ದೊಡ್ಡಬಳ್ಳಾಪುರ: ಆಗಸ್ಟ್ 14 ರಂದು ನಡೆದ ಬೃಹತ್ ಲೋಕ ಅದಾಲತ್ ನಲ್ಲಿ 2890 ಪ್ರಕರಣಗಳು ಇತ್ಯರ್ಥಗೊಂಡಿದ್ದು ಸುಮಾರು 33,02,625/- ಮೊತ್ತದ ವ್ಯವಹಾರಗಳು ಸುಖಾಂತ್ಯಗೊಂಡಿವೆ, ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಮ್ಮ ತಾಲ್ಲೂಕು 3 ನೇ ಸ್ಥಾನವನ್ನು ಪಡೆದಿದೆ ಎಂದು ತಾಲ್ಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿ ದೀಪ ಕೆ.ಆರ್ ತಿಳಿಸಿದ್ದಾರೆ.
ಆ.14ರಂದು ನಡೆದ ಮೆಗಾ ಲೋಕ ಆದಾಲತ್ ನಲ್ಲಿ 5 ನ್ಯಾಯಾಲಯದಿಂದ 67 ಸಿವಿಲ್ ಪ್ರಕರಣಗಳು, 2823 ಕ್ರಿಮಿನಲ್ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥವಾಗುವ ಮೂಲಕ ಶೀಘ್ರ ನ್ಯಾಯಾದಾನವಾಗಿದೆ. ಇದರಲ್ಲಿ ಅತೀ ಮುಖ್ಯವಾಗಿ 24 ಹಿರಿಯ ನಾಗರೀಕರ ವ್ಯಾಜ್ಯಗಳು, 34 ಪಾಲು ವಿಭಾಗ ದಾವೆಗಳು ರಾಜಿಯಲ್ಲಿ ಅಂತ್ಯವಾಗಿವೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಚೆಕ್ ಪ್ರಕರಣಗಳು ರಾಜಿಯಲ್ಲಿ ಅಂತ್ಯವಾಗಿರುವು ವಿಶೇಷವಾಗಿರುತ್ತದೆ ಎಂದವರು ತಿಳಿಸಿದ್ದಾರೆ.
ಮೆಗಾ ಲೋಕ ಅದಾಲತ್ ಯಶ್ವಸಿಗೆ ಸಹಕರಿಸಿದ ಎಲ್ಲಾರಿಗೂ ಧನ್ಯವಾದಗಳು ಎಂದು ತಾಲ್ಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಅರವಿಂದ ಸಾಯಿಬಣ್ಣ ಹಾಗರಗಿ ಹಾಗೂ ಸದಸ್ಯ ಕಾರ್ಯದರ್ಶಿ ದೀಪ ಕೆ.ಆರ್ ಹೇಳಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..