ದೊಡ್ಡಬಳ್ಳಾಪುರ: ಲಾಕ್‌ಡೌನ್‌ ವೇಳೆ ಕರ್ನಾಟಕದಿಂದ ಅತಿಹೆಚ್ಚು ಹಣ್ಣು, ತರಕಾರಿ ರಪ್ತು- ಸಿ.ಎಸ್.ಕರೀಗೌಡ

ದೊಡ್ಡಬಳ್ಳಾಪುರ: ಕೃಷಿ ಉತ್ಪಾದನೆಯಲ್ಲಿ ನಮ್ಮದು ರಫ್ತು ಆಧಾರಿತ ರಾಜ್ಯವಾಗಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಕರ್ನಾಟಕದಿಂದ ರಫ್ತು ಮಾಡಿದ್ದಷ್ಟು ಹಣ್ಣು, ತರಕಾರಿ ದೇಶದ ಬೇರೆ ಯಾವ ರಾಜ್ಯದಲ್ಲು ನಡೆದಿಲ್ಲ ಎಂದು ಕೃಷಿ ಮಾರುಕಟ್ಟೆ ನಿರ್ದೇಶಕ ಸಿ.ಎಸ್.ಕರೀಗೌಡ ಹೇಳಿದರು.

ಅವರು ತಾಲ್ಲೂಕಿನ ಅಪ್ಪಕಾರನಹಳ್ಳಿ ಗ್ರಾಮದ ರೈತ ಗಂಗಬೈರಪ್ಪ ಅವರು ನೀಲಗಿರಿ ತೆರವುಗೊಳಿಸಿ ಅರಣ್ಯ ಆಧಾರಿತ ಕೃಷಿ ಆರಂಭದ ಭಾಗವಾಗಿ ಶುಕ್ರವಾರ ಹಲಸಿನ ಸಸಿ ನೆಟ್ಟು ಮಾತನಾಡಿದರು. 

ಬಯಲು ಸೀಮೆ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಅಂತರ್ಜಲ ಗಣನೀಯವಾಗಿ ಕುಸಿತವಾಗಲು ಹಾಗೂ ಮಣ್ಣಿನ ಫಲವತ್ತತೆ ಹಾಳಾಗಲು ನೀಲಗಿರಿ ಮರ ಮುಖ್ಯ ಕಾರಣವಾಗಿದೆ. ಈ ನಿಟ್ಟಿನಲ್ಲಿ ಎರಡು ವರ್ಷಗಳ ಹಿಂದೆ ಆರಂಭಿಸಲಾದ ನೀಲಗಿರಿ ಮರಗಳ ತೆರವು ಆಂದೋಲನದ ಉದ್ದೇಶ ರೈತರಿಗೆ ಮನವರಿಕೆಯಾಗಿದೆ. ನೀಲಗಿರಿ ಬೆಳೆಯಿಂದ ಒಬ್ಬ ರೈತ ಹಣ ಗಳಿಸಬಹುದು. ಆದರೆ ಅಕ್ಕಪಕ್ಕದ ಇತರೆ ರೈತರ ಭೂಮಿಯಲ್ಲಿ ಯಾವುದೇ ರೀತಿಯ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ ಎಂದರು. 

ನೀಲಗಿರಿ ಮರಗಳನ್ನು ಬೆಳೆಸಿ ಆದಾಯಗಳಿಸುವುದಕ್ಕಿಂತಲು ಹೆಚ್ಚಿನ ಆದಾಯ ಹಾಗೂ ಪರಿಸರ, ಪ್ರಾಣಿ, ಪಕ್ಷಿಗಳಿಗು ಅನುಕೂಲವಾಗುವಂತೆ ಅರಣ್ಯ ಆಧಾರೀತ ಕೃಷಿಯಿಂದ ಪಡೆಯಲು ಸಾಕಷ್ಟು ಅವಕಾಶಗಳಿವೆ. ಹಣ್ಣಿನ ಗಿಡಗಳನ್ನು ಬೆಳೆಸಲು ಕೊಳವೆಬಾವಿ ನೀರಿನ ಆಶ್ರಯ ಅಗತ್ಯ ಎನ್ನುವ ಕಲ್ಪನೆ ತಪ್ಪು. ಕೊಳವೆಬಾವಿ ಇಲ್ಲದೆಯು ಟ್ಯಾಂಕರ್ಗಳ ಮೂಲಕ ಕಡಿಮೆ ಪ್ರಮಾಣದ ನೀರು ಬಳಸಿಕೊಂಡು ಸಸಿಗಳನ್ನು ನೆಟ್ಟು ಪೋಷಣೆ ಮಾಡಲು ಸಾಕಷ್ಟು ಉಪಾಯಗಳನ್ನು ರೈತರು ಇಂದು ಕಂಡುಕೊಂಡಿದ್ದಾರೆ. ಸಸಿಗಳನ್ನು ನೆಟ್ಟ ಒಂದೆರಡು ವರ್ಷಗಳ ಕಾಲ ಬೇಸಿಗೆಯಲ್ಲಿ ಮಾತ್ರ ನೀರು ಅಗತ್ಯ. ಇತರೆ ದಿನಗಳಲ್ಲಿ ಮಳೆ ನೀರಿನಲ್ಲೇ ಅರಣ್ಯ ಆಧಾರಿತ ಕೃಷಿ ಸಾಧ್ಯವಾಗಲಿದೆ ಎಂದರು. 

ಬಯಲು ಸೀಮೆ ಜಿಲ್ಲೆಗಳಲ್ಲಿ ಅಂತರ್ಜಲದ ಮೇಲಿನ ಅವಲಂಭನೆ ಹೆಚ್ಚಾಗುತ್ತಿದೆ. ಹೀಗಾಗಿ ಕೃಷಿಗೆ ನೀರಿನ ಕೊರತೆ ಮತ್ತಷ್ಟು ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಕೃಷಿಯನ್ನು ನಂಬಿ ಜೀವನ ನಡೆಸಲು ಅರಣ್ಯ ಆಧಾರಿತ ಕೃಷಿ ಅನಿವಾರ್ಯವಾಗಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹನುಮೇಗೌಡ, ಮುಖಂಡರಾದ ಮುತ್ತೇಗೌಡ, ಕೆ.ಸುಲೋಚನಮ್ಮ ವೆಂಕಟರೆಡ್ಡಿ, ವಡ್ಡರಹಳ್ಳಿರವಿ, ಆರ್.ಕೆಂಪರಾಜ್, ಶಿವಕುಮಾರ್, ಹಸನ್ ಘಟ್ಟ ಚಂದ್ರಶೇಖರ್, ವೆಂಕಟಾಚಲಪತಿ,ನಾಗಸಂದ್ರ ನಟರಾಜ್,ಗಂಗಾಧರ್,ಡಿ.ಶ್ರೀಕಾಂತ್ ಇದ್ದರು.

ರಾಜಕೀಯ

ಬಮೂಲ್ ಚುನಾವಣೆ: ದೊಡ್ಡಬಳ್ಳಾಪುರದ ಕಣದಲ್ಲಿ ಉಳಿದಿದ್ದು ಆನಂದರು ಮಾತ್ರ..!

ಬಮೂಲ್ ಚುನಾವಣೆ: ದೊಡ್ಡಬಳ್ಳಾಪುರದ ಕಣದಲ್ಲಿ ಉಳಿದಿದ್ದು ಆನಂದರು ಮಾತ್ರ..!

ಮೇ 25ರಂದು ನಡೆಯಲಿರುವ ಬೆಂಗಳೂರು ಸಹಕಾರ ಹಾಲು ಒಕ್ಕೂಟದ (Bamul) ನಿರ್ದೇಶಕ ಸ್ಥಾನದ ಚುನಾವಣೆಗೆ, ದೊಡ್ಡಬಳ್ಳಾಪುರ ಕ್ಷೇತ್ರದಿಂದ ಇಬ್ಬರು ಆನಂದ್ ಮಾತ್ರ ಉಳಿದಿದ್ದಾರೆ.

[ccc_my_favorite_select_button post_id="107442"]
ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ‘ಭೂ ಗ್ಯಾರಂಟಿ’ ಯೋಜನೆ: ಡಿಸಿಎಂ ಡಿಕೆ ಶಿವಕುಮಾರ್

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ‘ಭೂ ಗ್ಯಾರಂಟಿ’ ಯೋಜನೆ: ಡಿಸಿಎಂ ಡಿಕೆ ಶಿವಕುಮಾರ್

“ರಾಜ್ಯ ಸರ್ಕಾರ ಕೇವಲ ಎರಡು ವರ್ಷದ ಸಂಭ್ರಮಾಚರಣೆ ಮಾಡುತ್ತಿಲ್ಲ. ಜನರಿಗೆ ‘ಭೂ ಗ್ಯಾರಂಟಿ’ (Land Guarantee) ಯೋಜನೆ: ಡಿಸಿಎಂ ಡಿಕೆ ಶಿವಕುಮಾರ್ (DK Shivakumar)

[ccc_my_favorite_select_button post_id="107434"]
ಆಪರೇಷನ್ ಸಿಂಧೂರ: ಪಾಕ್‌ಗೆ ಕೇಂದ್ರ ಸರ್ಕಾರದಿಂದಲೇ ಮಾಹಿತಿ: ಜೈಶಂಕ‌ರ್ Video ಪೋಸ್ಟ್ ಮಾಡಿದ ರಾಹುಲ್‌ ಗಾಂಧಿ

ಆಪರೇಷನ್ ಸಿಂಧೂರ: ಪಾಕ್‌ಗೆ ಕೇಂದ್ರ ಸರ್ಕಾರದಿಂದಲೇ ಮಾಹಿತಿ: ಜೈಶಂಕ‌ರ್ Video ಪೋಸ್ಟ್ ಮಾಡಿದ

ಉಗ್ರರ ದಾಳಿ ಬೆನ್ನಲ್ಲೇ ಪಾಕಿಸ್ತಾನದ ಉಗ್ರರ ಅಡಗುತಾಣಗಳ ಗುರಿಯಾಗಿಸಿ ನಡೆಸಿದ 'ಆಪರೇಷನ್ ಸಿಂಧೂರ' (Operation Sindoora) ದಾಳಿ ಕುರಿತು ಕೇಂದ್ರ ಸರ್ಕಾರ ಮುಂಚಿತವಾಗಿಯೆ ಪಾಕಿಸ್ತಾನಕ್ಕೆ ಮಾಹಿತಿ

[ccc_my_favorite_select_button post_id="107328"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕುಟುಂಬದೊಂದಿಗೆ ತಿಮ್ಮಪ್ಪನ ದರ್ಶನ ಪಡೆದ ಗೌತಮ್ ಗಂಭೀರ್

ಕುಟುಂಬದೊಂದಿಗೆ ತಿಮ್ಮಪ್ಪನ ದರ್ಶನ ಪಡೆದ ಗೌತಮ್ ಗಂಭೀರ್

ಭಾರತದ ಕ್ರಿಕೆಟ್ ತಂಡದ ತರಬೇತುದಾರ ಗೌತಮ್ ಗಂಭೀರ್ (Gautam Gambhir) ಅವರು ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

[ccc_my_favorite_select_button post_id="107331"]
ನಡುರಸ್ತೆಯಲ್ಲೇ ಯುವಕನ ಕೊಲೆ..!

ನಡುರಸ್ತೆಯಲ್ಲೇ ಯುವಕನ ಕೊಲೆ..!

ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಯುವಕ ನೋರ್ವನನ್ನು ಬರ್ಬರ ವಾಗಿ ಕೊಲೆ (Murder) ಮಾಡಲಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.

[ccc_my_favorite_select_button post_id="107389"]
ಆಂಧ್ರದಲ್ಲಿ ಮತ್ತೆ ಅಪಘಾತ: ಪ್ರವಾಸಕ್ಕೆ ತೆರಳಿದ್ದ ಬಿಜೆಪಿ ಮುಖಂಡ ಸೇರಿ ಕರ್ನಾಟಕದ ಮೂವರು ಸಾವು

ಆಂಧ್ರದಲ್ಲಿ ಮತ್ತೆ ಅಪಘಾತ: ಪ್ರವಾಸಕ್ಕೆ ತೆರಳಿದ್ದ ಬಿಜೆಪಿ ಮುಖಂಡ ಸೇರಿ ಕರ್ನಾಟಕದ ಮೂವರು

ನಿನ್ನೆಯಷ್ಟೇ ಚಿಕ್ಕಬಳ್ಳಾಪುರ ಜಿಲ್ಲೆಯ ಮೂವರು ಆಂಧ್ರ ಪ್ರದೇಶದಲ್ಲಿ (Andra Pradesh) ನಡೆದ ಕಾರು ಅಪಘಾತದಲ್ಲಿ (Accident) ಸಾವನಪ್ಪಿರುವ ಬೆನ್ನಲ್ಲೇ,

[ccc_my_favorite_select_button post_id="107407"]

ಆರೋಗ್ಯ

ಸಿನಿಮಾ

ಮುಸ್ಸಂಜೆ ಮಾತು ಸಿನಿಮಾಗೆ 17 ವರ್ಷ: ನಟ ಸುದೀಪ್ ಹೇಳಿದ್ದು ಇಷ್ಟು| Video ನೋಡಿ

ಮುಸ್ಸಂಜೆ ಮಾತು ಸಿನಿಮಾಗೆ 17 ವರ್ಷ: ನಟ ಸುದೀಪ್ ಹೇಳಿದ್ದು ಇಷ್ಟು| Video

ಕಿಚ್ಚ ಸುದೀಪ್ (Sudeep) ಮತ್ತು ರಮ್ಯ (Ramya )ಅಭಿನಯದ ಯಶಸ್ವಿ ಚಿತ್ರ ಮುಸ್ಸಂಜೆ ಮಾತು (Mussanje Mathu) ಸಿನಿಮಾ ಬಿಡುಗಡೆಯಾಗಿ ಇಂದಿಗೆ 17 ವರ್ಷ.

[ccc_my_favorite_select_button post_id="107204"]
error: Content is protected !!