ಬೆಂ.ಗ್ರಾ.ಜಿಲ್ಲೆ: ಕರೊನಾ ಸೋಂಕಿತರ ಪ್ರಕರಣಗಳು ದಿನೆ ದಿನೆ ಏರಿಕೆಯಾಗುತ್ತಿರುವ ಆತಂಕದ ನಡುವೆಯೇ, ಜಿಲ್ಲಾ ಆರೋಗ್ಯ ಇಲಾಖೆಯ ವರದಿ ಎಡವಟ್ಟು ಮತ್ತೆ ಆರಂಭವಾಗಿದೆ.
ಈ ಮುನ್ನ ಕೋವಿಡ್-19 ದೃಢ ಪಟ್ಟವರ ಲೆಕ್ಕಾಚಾರದ ವಿಚಾರದಲ್ಲಿ, ತಾಲೂಕು ಹಾಗೂ ಜಿಲ್ಲಾ ವರದಿ ವೆತ್ಯಾಸವಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ ತರಾಟೆ ತೆಗೆದುಕೊಂಡರು ಸಹ ಜಿಲ್ಲಾ ಆರೋಗ್ಯ ಇಲಾಖೆ ತನ್ನ ಕಾರ್ಯವೈಖರಿ ಬದಲಿಸಿಕೊಂಡಿರಲಿಲ್ಲ. ಮತ್ತೆ ಈಗ ಬೆಂ.ಗ್ರಾ.ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಏರಿಕೆ ವರದಿಯಲ್ಲಿ ದೋಷ ಆರಂಭವಾಗಿದೆ.
ಸೋಮವಾರದ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಕರೊನಾ ಬುಲೆಟಿನ್ ಮಾಹಿತಿಯಂತೆ, ಜಿಲ್ಲೆಯ 07 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಮುದ್ರಣವಾಗಿದೆ, ಆದರೆ ಬುಲೆಟಿನ್ ಸರಿಯಾಗಿ ಗಮನಿಸಿದರೆ 08ಮಂದಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯ ದೊಡ್ಡಬಳ್ಳಾಪುರದ ಓರ್ವ ಪುರುಷ ಹಾಗೂ ಓರ್ವ ಮಹಿಳೆಗೆ ಸೋಂಕು ದೃಢಪಟ್ಟಿದೆ ಆದರೆ ಒಟ್ಟು ಲೆಕ್ಕದಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ ಎಂದು ಮುದ್ರಿಸಿರುವುದು ಯಡವಟ್ಟಿಗೆ ಕಾರಣ. ಉಳಿದಂತೆ ಹೊಸಕೋಟೆ ಇಬ್ಬರು ಪುರುಷರು, ಓರ್ವ ಮಹಿಳೆ, ದೇವನಹಳ್ಳಿಯಲ್ಲಿ ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ.
ಪ್ರಸ್ತುತ ಜಿಲ್ಲೆಯಲ್ಲಿ 47ಮಂದಿಗೆ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 113ಕ್ಕೆ ಏರಿಕೆಯಾಗಿದ್ದರೆ, 07 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಆರೋಗ್ಯ ಇಲಾಖೆಯಿಂದ ನಿರಂತರವಾಗಿ ತಪಾಸಣೆ ನಡೆಸಲಾಗುತ್ತಿದ್ದು, 591 ಮಂದಿಯ ಫಲಿತಾಂಶ ಬರಬೇಕಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……