳು ಸಾಯುವುದಲ್ಲದೆ ಕೆರೆ, ಕುಂಟೆಗಳಲ್ಲಿನ ಜಲಚರಗಳ ಆಹಾರ ಸರಪಳಿಯು ನಾಶವಾಗಲಿದೆ. ನಿಸರ್ಗದತ್ತವಾದ ಆಹಾರ ಸರಪಣಿ ನಾಶವಾದರೆ ಕೊರೊನಾ ವೈರಸ್ಗಿಂತಲು ದೊಡ್ಡ ವೈರಸ್ ಬೆಳೆವಣಿಗೆ ಮತ್ತು ಹಾವಳಿಗೆ ನಾವಾಗಿಯೇ ದಾರಿಮಾಡಿಕೊಟ್ಟಂತಾಗಲಿದೆ ಎಂದು ಎಚ್ಚರಿಸಿದರು.  

ಕಾರ್ಯಾಗಾರದ ಆಯೋಜಕ ಯುವ ಸಂಚಲದ ಅಧ್ಯಕ್ಷ ಚಿದಾನಂದ್ ಮಾತನಾಡಿ, ಮಣ್ಣಿನ ಆರೋಗ್ಯದಲ್ಲಿ ಬಹು ಬೆಳೆ ಪದ್ದತಿಯ ಪಾತ್ರವು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ರಾಗಿ ಸೇರಿದಂತೆ ಮತ್ತಿತರೆ ಬೆಳೆಗಳ ಮಧ್ಯದಲ್ಲಿ ಅಕ್ಕಡಿ ಸಾಲುಗಳ ಮಹತ್ವ ಮತ್ತು ಅಕ್ಕಡಿ ಪದ್ದತಿಯನ್ನು ಮತ್ತೆ ರೈತರು ಅನುಸರಿಸುವಂತೆ ಮಾಡಲು ಪ್ರಯತ್ನಿಸಲಾಗುವುದು. ಬಯಲು ಸೀಮೆ ಜಿಲ್ಲೆಗಳಲ್ಲಿ ಮಳೆ ಆಶ್ರಯದಲ್ಲಿ ಮುಂಗಾರು ಬೆಳೆ ಬೆಳೆಯುವುದನ್ನು ಮಾತ್ರ ಇತ್ತೀಚಿನ ದಿನಗಳಲ್ಲಿ ಕಾಣುತಿದ್ದೇವೆ. ಆದರೆ ಹಿಂಗಾರು ಬೆಳೆಯ ಕಡೆಗೆ ಮಳೆ ಆಶ್ರಯದ ರೈತರು ಅಷ್ಟಾಗಿ ಆಸಕ್ತಿಯನ್ನೇ ತೋರುತ್ತಿಲ್ಲ. ಹಿಂಗಾರು ಬೆಳೆ ಬೆಳೆಯುವ ಬಗ್ಗೆಯು ರೈತರಲ್ಲಿ ಆಸಕ್ತಿ ಮೂಡಿಸಿ ಬೆಳೆ, ತಳಿಗಳ ಆಯ್ಕೆ ಕುರಿತಂತೆ ಜಾಗೃತಿ ಮೂಡಿಸಲಾಗುವುದು. ಕೆಲ ರೈತರು ಈಗಾಗಲೇ ಆಸಕ್ತಿ ತೋರಿ ಈ ವರ್ಷದ ಹಿಂಗಾರಿನಲ್ಲೆ ಬೆಳೆ ಬೆಳೆಯಲು ಮುಂದೆ ಬಂದಿದ್ದಾರೆ. ಮುಂಗಾರಿನಷ್ಟೇ ಇಳುವರಿಯನ್ನು ಹಿಂಗಾರಿನ ಬೆಳೆಗಳಲ್ಲು ಪಡೆಯಲು ಸಾಕಷ್ಟು ಅವಕಾಶಗಳು ಇವೆ. ನಮ್ಮ ಹಿರಿಯರು ಮುಂಗಾರು, ಹಿಂಗಾರು ಎರಡೂ ಬೆಳೆಗಳಿಗು ಸಮಾನವಾದ ಪ್ರಾಮುಖ್ಯತೆ ನೀಡುತ್ತಿದ್ದ ಉದಾಹರಣೆಗಳು ಇವೆ ಎಂದರು.      

ಕಾರ್ಯಾಗಾರದಲ್ಲಿ ಪ್ರಗತಿಪರ ರೈತರಾದ ಬಚ್ಚಹಳ್ಳಿ ಸತೀಶ್, ಗಂಗಮುತ್ತಯ್ಯ, ಶ್ರವಣೂರು ರೋಹಿತ್, ಲಕ್ಷ್ಮೀದೇವಪುರ ನರಸಿಂಹರಾವ್, ಮಾಗಡಿ ತಾಲ್ಲೂಕಿನ ದೊಡ್ಡರಂಗಯ್ಯನಪಾಳ ಗ್ರಾಮದ ಕೃಷ್ಣಮೂರ್ತಿ, ಗಂಗಾಧರ್, ಯುವ ಸಂಚಲನದ ಸತೀಶ್ಕುಮಾರ್, ದಿವಾಕರ್ನಾಗ್, ಏಟ್ರಿಯ ಸಂಸ್ಥೆಯ ಮಂಜುನಾಥ್ ಇದ್ದರು.

ರಾಜಕೀಯ

ಗ್ಯಾರಂಟಿ ಯೋಜನೆಗಳನ್ನ ಕೊಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಗ್ಯಾರಂಟಿ ಯೋಜನೆಗಳನ್ನ ಕೊಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ಶಾಸಕರೇ ರಾಜ್ಯ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy)

[ccc_my_favorite_select_button post_id="110970"]
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಡಿಫೆನ್ಸ್ ಕಾರಿಡಾರ್ ಸಂಬಂಧ ಸದ್ಯದಲ್ಲೇ ಪ್ರಧಾನಿ ಭೇಟಿ: ಎಂ.ಬಿ. ಪಾಟೀಲ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಡಿಫೆನ್ಸ್ ಕಾರಿಡಾರ್ ಸಂಬಂಧ ಸದ್ಯದಲ್ಲೇ ಪ್ರಧಾನಿ ಭೇಟಿ: ಎಂ.ಬಿ.

ಬೆಂಗಳೂರು ಗ್ರಾಮಾಂತರ-ಕೋಲಾರ-ಚಿಕ್ಕಬಳ್ಳಾಪುರಕ್ಕೆ ಡಿಫೆನ್ಸ್ ಕಾರಿಡಾರ್ ಮಂಜೂರು ಮಾಡುವ ನಮ್ಮ ಮನವಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ: ಎಂ.ಬಿ. ಪಾಟೀಲ (M.B. Patila)

[ccc_my_favorite_select_button post_id="110949"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ನಗರಸಭೆ ವ್ಯಾಪ್ತಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಶೆಡ್ ‌ನಿರ್ಮಾಣ ಮಾಡಲಾಗಿದೆ Municipal council

[ccc_my_favorite_select_button post_id="110824"]
ದೊಡ್ಡಬಳ್ಳಾಪುರ: ಲಾರಿ ಡಿಕ್ಕಿ ಪ್ರಕರಣ.. ಮೃತ ವೃದ್ಧನ ಗುರುತು ಪತ್ತೆ..!

ದೊಡ್ಡಬಳ್ಳಾಪುರ: ಲಾರಿ ಡಿಕ್ಕಿ ಪ್ರಕರಣ.. ಮೃತ ವೃದ್ಧನ ಗುರುತು ಪತ್ತೆ..!

ರಸ್ತೆ ದಾಟುವ ವೇಳೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ವೃದ್ಧನೋರ್ವ ಸಾವನಪ್ಪಿರುವ ಘಟನೆ (Accident) ಡಿಕ್ರಾಸ್ ಬಳಿ ಸಂಭವಿಸಿದೆ.

[ccc_my_favorite_select_button post_id="110927"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!