ದೊಡ್ಡಬಳ್ಳಾಪುರ: ತಾಲೂಕು ಆಡಳಿತ ಬಿಡುಗಡೆ ಮಾಡಿರುವ ಮಂಗಳವಾರದ ಬುಲೆಟಿನ್ ಮಾಹಿತಿಯಂತೆ ತಾಲೂಕಿನ 42 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ, ಮಂಗಳವಾರದ ಸಂಜೆಯ ವರಗೆ.ದೊಡ್ಡಬಳ್ಳಾಪುರ ತಾಲ್ಲೂಕಿನ 29 ಪುರುಷರು ಹಾಗೂ 13 ಮಹಿಳೆಯರು ಸೇರಿ 42 ಜನರಿಗೆ ಸೋಂಕು ದೃಡಪಟ್ಟಿದ್ದು, 62 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಹರಿತಲೇಖನಿಗೆ ದೊರೆತಿರುವ ಮಾಹಿತಿಯಂತೆ.ಕೋರ್ಟ್ ರಸ್ತೆ ತಲಾ 4, ದೇವರಾಜನಗರ, ವಿದ್ಯಾನಗರ, ವಿನಾಯಕನಗರ ತಲಾ 3, ರಾಜೀವ್ ಗಾಂಧಿ ಕಾಲೋನಿ, ಬಾಶೆಟ್ಟಿಹಳ್ಳಿ, ಮಧುರೆ ದೇವಸ್ಥಾನದ ಸಮೀಪ, ಶಾಂತಿನಗರ, ದರ್ಗಾಜೋಗಹಳ್ಳಿಯಲ್ಲಿ ತಲಾ 2, ಹಾಗೂ ಮಾರಸಂದ್ರ, ಸೋಮೇಶ್ವರ ಬಡಾವಣೆ, ಕುಚ್ಚಪ್ಪನಪೇಟೆ, ಕರೇನಹಳ್ಳಿ, ಮಾದಗೊಂಡನಹಳ್ಳಿ, ರೈಲ್ವೇ ಸ್ಟೇಷನ್, ತಾಲೂಕು ಕಚೇರಿ ರಸ್ತೆ, ಗಂಗಾಧರಪುರ, ಬ್ಯಾಂಕ್ ಸರ್ಕಲ್, ತೂಬಗೆರೆ, ಜೋಡಿ ತಿಮ್ಮಸಂದ್ರ, ಕನ್ನಮಂಗಲ, ಶ್ರೀ ನಗರ, ಸಂಜಯ್ ನಗರ, ಕೊನಘಟ್ಟ, ಭುವನೇಶ್ವರಿ ನಗರ, ಜಾಲಪ್ಪ ಕಾಲೇಜು ರಸ್ತೆ, ತಿರುಮಗೊಂಡನಹಳ್ಳಿ ಮತ್ತು ವಾಸವಿ ರಸ್ತೆಯ ತಲಾ ಒಬ್ಬರಲ್ಲಿ ಸೊಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 1153 ಮಂದಿಗೆ ಸೋಂಕು ತಗುಲಿದ್ದು, 812 ಮಂದಿ ಗುಣಮುಖರಾಗಿದ್ದರೆ 33 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 32 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 276 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರ ಹಾಗೂ ಕೆಂಗೇರಿಯ ಮಹಾವೀರ್ ಜೈನ್ ವಿದ್ಯಾರ್ಥಿ ನಿಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.