ದೊಡ್ಡಬಳ್ಳಾಪುರ: ಕ್ಷಯ ರೋಗದಿಂದ ಬಳಲುತ್ತಿರುವ 11ಮಂದಿಯನ್ನು ದಾನಿಗಳು ದತ್ತು ಪಡೆದಿದ್ದು, ಚಿಕಿತ್ಸೆ ಮುಗಿಯುವರೆಗೂ ದತ್ತು ಪಡೆದು ಆಹಾರ ಧಾನ್ಯಗಳನ್ನು ವಿತರಿಸುವ ಜವಬ್ದಾರಿ ಹೊತ್ತಿದ್ದಾರೆ.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾನಿಗಳು ದತ್ತು ಪಡೆದರು.
ಈ ವೇಳೆ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ನಾಗೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ, ಟಿಬಿ ರಾಯಭಾರಿ ಡಾ.ಹುಲಿಕಲ್ ನಟರಾಜ್, ಗ್ರಾಮಪಂಚಾಯಿತಿ ಸದಸ್ಯೆ ನಾಗರತ್ನಮ್ಮ, ಜಿಲ್ಲಾ ಫಾರ್ಮಸಿಸ್ಟ್ ಜಿಲಾನಿ, ಆರತಿ ಬಸವರಾಜು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಎನ್ ಟಿಇಪಿ ಸಿಬ್ಬಂದಿಗಳು ಮತ್ತು ಡಿಎಪಿಸಿಯು ಸಿಬ್ಬಂದಿ ಹಾಜರಿದ್ದರು.
ಕಾರ್ಯಕ್ರಮದಲ್ಲಿ ದಾನಿಗಳನ್ನು ಅಭಿನಂದಿಸಿ, ಸನ್ಮಾನಿಸಲಾಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….