ಹರಿತಲೇಖನಿ ದಿನಕ್ಕೊಂದು ಕಥೆ: ಪರಿವರ್ತನೆ| Daily Story

Daily Story: ಒಂದೂರಿನಲ್ಲಿ ಒಬ್ಬ ರಾಜನಿದ್ದ. ಈ ಅರಸ ಬಹಳ ಹೃದಯವಂತ; ಆದರೆ, ಅಷ್ಟೇ ಸೋಮಾರಿ. ತನ್ನ ‘ರಾಜ್ಯಕ್ಕೆ ಒಳ್ಳೆಯ ಆಡಳಿತ ಕೊಡುವುದಿರಲಿ, ಸ್ವತಃ ಪ್ರಜೆಗಳನ್ನೂ ಸರಿಯಾಗಿ ಮಾತನಾಡಿಸುತ್ತಿರಲಿಲ್ಲ.

ಅರಸ ಮಾಡುತ್ತಿದ್ದುದು ಎರಡೇ ಕೆಲಸ. ಒಂದು ತಿನ್ನುವುದು, ಇನ್ನೊಂದು ಮಲಗುವುದು. ಬರ ಬರುತ್ತಾ ಅವನ ಆರೋಗ್ಯ ಹದಗೆಡತೊಡಗಿತು. ದೇಹದಲ್ಲಿ ಬೊಜ್ಜು ತುಂಬಿ ಅನಾರೋಗ್ಯ ಪೀಡಿತನಾದ. ಎದ್ದೇಳಲೂ ಆಗದಂತಹ ಪರಿಸ್ಥಿತಿ ಬಂತು.

ತನ್ನ ಮಂತ್ರಿಯನ್ನು ಕರೆದು ಅರಮನೆಗೇ ವೈದ್ಯರನ್ನು ಕರೆಯಲು ಆಜ್ಞೆ ಮಾಡಿದ. ಆದರೆ ಯಾವ ವೈದ್ಯರೂ ರಾಜನ ಬಳಿ ಬರಲಿಲ್ಲ. ಆಗ ಒಬ್ಬ ಪ್ರಜೆ ಬಂದು ರಾಜನ ಬಳಿ ಹೀಗೆ ಹೇಳಿದ:

‘ಪ್ರಭುಗಳೇ, ಇಲ್ಲೇ ಎರಡು ಕಿಲೋ ಮೀಟರ್ ದೂರದಲ್ಲಿ ಒಬ್ಬ ಸಾಧು ಇದ್ದಾನೆ. ಆತ ಬೊಜ್ಜಿನಿಂದ ಬರುವ ಕಾಯಿಲೆಗೆ ಒಳ್ಳೆಯ ಔಷಧಿ ಕೊಡುತ್ತಾನೆ. ಆತ ಕೊಡುವ ಮದ್ದಿನಿಂದ ಬೊಜ್ಜು ಕರಗಿ ಬೇಗನೆ ಕಾಯಿಲೆ ವಾಸಿಯಾಗುತ್ತದೆ’ ಎಂದ.

‘ಆ ಸಾಧು ಸಂತನನ್ನು ಅರಮನೆಗೆ ಬರಹೇಳು’ ಎಂದು ಆಜ್ಞೆ ಮಾಡಿದ ಮಹಾರಾಜ.

‘ಪ್ರಭುಗಳೇ, ಆ ಸಾಧು ಸಂತ ಅರಮನೆಗೆ ಬರಲಾರ; ತಾವೇ ಅಲ್ಲಿಗೆ ದಯಮಾಡಿಸಬೇಕು. ಅದೂ ಕೂಡ ಯಾವುದೇ ವಾಹನದಲ್ಲಿ ಹೋಗುವಂತಿಲ್ಲ; ಕಾಲ್ನಡಿಗೆಯಲ್ಲೇ ಹೋಗಬೇಕು. ಹಾಗಿದ್ದರೆ ಮಾತ್ರ. ಆತ ಚಿಕಿತ್ಸೆ ಕೊಡುತ್ತಾನೆ’ ಎಂದ.

ಕೊನೆಗೂ ರಾಜ ಹೇಗೋ ಪ್ರಯಾಸಪಟ್ಟು ನಡೆದುಕೊಂಡೇ ಸಾಧು ಸಂತನ ಆಶ್ರಮಕ್ಕೆ ಹೋದ. ಆದರೆ ಅಲ್ಲಿ ಆ ಸಾಧು ಸಂತ ಇರಲೇ ಇಲ್ಲ. ಮರುದಿನ ಪುನಃ ರಾಜ ನಡೆದುಕೊಂಡೇ ಚಿಕಿತ್ಸೆಗಾಗಿ ತೆರಳಿದ. ಮಾರನೆ ದಿನವೂ ಸಾಧುಸಂತ ಕಣ್ಮರೆ.

ಮೂರನೆ ದಿನ, ನಾಲ್ಕನೆ ದಿನ… ಹೀಗೆ ಒಂದು ತಿಂಗಳು ಪೂರ್ತಿ ಎರಡೆರಡು ಕಿಲೋ ಮೀಟರ್ ನಡೆದುಕೊಂಡೇ ಆಶ್ರಮಕ್ಕೆ ಹೋಗಿ ಬಂದ ಆ ಮಹಾರಾಜ. ಒಂದು ತಿಂಗಳು ಕಳೆದು ಮತ್ತೊಂದು ದಿನ ಮಹಾರಾಜ ಆಶ್ರಮಕ್ಕೆ ಬಂದಾಗ ಸಾಧು ಸಂತ ಪ್ರತ್ಯಕ್ಷನಾದ.

ಅಷ್ಟು ಹೊತ್ತಿಗೆ ಮಹಾರಾಜನ ಬೊಜ್ಜು ಕರಗಿ ತೂಕವೂ ಬಹಳಷ್ಟು ಇಳಿದು ಹೋಗಿತ್ತು. ಅರಸನ ಆರೋಗ್ಯ ಸಾಕಷ್ಟು ಸುಧಾರಿಸತೊಡಗಿತ್ತು.

ಕೊನೆಯ ದಿನ ಮಹಾರಾಜನನ್ನು ಪರೀಕ್ಷೆ ಮಾಡಿದ ಸಾಧು ಸಂತ, ‘ಪ್ರಭು… ನೀವು ಬರೀ ತಿಂದು ಮಲಗಿದರೆ ಇದೇ ರೀತಿ ತೂಕ ಏರಿ ಬೊಜ್ಜು ತುಂಬಿ ಆರೋಗ್ಯ ಹದಗೆಡುತ್ತದೆ. ಅದಕ್ಕಾಗಿ ದಿನ ನಿತ್ಯ ಐದೈದು ಕಿಲೋಮೀಟರ್ ನಡೆಯಬೇಕು.
ನೀವು ಬೊಜ್ಜು ಕರಗಿಸಿಕೊಳ್ಳಬೇಕು ಎಂದೇ ನಾನು ಒಂದು ತಿಂಗಳು ನೀವು ಬರುವ ಹೊತ್ತಿನಲ್ಲಿ ಮರೆಯಲ್ಲಿ ಇರುತ್ತಿದ್ದೆ. ಆದರೆ ನಿಮ್ಮ ದೈಹಿಕ ಸ್ಥಿತಿಯನ್ನು ಗಮನಿಸುತ್ತಲೇ ಇದ್ದೆ. ಈಗ ನೀವು ಆರಾಮವಾಗಿದ್ದೀರಿ. ಪ್ರತಿನಿತ್ಯ ಬರೀ ತಿಂದು ಮಲಗುವುದನ್ನು ಬಿಟ್ಟು ರಾಜ್ಯದ ಜನರ ಹಿತಾಸಕ್ತಿ ಗಮನಿಸಿ. ಆರೋಗ್ಯದ ಕಡೆ ನಿಗಾ ವಹಿಸಿ, ನಡಿಗೆಯನ್ನು ಸತತವಾಗಿ ಮಾಡಿ. ನೀವು ದೀರ್ಘಕಾಲ ಬಾಳುವಿರಿ..’ ಎಂದು ಸಲಹೆ ಕೊಟ್ಟ.

ರಾಜ ಸೋಮಾರಿತನ ಬಿಟ್ಟ. ಸಾಧುಸಂತನ ಮಾತನ್ನು ಚಾಚೂ ತಪ್ಪದೆ ಪಾಲಿಸತೊಡಗಿದ. ಬೇಗ ಆರೋಗ್ಯವಂತನಾದ.

ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಾಗಿಲ್ಲ)

ಒಂದೇ ತಿಂಗಳಲ್ಲಿ ಸಾಕಷ್ಟು ಮನ ಪರಿವರ್ತನೆ ಮಾಡಿಕೊಂಡ. ಪ್ರಜೆಗಳ ಕಷ್ಟ ಸುಖ ವಿಚಾರಿಸತೊಡಗಿದ. ಉತ್ತಮ ಆಡಳಿತ ನೀಡಿದ. ಪ್ರಜೆಗಳೆಲ್ಲರಿಗೂ ಖುಷಿ, ಸಮಾಧಾನವಾಯಿತು.p

ರಾಜಕೀಯ

ಗ್ಯಾರಂಟಿ ಯೋಜನೆಗಳನ್ನ ಕೊಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಗ್ಯಾರಂಟಿ ಯೋಜನೆಗಳನ್ನ ಕೊಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ಶಾಸಕರೇ ರಾಜ್ಯ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy)

[ccc_my_favorite_select_button post_id="110970"]
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಡಿಫೆನ್ಸ್ ಕಾರಿಡಾರ್ ಸಂಬಂಧ ಸದ್ಯದಲ್ಲೇ ಪ್ರಧಾನಿ ಭೇಟಿ: ಎಂ.ಬಿ. ಪಾಟೀಲ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಡಿಫೆನ್ಸ್ ಕಾರಿಡಾರ್ ಸಂಬಂಧ ಸದ್ಯದಲ್ಲೇ ಪ್ರಧಾನಿ ಭೇಟಿ: ಎಂ.ಬಿ.

ಬೆಂಗಳೂರು ಗ್ರಾಮಾಂತರ-ಕೋಲಾರ-ಚಿಕ್ಕಬಳ್ಳಾಪುರಕ್ಕೆ ಡಿಫೆನ್ಸ್ ಕಾರಿಡಾರ್ ಮಂಜೂರು ಮಾಡುವ ನಮ್ಮ ಮನವಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ: ಎಂ.ಬಿ. ಪಾಟೀಲ (M.B. Patila)

[ccc_my_favorite_select_button post_id="110949"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ನಗರಸಭೆ ವ್ಯಾಪ್ತಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಶೆಡ್ ‌ನಿರ್ಮಾಣ ಮಾಡಲಾಗಿದೆ Municipal council

[ccc_my_favorite_select_button post_id="110824"]
ದೊಡ್ಡಬಳ್ಳಾಪುರ: ಲಾರಿ ಡಿಕ್ಕಿ ಪ್ರಕರಣ.. ಮೃತ ವೃದ್ಧನ ಗುರುತು ಪತ್ತೆ..!

ದೊಡ್ಡಬಳ್ಳಾಪುರ: ಲಾರಿ ಡಿಕ್ಕಿ ಪ್ರಕರಣ.. ಮೃತ ವೃದ್ಧನ ಗುರುತು ಪತ್ತೆ..!

ರಸ್ತೆ ದಾಟುವ ವೇಳೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ವೃದ್ಧನೋರ್ವ ಸಾವನಪ್ಪಿರುವ ಘಟನೆ (Accident) ಡಿಕ್ರಾಸ್ ಬಳಿ ಸಂಭವಿಸಿದೆ.

[ccc_my_favorite_select_button post_id="110927"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!