“ಮಕ್ಕಳಲ್ಲಿ ಕೋವಿಡ್ -19: ಭೀತಿ ಮತ್ತು ಮುನ್ನೆಚ್ಚರಿಕೆಗಳು”

ಬೆಂಗಳೂರು: ಸಿಎಸ್.ಐ.ಆರ್.ನ ಹೊಸ ಕಾಯ, ನವದೆಹಲಿಯ ಸಿ.ಎಸ್.ಐ.ಆರ್ ವಿಜ್ಞಾನ ಸಂವಹನ ಮತ್ತು ನೀತಿ ಸಂಶೋಧನೆ ಕುರಿತ ರಾಷ್ಟ್ರೀಯ ಸಂಸ್ಥೆ (ಎನ್.ಐ.ಎಸ್ಸಿ.ಪಿ.ಆರ್.), ಮಕ್ಕಳಲ್ಲಿ ಕೋವಿಡ್ 19 ಕುರಿತಂತೆ ಆನ್ ಲೈನ್ ಅಧಿವೇಶನ ಆಯೋಜಿಸಿತ್ತು.

ಈ ಅಧಿವೇಶನ ಇತ್ತೀಚಿನ ಎರಡನೇ ಅಲೆ ಮತ್ತು ಮಕ್ಕಳ ಮೇಲೆ ಕೋವಿಡ್ -19 ಪರಿಣಾಮ, ಭೀತಿ ಮತ್ತು ಮಕ್ಕಳ ಸುರಕ್ಷತೆಗೆ ಅಗತ್ಯವಾದ ಸೂಕ್ತ ಶಿಷ್ಟಾಚಾರ ಕುರಿತ ವಿಚಾರಗಳ ಬಗ್ಗೆ ಗಮನ ಹರಿಸಿತು.

ಈ ವೆಬಿನಾರ್ ನಲ್ಲಿ ಮುಖ್ಯ ಅತಿಥಿಗಳಾಗಿ ನವದೆಹಲಿಯ ಕೆವಿಎಸ್ (ಎಚ್.ಕ್ಯು) ಹೆಚ್ಚುವರಿ ಆಯುಕ್ತರು (ಶಿಕ್ಷಣ) ಡಾ.ವಿ.ವಿಜಯಲಕ್ಷ್ಮೀ ಮತ್ತು ಅತಿಥಿ ಉಪನ್ಯಾಸಕರಾಗಿ ತಮಿಳುನಾಡಿನ ಚೆನ್ನೈನ ಬಾಲಾಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಕ್ಕಳ ಆರೋಗ್ಯ ವಿಭಾಗದ ಪ್ರೊಫೆಸರ್ ಮತ್ತು ಭಾರತೀಯ ಮಕ್ಕಳ ವೈದ್ಯಶಾಸ್ತ್ರ ಅಕಾಡಮಿಯ ಕಾರ್ಯಕಾರಿ ಮಂಡಳಿಯ 2021ರ ಸದಸ್ಯರಾದ ಪ್ರೊ.ಡಾ.ಆರ್.ಸೋಮಶೇಖರ್ ಭಾಗಿಯಾಗಿದ್ದರು.

ಈ ಕಾರ್ಯಕ್ರಮದಲ್ಲಿ ಸಿ.ಎಸ್.ಐ.ಆರ್-ಎನ್.ಐ.ಎಸ್ಸಿ,ಪಿ.ಆರ್.ನ ಫೇಸ್ ಬುಕ್ ನಲ್ಲಿ ಲಭ್ಯವಿದ್ದ ಸಂಪರ್ಕದ ಮೂಲಕ ಹಲವಾರು ಗಣ್ಯರು, ಬೋಧಕ ವರ್ಗದ ಸದಸ್ಯರು, ಸಂಶೋಧಕರು ಮತ್ತು ವಿಜ್ಞಾನಿಗಳು ಮತ್ತು ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 150 ಪ್ರತಿನಿಧಿಗಳು ಭಾಗವಹಿಸಿದ್ದರು.

ಸಿ.ಎಸ್.ಐ.ಆರ್.-ಎನ್.ಐ.ಎಸ್ಸಿ.ಪಿ.ಆರ್.ನ ನಿರ್ದೇಶಕಿ ಡಾ.ರಂಜನಾ ಅಗರ್ವಾಲ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಎರಡು ಮಹಾನ್ ಸಂಸ್ಥೆಗಳ ನಡುವಿನ ಅನೂಹ್ಯ ಒಡನಾಟವನ್ನು ಪ್ರಸ್ತಾಪಿಸಿ, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆ ಮಂಡಳಿ (ಸಿ.ಎಸ್.ಐ.ಆರ್.) ಮತ್ತು ಕೇಂದ್ರೀಯ ವಿದ್ಯಾಲಯ ಸಂಘಟನ್ (ಕೆ.ವಿ.ಎಸ್.) ಜಿಜ್ಞಾಸಾ ವೇದಿಕೆಯಲ್ಲಿ ಶಾಲಾ ವಿದ್ಯಾರ್ಥಿಗಳಲ್ಲಿ ‘ವೈಜ್ಞಾನಿಕ ಮನೋಭಾವ’ ವನ್ನು ಬೆಳೆಸುವ ಮತ್ತು ಅವರನ್ನು ವಿಜ್ಞಾನ ಆಧಾರಿತವಾಗುವಂತೆ ಮಾಡುವ ಉದ್ದೇಶದಿಂದ. ವಿದ್ಯಾರ್ಥಿಗಳು – ವಿಜ್ಞಾನಿಗಳ ಸಂಪರ್ಕ ಉಪಕ್ರಮವನ್ನು 2017ರ ಮಧ್ಯಭಾಗದಿಂದ ಆರಂಭಿಸಿದೆ ಎಂದು ತಿಳಿಸಿದರು. ಇದಲ್ಲದೆ, ‘ಜಿಜ್ಞಾಸಾ’ ನಿಜಕ್ಕೂ ವಿದ್ಯಾರ್ಥಿಗಳಲ್ಲಿ ಮಾತ್ರವೇ ಅಲ್ಲದೆ, ವಿಜ್ಞಾನಿಗಳಲ್ಲಿಯೂ ಉತ್ಸಾಹ ಹೆಚ್ಚಿಸುತ್ತಿದೆ. ‘ಜಿಜ್ಞಾಸಾ’ ವಿದ್ಯಾರ್ಥಿಗಳಿಗೆ ವಿಜ್ಞಾನಿಗಳೊಂದಿಗೆ ನೇರವಾಗಿ ಸಂವಹನ ನಡೆಸಲು ಅವಕಾಶವನ್ನು ಒದಗಿಸುತ್ತಿದೆ ಮತ್ತು ಆ ಮೂಲಕ ಯುವ ಮನಸ್ಸುಗಳಲ್ಲಿ ನಾವೀನ್ಯತೆಯ ಚಿಂತನೆ ಮತ್ತು ವಿಧಾನಕ್ಕೆ ಪ್ರೇರೇಪಿಸುತ್ತದೆ ಎಂದು ಅವರು ಹೇಳಿದರು. ದೀರ್ಘಾವಧಿಯಲ್ಲಿ, ಇದು ಸಮಾಜಕ್ಕೆ ಪ್ರಯೋಜನಕಾರಿಯಾದ ಎಸ್ ಮತ್ತು ಟಿ ಬೆಳವಣಿಗೆಗಳ ದೃಷ್ಟಿಯಿಂದ ಪ್ರಭಾವಶಾಲಿ ಫಲಶ್ರುತಿಗಳನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದರು.

ಕೆ.ವಿ.ಎಸ್. (ಶೈಕ್ಷಣಿಕ) ಹೆಚ್ಚುವರಿ ಆಯುಕ್ತರಾದ ಡಾ.ವಿ.ವಿಜಯಲಕ್ಷ್ಮೀ, ತಮ್ಮ ಭಾಷಣದಲ್ಲಿ ಜಿಜ್ಞಾಸಾ ವಿದ್ಯಾರ್ಥಿಗಳ ಕನಸನ್ನು ನನಸಾಗಿಸಿದ್ದು, ವಿದ್ಯಾರ್ಥಿಗಳಿಗೆ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಲು ವೇದಿಕೆ ಕಲ್ಪಿಸಿದೆ ಮತ್ತು ವಿಜ್ಞಾನಿಗಳ ಕಾರ್ಯವನ್ನು ಹತ್ತಿರದಿಂದ ನೋಡಲೂ ಅವಕಾಶ ನೀಡಿದೆ ಎಂದರು.

ವರ್ಷವಿಡೀ ಖಾತ್ರಿಯಾಗಿ ನಡೆವ ವಿವಿಧ ರೀತಿಯ ಕಾರ್ಯಕ್ರಮಗಳ ಬಗ್ಗೆ ವಿದ್ಯಾರ್ಥಿಗಳು ಉತ್ಸುಕರಾಗಿರುವುದರಿಂದ ಈ ನಂಟು ತಮ್ಮ ಸಂಸ್ಥೆಗೆ ಸಾಕಷ್ಟು ಯಶಸ್ಸು ತಂದಿದೆ ಎಂದರು. ಹಿಂದೆಂದೂ ಕಂಡು ಕೇಳರಿಯದ ಕೋವಿಡ್ -19 ಸಾಂಕ್ರಾಮಿಕವು ನಮ್ಮ ಜೀವನದ ಪ್ರತಿಯೊಂದು ಕ್ಷೇತ್ರದ ಮೇಲೂ, ಮುಖ್ಯವಾಗಿ ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರಿದೆ ಮತ್ತು ಮಕ್ಕಳ ಮನಸ್ಸಿನ ಮೇಲೆ ಪ್ರತೀಕೂಲ ಪರಿಣಾಮ ಬೀರಿದೆ, ಅದು ಅವರ ಅಧ್ಯಯನದ ಮೇಲಷ್ಟೇ ಅಲ್ಲದೆ, ಅವರು ಗೆಳೆಯರೊಂದಿಗೇ ಕಳೆಯಲೂ ಆಗದಂತೆ ಮಾಡಿದೆ ಎಂದು ಡಾ. ವಿಜಯಲಕ್ಷ್ಮಿ ಹೇಳಿದರು. ಮಕ್ಕಳಿಗೆ ಶಿಕ್ಷಣದ ಒತ್ತಡವನ್ನು ನಿವಾರಿಸಲು ರಾತ್ರಿಯಿಡೀ ಶ್ರಮಿಸಿ ತಮ್ಮ ಶಿಕ್ಷಕರು ಹೇಗೆ ಐಟಿ-ನುರಿತ ತಂತ್ರಜ್ಞರಾದರು ಎಂಬುದನ್ನು ಅವರು ಸ್ಮರಿಸಿದರು.

ಚೆನ್ನೈನ ಎಸ್.ಬಿ.ಎಂ.ಸಿ.ಎಚ್. ಮಕ್ಕಳ ವೈದ್ಯ ಶಾಸ್ತ್ರ ವಿಭಾಗದ ಪ್ರೊಫೆಸರ್ ಮತ್ತು ಐ.ಎ.ಪಿ.ಯ ಇ.ಬಿ. ಸದಸ್ಯ ಪ್ರೊ.ಆರ್.ಸೋಮಶೇಖರ್, “ಮಕ್ಕಳಲ್ಲಿ ಕೋವಿಡ್ -19: ಭೀತಿ ಮತ್ತು ಮುನ್ನೆಚ್ಚರಿಕೆ” ಕುರಿತು ಸೂಕ್ಷ್ಮ ವಿವರಣೆಯೊಂದಿಗೆ ಪ್ರಧಾನ ಭಾಷಣ ಮಾಡಿದರು. ಕೋವಿಡ್ -19 ಮಕ್ಕಳಲ್ಲಿ ಇನ್ನೂ ಸಾಧಾರಣವಾಗಿದೆ ಎಂದು ತಿಳಿಸಿದರು.    ಮಕ್ಕಳು SARS-CoV-2 ವೈರಾಣುವಿಗೆ ಗುರಿಯಾಗಿದ್ದರೂ, ಅವರಲ್ಲಿ ಹೆಚ್ಚಿನವರು ರೋಗಲಕ್ಷಣ ರಹಿತರಾಗಿದ್ದಾರೆ ಮತ್ತು ಕೇವಲ ಶೇ. 1-2ರಷ್ಟು ಮಾತ್ರ ಆಸ್ಪತ್ರೆಗೆ ದಾಖಲಾಗಬೇಕಾಯಿತು ಎಂದರು. ವಯಸ್ಕರಿಂದ ಸೋಂಕು ಮಕ್ಕಳಿಗೆ ಹರಡುವ ಸಾಧ್ಯತೆಗಳ ಬಗ್ಗೆ ಪೋಷಕರಿಗೆ ಎಚ್ಚರಿಕೆ ನೀಡಿದ ಡಾ. ಸೋಮಶೇಖರ್, ಆ ದಿನಗಳಲ್ಲಿ ಮಕ್ಕಳಲ್ಲಿ ಜಠರ ಸಂಬಂಧಿ ಲಕ್ಷಣಗಳು ಹೆಚ್ಚಾಗಿ ಕಾಣಿಸುತ್ತವೆ ಎಂದರು.  ಸಾಮಾನ್ಯ ಜ್ವರ ಮತ್ತು ನೆಗಡಿ ಮತ್ತು ಕೋವಿಡ್ -19 ರೋಗಲಕ್ಷಣಗಳನ್ನು ಹೇಗೆ ಗುರುತಿಸುವುದು ಮತ್ತು ಅವುಗಳನ್ನು ಹೇಗೆ ಪ್ರತ್ಯೇಕವಾಗಿ ನೋಡುವುದು ಎಂಬ ಬಗ್ಗೆ ವಿವರ ನೀಡಿದರು. ಭಾರತದಲ್ಲಿ ಈವರೆಗೆ ಕರ್ನಾಟಕ ರಾಜ್ಯವನ್ನು ಹೊರತು ಪಡಿಸಿ ಮಕ್ಕಳಲ್ಲಿ ಕೋವಿಡ್ -19 ಹೆಚ್ಚಾಗಿ ಬಾಧಿಸಿಲ್ಲ  ಎಂದು ಡಾ. ಸೋಮಶೇಖರ್ ತಿಳಿಸಿ, ಮಕ್ಕಳಿಗೆ ವಿವಿಧ ರೀತಿಯ ಕೋವಿಡ್ ಚಿಕಿತ್ಸೆಯ ಆಯ್ಕೆಗಳ ಬಗ್ಗೆ ವಿವರಿಸಿದರು.  ಅಧಿವೇಶನವನ್ನು ಮುಂದುವರಿಸಿದ ಅವರು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಲು ಕೆಲವು ಕ್ರಮಗಳನ್ನು ಸೂಚಿಸಿದರು: ದೈಹಿಕ ವ್ಯಾಯಾಮ, ಮಕ್ಕಳೊಂದಿಗೆ ಆಟವಾಡುವುದು, ಕುರುಕಲು ತಿಂಡಿ (ಜಂಕ್ ಫುಡ್)ಯನ್ನು ತಿನ್ನದಿರುವುದು, ಉತ್ತಮ ನಿದ್ರೆ ಮಾಡುವುದು, ಮಾಸ್ಕ್ ಗಳನ್ನು ಧರಿಸುವುದು, ಸಮತೋಲಿತ ಆಹಾರ ಸೇವನೆ ಮತ್ತು ವಯಸ್ಸಿಗೆ ಸೂಕ್ತವಾದ ಲಸಿಕೆ ಪಡೆಯುವುದು. ಬಹು ಮುಖ್ಯವಾಗಿದೆ ಎಂದ ಅವರು, ರೋಗಲಕ್ಷಣಗಳು ಮತ್ತು ಮಗುವಿನ ನಡವಳಿಕೆಯಲ್ಲಿ ಬದಲಾವಣೆಗಳನ್ನು ಗಮನಿಸುವಂತೆ ಸಲಹೆ ನೀಡಿದರು.

ಸಿಎಸ್.ಐ.ಆರ್. ಎನ್.ಐ.ಎಸ್ಸಿಪಿಆರ್ ನ ಹಿರಿಯ ಮುಖ್ಯ ವಿಜ್ಞಾನಿ ಡಾ.ವೈ. ಮಾಧವಿ, ಮುಖ್ಯ ವಿಜ್ಞಾನಿ ಆರ್.ಎಸ್. ಜಯಸೋಮು, ಡಾ. ಎನ್.ಕೆ. ಪ್ರಸನ್ನ, ಸಿಬ್ಬಂದಿ ಹಾಜರಿದ್ದರು

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

ರಾಜಕೀಯ

ಗ್ಯಾರಂಟಿ ಯೋಜನೆಗಳನ್ನ ಕೊಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಗ್ಯಾರಂಟಿ ಯೋಜನೆಗಳನ್ನ ಕೊಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ಶಾಸಕರೇ ರಾಜ್ಯ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy)

[ccc_my_favorite_select_button post_id="110970"]
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಡಿಫೆನ್ಸ್ ಕಾರಿಡಾರ್ ಸಂಬಂಧ ಸದ್ಯದಲ್ಲೇ ಪ್ರಧಾನಿ ಭೇಟಿ: ಎಂ.ಬಿ. ಪಾಟೀಲ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಡಿಫೆನ್ಸ್ ಕಾರಿಡಾರ್ ಸಂಬಂಧ ಸದ್ಯದಲ್ಲೇ ಪ್ರಧಾನಿ ಭೇಟಿ: ಎಂ.ಬಿ.

ಬೆಂಗಳೂರು ಗ್ರಾಮಾಂತರ-ಕೋಲಾರ-ಚಿಕ್ಕಬಳ್ಳಾಪುರಕ್ಕೆ ಡಿಫೆನ್ಸ್ ಕಾರಿಡಾರ್ ಮಂಜೂರು ಮಾಡುವ ನಮ್ಮ ಮನವಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ: ಎಂ.ಬಿ. ಪಾಟೀಲ (M.B. Patila)

[ccc_my_favorite_select_button post_id="110949"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ನಗರಸಭೆ ವ್ಯಾಪ್ತಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಶೆಡ್ ‌ನಿರ್ಮಾಣ ಮಾಡಲಾಗಿದೆ Municipal council

[ccc_my_favorite_select_button post_id="110824"]
ದೊಡ್ಡಬಳ್ಳಾಪುರ: ಲಾರಿ ಡಿಕ್ಕಿ ಪ್ರಕರಣ.. ಮೃತ ವೃದ್ಧನ ಗುರುತು ಪತ್ತೆ..!

ದೊಡ್ಡಬಳ್ಳಾಪುರ: ಲಾರಿ ಡಿಕ್ಕಿ ಪ್ರಕರಣ.. ಮೃತ ವೃದ್ಧನ ಗುರುತು ಪತ್ತೆ..!

ರಸ್ತೆ ದಾಟುವ ವೇಳೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ವೃದ್ಧನೋರ್ವ ಸಾವನಪ್ಪಿರುವ ಘಟನೆ (Accident) ಡಿಕ್ರಾಸ್ ಬಳಿ ಸಂಭವಿಸಿದೆ.

[ccc_my_favorite_select_button post_id="110927"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!