ದೊಡ್ಡಬಳ್ಳಾಪುರ, (Doddaballapura): RL ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಪ್ರಾಜೆಕ್ಟ್ ಎಕ್ಸಿಬಿಷನ್ ಅನ್ನು ಆಯೋಜಿಸಲಾಗಿತ್ತು
ಎಕ್ಸಿಬಿಷನಲ್ಲಿ ಸುಮಾರು ಎಂಟು ವಿವಿಧ ರೀತಿಯ ಸಂಶೋಧನೆಯನ್ನು ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಮಾಡಿದ್ದರು.
ಅದರಲ್ಲಿ ಪ್ರಮುಖವಾಗಿ ಸೋಲಾರ್ ವಾಟರ್ ಫಿಲ್ಟರ್, ರೋಬೋಟ್, ಮಲ್ಟಿ ಗ್ರೌಂಡ್ ಟ್ರಾನ್ಸ್ಲೇಟರ್ ಕೃಷಿಕರಿಗಾಗಿ ವಿನ್ಯಾಸ ಪಡಿಸಲಾದಂತಹ ಸಂಶೋಧನೆ ಇದಾಗಿರುತ್ತದೆ.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆರ್ ಎಲ್ ಜಾಲಪ್ಪ ಸಮೂಹ ಸಂಸ್ಥೆಗಳ ಸಿಇಓ ಜೆ ನಾಗೇಂದ್ರ ಸ್ವಾಮಿ ಭಾಗವಹಿಸಿದ್ದರು.
ಇದನ್ನೂ ಓದಿ: Doddaballapura: ಹಳೆಯ ವಿದ್ಯಾರ್ಥಿಗಳಿಂದ ಸಾಸಲು ಪ್ರೌಢಶಾಲೆಯಲ್ಲಿ ಗುರುವಂದನೆ ಕಾರ್ಯಕ್ರಮ: ಶಾಲೆಗೆ ಕೊಡುಗೆ
ಆರ್ ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಪಿ.ವಿಜಯ ಕಾರ್ತಿಕ್, ಉಪ ಪ್ರಾಂಶುಪಾಲರಾ ಡಾ.ಶಿವಪ್ರಸಾದ್, ಡೈರೆಕ್ಟರ್ ಕ್ವಾಲಿಟಿ ಅಕಾಡೆಮಿಕ್ಸ್ ಡಾ.ಶ್ರೀನಿವಾಸ ರೆಡ್ಡಿ, ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಸುನಿಲ್ ಕುಮಾರ್ ಕೆ ಸೇರಿದಂತೆ ಎಲ್ಲಾ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಉಪಸ್ಥಿತಿ ಇದ್ದರು.