ದೊಡ್ಡಬಳ್ಳಾಪುರದಲ್ಲಿ ಎಲ್ ಅಂಡ್ ಟಿ ನಿರ್ಮಿಸಿಕೊಟ್ಟ ಲಯನ್ಸ್ ಆರೋಗ್ಯ ಕೇಂದ್ರ ಉದ್ಘಾಟನೆ

ದೊಡ್ಡಬಳ್ಳಾಪುರ: ಆರೋಗ್ಯ ಮತ್ತು ಶಿಕ್ಷಣ ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದೆ.  ಈ ಕ್ಷೇತ್ರಗಳಲ್ಲಿ ಹೆಚ್ಚಿನ ಸಾಮಾಜಿಕ ಸೇವೆಗಳ ಅಗತ್ಯವಿರುವುದನ್ನು ಮನಗಂಡಿರುವ ಲಾರ್ಸನ್ ಅಂಡ್ ಟಾಬ್ರೋ (L&T) ಕಂಪನಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಕಂಪನಿಯ ಸಾಮಾಜಿಕ ಹೊಣೆಗಾರಿಕೆಯಲ್ಲಿ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಲಾರ್ಸನ್ ಅಂಡ್ ಟಾಬ್ರೋ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಅರವಿಂದ್ ಕೆ.ಗರ್‍ಗ್ ತಿಳಿಸಿದರು.

ನಗರದ ಎಪಿಎಂಸಿ ಎದುರಿನ ಲಯನ್ಸ್ ಡಯಾಲಿಸಿಸ್ ಆಸ್ಪತ್ರೆಯ ಮೊದಲ ಮಹಡಿಯಲ್ಲಿ ಲಾರ್ಸನ್ ಅಂಡ್ ಟಾಬ್ರೋ ಕಂಪನಿ ನಿರ್ಮಿಸಿರುವ ಲಯನ್ಸ್ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಗಳಿಸಿದ ಸಂಪತ್ತಿನಲ್ಲಿ ಸಮಾಜ ಸೇವೆಗೆ ಮೀಸಲಿಡುವುದು ಅಗತ್ಯವಾಗಿದ್ದು, ಸೇವೆಯನ್ನು ಪಡೆದುಕೊಂಡವರು ಸಹ ಸಮಾಜಕ್ಕೆ ಋಣಿಯಾಗಿರಬೇಕು.ಲಯನ್ಸ್ ಕ್ಲಬ್ ವತಿಯಿಂದ ನಡೆಯುತ್ತಿರುವ ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರಗಳು, ಡಯಾಲಿಸಿಸ್ ಸೇವೆಗಳು ಶ್ಲಾಘನೀಯವಾಗಿದ್ದು, ಮುಂದೆಯೂ ಇಂತಹ ಸೇವಾ ಕಾರ್ಯಗಳನ್ನು ಕೈಗೊಳ್ಳಲು ನಮ್ಮ ಕಂಪನಿಯ ಸಹಕಾರ ಇದೆ ಎಂದು ತಿಳಿಸಿದರು. 

ಲಯನ್ಸ್ ಜಿಲ್ಲಾ ರಾಜ್ಯಪಲ ಎಂ.ಬಿ.ದೀಪಕ್ ಸುಮನ್ ಸಮಾರಂಭ ಉದ್ಘಾಟಿಸಿ,ದೇಶದಲ್ಲಿ ಹಲವಾರು ಕಂಪನಿಗಳಿದ್ದರೂ ಗಮನಾರ್ಹವಾಗಿ ಸೇವೆ ಸಲ್ಲಿಸುವ ಕೆಲವೇ ಕಂಪನಿಗಳಲ್ಲಿ ಲಾರ್ಸನ್ ಅಂಡ್ ಟಾಬ್ರೋ ಒಂದಾಗಿದೆ. ಸೇವಾ ಕಾರ್‍ಯಗಳಲ್ಲಿ ಲಯನ್ಸ್ ಮುಂಚೂಣಿಯಲ್ಲಿದ್ದು,ದೊಡ್ಡಬಳ್ಳಾಪುರದ ಕ್ಲಬ್‌ನ ಕಾರ್ಯಕ್ರಮಗಳು ಅಭಿನಂದನೀಯ ಎಂದರು.

ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ,ಲಯನ್ ಚಾರಿಟೀಸ್ ಟ್ರಸ್ಟ್ ವತಿಯಿಂದ ನಡೆಸಲಾಗುತ್ತಿರುವ ಡಯಾಲಿಸಿಸ್ ಆಸ್ಪತ್ರೆಯಲ್ಲಿ ಒಂದು ಸಾರಿಯ ಡಯಾಲಿಸಿಸ್‌ಗೆ 1,500 ಖರ್ಚು ಬರುತ್ತಿದ್ದು,ಲಯನ್ಸ್ ಸಂಸ್ಥೆ ಅರ್ಧ ಖರ್ಚು ಭರಿಸುತ್ತಿದೆ. ಈ ದಿಸೆಯಲ್ಲಿ  ಬಡವರಿಗೆ ಉಚಿತವಾಗಿ ರಿಯಾಯಿತಿ ಚಿಕಿತ್ಸೆಗೆ ನೆರವಾಗುವ ದೃಷ್ಟಿಯಿಂದ ಒಂದು ಕೋಟಿ ರೂಪಾಯಿಗಳ ನಿಧಿ ಸಂಗ್ರಹ ಮಾಡಿ ಅದರಿಂದ ಬರುವ ಬಡ್ಡಿ ಹಣವನ್ನು ಬಡವರ ಚಿಕಿತ್ಸೆಗೆ ಬಳಸಿಕೊಳ್ಳಲು ಯೋಜನೆ ಹೊಂದಲಾಗಿದೆ.ಈಗಾಗಲೇ ಹಲವಾರು ದಾನಿಗಳು ಹಣ ನೀಡಿದ್ದು,ಇಚ್ಛೆಯುಳ್ಳವರು ಲಯನ್ಸ್ ಸಂಸ್ಥೆಗೆ ದೇಣಿಗೆ ನೀಡಬಹುದಾಗಿದೆ ಎಂದು ಮನವಿ ಮಾಡಿದರು.

ಲಯನ್ಸ್ ಚಾರಿಟೀಸ್ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಲಾರ್ಸನ್ ಅಂಡ್ ಟಾಬ್ರೋ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಡಿ.ಕೇಶವ ಕುಮಾರ್ ಲಯನ್ಸ್ ಜೋನ್ ಚೇರ್ ಪರ್ಸನ್ ಕೆ.ವಿ.ಪ್ರಭುಸ್ವಾಮಿ, ಲಯನ್ಸ್ ಚಾರಿಟೀಸ್ ಟ್ರಸ್ಟ್ ಕಾರ್ಯದರ್ಶಿ ಎಲ್.ಕೃಷ್ಣಮೂರ್ತಿ, ಖಜಾಂಚಿ ಎಸ್.ನಟರಾಜ್, ಲಯನ್ಸ್ ಕ್ಲಬ್ ಅಧ್ಯಕ್ಷ ಆರ್.ಎಸ್.ಮಂಜುನಾಥ್‌,ಕಾರ್ಯದರ್ಶಿ ಎಂ.ಆರ್.ಶ್ರೀನಿವಾಸ್, ಸಹ ಕಾರ್ಯದರ್ಶಿ ಮಂಗಳ ಗೌರಿ ಪರ್ವತಯ್ಯ ಲಯನ್ಸ್ ಪದಾಧಿಕಾರಿಗಳು ಹಾಜರಿದ್ದರು.

ರಾಜಕೀಯ

ಗ್ರೇಟರ್‌ ಅಲ್ಲ, ಕ್ವಾರ್ಟರ್‌ ಬೆಂಗಳೂರು: ಆರ್.ಅಶೋಕ

ಗ್ರೇಟರ್‌ ಅಲ್ಲ, ಕ್ವಾರ್ಟರ್‌ ಬೆಂಗಳೂರು: ಆರ್.ಅಶೋಕ

ಬೆಂಗಳೂರನ್ನು ಗ್ರೇಟರ್‌ ಅಲ್ಲ, ಕ್ವಾರ್ಟರ್‌ ಬೆಂಗಳೂರು ಮಾಡಿದ್ದಾರೆ. ನಾಡಪ್ರಭು ಕೆಂಪೇಗೌಡರು ಒಂದು ಬೆಂಗಳೂರು ಕಟ್ಟಿದರೆ, ಕಾಂಗ್ರೆಸ್‌ ಸರ್ಕಾರ ಬೆಂಗಳೂರನ್ನು R Ashoka

[ccc_my_favorite_select_button post_id="107127"]
ಡಿಕೆ ಶಿವಕುಮಾರ್ ಜನ್ಮದಿನ; ಆಫ್ರಿಕನ್ ಸಿಂಹ ದತ್ತು ಪಡೆದ ರಾಜ್ಯ ಯುವ ಕಾಂಗ್ರೆಸ್

ಡಿಕೆ ಶಿವಕುಮಾರ್ ಜನ್ಮದಿನ; ಆಫ್ರಿಕನ್ ಸಿಂಹ ದತ್ತು ಪಡೆದ ರಾಜ್ಯ ಯುವ ಕಾಂಗ್ರೆಸ್

ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರ ಜನ್ಮದಿನದ ಪ್ರಯುಕ್ತ ಯುವ ಕಾಂಗ್ರೆಸ್ ವತಿಯಿಂದ ಮೈಸೂರು ಮೃಗಲಯದಲ್ಲಿ

[ccc_my_favorite_select_button post_id="107130"]
ಅಣ್ಣ ಬಂದಾ ಅಣ್ಣ ಬಂದಾ..: ಈ ಸರಿ ಟ್ರಂಪ್ ಹೇಳಿದ್ದೇನು ನೋಡಿ

ಅಣ್ಣ ಬಂದಾ ಅಣ್ಣ ಬಂದಾ..: ಈ ಸರಿ ಟ್ರಂಪ್ ಹೇಳಿದ್ದೇನು ನೋಡಿ

ಇತ್ತೀಚೆಗೆ ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಏನ್ ಏನೋ ಮಾತಾಡುತ್ತಿದ್ದು, ಪ್ರತಿ ಭಾಷಣ ಸುದ್ದಿಗೋಷ್ಠಿಗಳಲ್ಲಿ ಭಾರತದ ಹೆಸರು ತರುತ್ತಿದ್ದಾರೆ

[ccc_my_favorite_select_button post_id="107123"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಮೇ 17ರಿಂದ IPL ಮತ್ತೆ ಆರಂಭ.. ವೇಳಾಪಟ್ಟಿ ಇಲ್ಲಿದೆ

ಮೇ 17ರಿಂದ IPL ಮತ್ತೆ ಆರಂಭ.. ವೇಳಾಪಟ್ಟಿ ಇಲ್ಲಿದೆ

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯಾವಳಿಯನ್ನು ಮೇ 17ರಿಂದ ಮುಂದುವರಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ನಿರ್ಧರಿಸಿದೆ.

[ccc_my_favorite_select_button post_id="106911"]
ಕಳ್ಳತನ ಪ್ರಕರಣ: ಚಿಕ್ಕಬಳ್ಳಾಪುರ ಪೊಲೀಸರಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ವ್ಯಕ್ತಿಯ ಬಂಧನ

ಕಳ್ಳತನ ಪ್ರಕರಣ: ಚಿಕ್ಕಬಳ್ಳಾಪುರ ಪೊಲೀಸರಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ವ್ಯಕ್ತಿಯ ಬಂಧನ

ಅಂಗಡಿಯ ಶೆಟರ್‌ ಮುರಿದು ನಗದು ಕದ್ದು ಪರಾರಿಯಾಗಿದ್ದ ಆರೋಪದ ಅಡಿಯಲ್ಲಿ ದೊಡ್ಡಬಳ್ಳಾಪುರ (Doddaballapura) ತಾಲೂಕಿನ ವ್ಯಕ್ತಿಯೋರ್ವನನ್ನು ಚಿಕ್ಕಬಳ್ಳಾಪುರ

[ccc_my_favorite_select_button post_id="107085"]
Accident: ಕೂಲ್ ಡ್ರಿಂಕ್ ವ್ಯಾನ್ ಪಲ್ಟಿ..!| Video

Accident: ಕೂಲ್ ಡ್ರಿಂಕ್ ವ್ಯಾನ್ ಪಲ್ಟಿ..!| Video

ಚಾಲಕನ ನಿಯಂತ್ರಣ ತಪ್ಪಿದ ಕೂಲ್ ಡ್ರಿಂಕ್ ಸಾಗಿಸುತ್ತಿದ್ದ ವ್ಯಾನ್ ಪಲ್ಟಿಯಾಗಿರುವ ಘಟನೆ (Accident) ಹೆದ್ದಾರಿಯಲ್ಲಿ ನಡೆದಿದೆ.

[ccc_my_favorite_select_button post_id="107015"]

ಆರೋಗ್ಯ

ಸಿನಿಮಾ

ವೇದಿಕೆಯಲ್ಲೇ ಕುಸಿದು ಬಿದ್ದ ನಟ ವಿಶಾಲ್..!| Video

ವೇದಿಕೆಯಲ್ಲೇ ಕುಸಿದು ಬಿದ್ದ ನಟ ವಿಶಾಲ್..!| Video

ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ (Vishal) ಏಕಾಏಕಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

[ccc_my_favorite_select_button post_id="106825"]
error: Content is protected !!