Astrology: Likely to be a memorable day

Astrology: ಜ.15 ದಿನ ಭವಿಷ್ಯ: ಈ ರಾಶಿಯವರು ಮಾಟ ಮಂತ್ರ ಪ್ರಯೋಗದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ – ಎನ್ಎಸ್ ಶರ್ಮ

ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಕೃಷ್ಣ ಬಿದಿಗೆ ಜ.15 2025 ಬುಧವಾರ: ವಿಶೇಷವಾಗಿ ಮಹಾ ವಿಷ್ಣು ವಿನ ದೇವಸ್ಥಾನದಲ್ಲಿ ಅರ್ಚನೆ ಪೂಜೆ ಮಾಡಿಸುವುದರಿಂದ ದಿನವೂ ಶುಭವಾಗುತ್ತದೆ.. Astrology

ಮೇಷ ರಾಶಿ: ಜೀವನದಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡಿ ಮುಂದೆ ಬಂದಿದ್ದೀರಾ. ಆದರೆ ಈಗ ಸುಖ ಸಂತೋಷ ನೆಮ್ಮದಿ ಸಿಗಲು ಪ್ರಾರಂಭವಾಗುತ್ತಿದೆ. ಎಲ್ಲವೂ ಸಹ ಅನುಕೂಲವಾಗುತ್ತದೆ ಚಿಂತ ಬೇಡ. (ಪರಿಹಾರಕ್ಕಾಗಿ ಆಂಜನೇಯನ ದೇವಸ್ಥಾನದಲ್ಲಿ ಪೂಜೆ ಮಾಡಿಸಿ)

ವೃಷಭ ರಾಶಿ: ವಂಚನೆ ಮತ್ತು ಸಣ್ಣಪುಟ್ಟ ಮೋಸ ಮಾಡುವವರಿಂದ ದೂರವಿರಿ, ಇದರಿಂದ ತೊಂದರೆ ಸಾಕಷ್ಟಾಗುತ್ತದೆ.. ಎಚ್ಚರಿಕೆ ಬಹಳ ಮುಖ್ಯ, ಅನುಮಾನದಲ್ಲಿ ವ್ಯವಹರಿಸಬೇಡಿ. (ಪರಿಹಾರಕ್ಕಾಗಿ ಲಕ್ಷ್ಮೀನಾರಾಯಣರ ಆರಾಧನೆ ಮಾಡಿ )

ಮಿಥುನ ರಾಶಿ: ಭಯ ಬೀಳು ಅಗತ್ಯವಿಲ್ಲ. ನಿಮ್ಮ ಕೆಲಸಗಳನ್ನು ಬಲಿಷ್ಠವಾಗಿ ಮಾಡಿದ್ದೀರಿ ಅದರ ಪ್ರತಿಫಲ ನಿಮಗೆ ಸಿಗುತ್ತದೆ. ಹೆಚ್ಚು ಚಿಂತೆ ಬೇಡ ಸುಖವಾಗುತ್ತದೆ. (ಪರಿಹಾರಕ್ಕಾಗಿ ಶಿವನನ್ನು ಆರಾಧನೆ ಮಾಡಿ)

ಕಟಕ ರಾಶಿ: ಅಧಿಕವಾದ ತಿರುಗಾಟ, ಮನಸ್ಸಿಗೆ ನೆಮ್ಮದಿ ಇಲ್ಲ.. ಆದರೂ ಕಾರ್ಯವನ್ನು ಮಾಡಬೇಕು, ಎಚ್ಚರಿಕೆವಹಿಸುವುದು ಬಹಳ ಮುಖ್ಯ. ಸ್ವಲ್ಪ ನಿಧಾನವಾದರೂ ಶುಭವಾಗುತ್ತದೆ. (ಪರಿಹಾರಕ್ಕಾಗಿ ದಕ್ಷಿಣ ಮೂರ್ತಿ ಸ್ತೋತ್ರವನ್ನು ಪಾರಾಯಣ ಮಾಡಿಕೊಳ್ಳಿ)

ಸಿಂಹ ರಾಶಿ: ಅತಿಯಾದ ಆಯಾಸ. ಯಾಕೋ ನೆಮ್ಮದಿ ಇಲ್ಲ, ಈ ಜೀವನದಲ್ಲಿ ಎಂಬ ನಿಟ್ಟುಸಿರು‌. ಆದರೆ ಒಂದೇ ಬಾರಿ ಶುಭವಾಗುವುದು ಸ್ವಲ್ಪ ಕಠಿಣವಾಗಿದೆ. ಧನಾಗಮದಲ್ಲಿ ಸ್ವಲ್ಪ ಕೊರತೆ ಏರುಪೇರು, ವಿದ್ಯಾಭ್ಯಾಸದಲ್ಲಿ ಸ್ವಲ್ಪ ಕುಂಟಿತ. (ಪರಿಹಾರಕ್ಕಾಗಿ ಶ್ರೀ ಕೃಷ್ಣನ ಸ್ಮರಣೆಯನ್ನು ಮಾಡಿ)

ಕನ್ಯಾ ರಾಶಿ: ಮಾಟ ಮಂತ್ರ ಪ್ರಯೋಗದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.. ಇವುಗಳಿಂದ ನಿಮಗೆ ಏನು ಮಾಡಲು ಸಾಧ್ಯವಾಗುವುದಿಲ್ಲ. ಎಚ್ಚರಿಕೆ ಇರಬೇಕು, ಧೈರ್ಯವನ್ನು ಮಾಡಿ ಇಟ್ಟ ಗುರಿಯನ್ನು ಸಾಧಿಸಿ ಶುಭವಾಗುತ್ತದೆ‌. (ಪರಿಹಾರಕ್ಕಾಗಿ ಸಿದ್ದಲಕ್ಷ್ಮಿ ಸ್ತೋತ್ರವನ್ನು ಪಠಿಸಿ)

ತುಲಾ ರಾಶಿ: ಅವಶ್ಯಕತೆಗೆ ತಕ್ಕಂತೆ ಬದಲಾಗಬಾರದು. ಜೀವನದಲ್ಲಿ ವಿಶೇಷವಾದ ಧ್ಯೇಯ ಉದ್ದೇಶ ಇರಬೇಕು.. ಮಾತಿನಲ್ಲಿ ಹಿಡಿತವಿರಲಿ, ಸಂಕಲ್ಪದಲ್ಲಿ ಮುಂದಿನ ಜೀವನವು ಕಾಣುವಂತೆ ವ್ಯವಸ್ಥೆ ಮಾಡಿ.(ಪರಿಹಾರಕ್ಕಾಗಿ ನರಸಿಂಹ ಗಾಯತ್ರಿಯನ್ನು ಜಪಿಸಿ)

ವೃಶ್ಚಿಕ ರಾಶಿ: ಆರೋಗ್ಯದ ವಿಚಾರದಲ್ಲಿ ಸ್ವಲ್ಪ ತೊಂದರೆ. ಸ್ವಲ್ಪ ಧನದ ಭಾದೆಗಳು, ಮನಸ್ಸಿನಲ್ಲಿ ನೆಮ್ಮದಿ ಇರುವುದಿಲ್ಲ. ದೃಢವಾದ ನಿರ್ಧಾರ ತೆಗೆದುಕೊಳ್ಳಲು ಸ್ವಲ್ಪ ಕಠಿಣ, ಅತಿಯಾದ ಆಸೆಯನ್ನು ಸ್ವಲ್ಪ ಕಮ್ಮಿ ಮಾಡಿಕೊಳ್ಳಿ. (ಪರಿಹಾರಕ್ಕಾಗಿ ದುರ್ಗಾದೇವಿಗೆ ಕುಂಕುಮರ್ಚನೆ ಮಾಡಿಸಿ)

ಧನಸ್ಸು ರಾಶಿ: ಅತಿಯಾದ ಆಲೋಚನೆ.. ದೀರ್ಘವಾದ ಚಿಂತನೆ. ಆದರೆ ಪ್ರಯತ್ನದಲ್ಲಿ ಇರುತ್ತೀರಿ, ಪರ ತೀರ ಕಮ್ಮಿ. ಪ್ರಯತ್ನವೆಲ್ಲವೂ ಬೇರೆ ಬೇರೆ ರೀತಿಯಲ್ಲಿ ಪೋಲಾಗುತ್ತಿರುತ್ತದೆ.. ಗಮನಿಸಿ ಒಂದೇ ನೇರವಾದ ರೀತಿಯಲ್ಲಿ ಗುರಿಯಾಗಿರಿಸಿ ಕಾರ್ಯವನ್ನು ಮಾಡಿ, ಶುಭವಾಗುತ್ತದೆ. ( ಪರಿಹಾರಕ್ಕಾಗಿ ಸೂರ್ಯನಾರಾಯಣನ ಸ್ಮರಣೆ ಪೂಜೆ ಮಾಡಿ)

ಮಕರ ರಾಶಿ: ಸುಮ್ಮನೆ ತಿರುಗಾಟ, ಕೆಲಸ ಕಾರ್ಯಗಳಲ್ಲಿ ತೊಂದರೆ. ಜೀವನದಲ್ಲಿ ಇರುವುದಕ್ಕಿಂತ ಇಲ್ಲದೇ ಇರುವುದರ ಮೇಲೆ ವಿಪರೀತವಾದ ಆಸೆ, ಅತಿಯಾದ ನಂಬಿಕೆ. ಆದರೆ ಎಲ್ಲದಕ್ಕೂ ಸಮಯ ಬರಬೇಕು.. ನಿಧಾನವಾಗಿ ಕಾಯಿರಿ ಅನುಕೂಲವಾಗುತ್ತದೆ. (ಪರಿಹಾರಕ್ಕಾಗಿ ದತ್ತಾತ್ರೇಯರ ಆರಾಧನೆ ಮಾಡಿ)

ಕುಂಭ ರಾಶಿ: ಏನು ಲಾಭವಿಲ್ಲ ಎಂದು ಚಿಂತಿಸಬೇಡಿ ನೀವು ಮಾಡುತ್ತಿರುವ ಕೆಲಸದಲ್ಲಿ ಲಾಭವಿದೆ. ಆದರೆ ಸಮಯ ತೆಗೆದುಕೊಳ್ಳುತ್ತದೆ. ನಿಧಾನವಾಗಿ ಆಲೋಚಿಸಿ ಕಾರ್ಯಗಳನ್ನು ಮಾಡಿ, ಯಶಸ್ವಿ ಆಗುತ್ತೀರಾ.. ವಿದ್ಯೆಯಲ್ಲೂ ಅನುಕೂಲ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು. (ಪರಿಹಾರಕ್ಕಾಗಿ ಮಹೇಶ್ವರನನ್ನು ಆರಾಧನೆ ಮಾಡಿ)

ಮೀನ ರಾಶಿ: ಅನಾವಶ್ಯಕ ಯೋಚನೆ, ನನ್ನ ಹಣೆಯ ಬರಹ ಈಗಾಯಿತಲ್ಲ ಎಂಬ ಚಿಂತೆ, ಮಾನಸಿಕ ತಾಳಮಳ, ವಾಪಸ್ ಆಗುವುದಿಲ್ಲ ಎಂಬ ಚಿಂತೆ, ಧನಾರ್ಜನಿಗೆ ಸ್ವಲ್ಪ ತೊಂದರೆ, ವಿದ್ಯಾವಂತರಿಗೆ ಅನುಕೂಲ, ಸ್ವಲ್ಪ ಅನಾರೋಗ್ಯ. (ಪರಿಹಾರಕ್ಕಾಗಿ ಧನ್ವಂತರಿ ಮೂಲ ಮಂತ್ರ ಜಪ ಮಾಡಿ)

ರಾಹುಕಾಲ: 12-೦೦PM ರಿಂದ 1-3೦PM
ಗುಳಿಕಕಾಲ: 10-30AM ರಿಂದ 12-00PM
ಯಮಗಂಡಕಾಲ: 7-30AMರಿಂದ 9-00AM

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572.

ರಾಜಕೀಯ

ಗ್ಯಾರಂಟಿ ಯೋಜನೆಗಳನ್ನ ಕೊಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಗ್ಯಾರಂಟಿ ಯೋಜನೆಗಳನ್ನ ಕೊಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ಶಾಸಕರೇ ರಾಜ್ಯ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy)

[ccc_my_favorite_select_button post_id="110970"]
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಡಿಫೆನ್ಸ್ ಕಾರಿಡಾರ್ ಸಂಬಂಧ ಸದ್ಯದಲ್ಲೇ ಪ್ರಧಾನಿ ಭೇಟಿ: ಎಂ.ಬಿ. ಪಾಟೀಲ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಡಿಫೆನ್ಸ್ ಕಾರಿಡಾರ್ ಸಂಬಂಧ ಸದ್ಯದಲ್ಲೇ ಪ್ರಧಾನಿ ಭೇಟಿ: ಎಂ.ಬಿ.

ಬೆಂಗಳೂರು ಗ್ರಾಮಾಂತರ-ಕೋಲಾರ-ಚಿಕ್ಕಬಳ್ಳಾಪುರಕ್ಕೆ ಡಿಫೆನ್ಸ್ ಕಾರಿಡಾರ್ ಮಂಜೂರು ಮಾಡುವ ನಮ್ಮ ಮನವಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ: ಎಂ.ಬಿ. ಪಾಟೀಲ (M.B. Patila)

[ccc_my_favorite_select_button post_id="110949"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ನಗರಸಭೆ ವ್ಯಾಪ್ತಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಶೆಡ್ ‌ನಿರ್ಮಾಣ ಮಾಡಲಾಗಿದೆ Municipal council

[ccc_my_favorite_select_button post_id="110824"]
ದೊಡ್ಡಬಳ್ಳಾಪುರ: ಲಾರಿ ಡಿಕ್ಕಿ ಪ್ರಕರಣ.. ಮೃತ ವೃದ್ಧನ ಗುರುತು ಪತ್ತೆ..!

ದೊಡ್ಡಬಳ್ಳಾಪುರ: ಲಾರಿ ಡಿಕ್ಕಿ ಪ್ರಕರಣ.. ಮೃತ ವೃದ್ಧನ ಗುರುತು ಪತ್ತೆ..!

ರಸ್ತೆ ದಾಟುವ ವೇಳೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ವೃದ್ಧನೋರ್ವ ಸಾವನಪ್ಪಿರುವ ಘಟನೆ (Accident) ಡಿಕ್ರಾಸ್ ಬಳಿ ಸಂಭವಿಸಿದೆ.

[ccc_my_favorite_select_button post_id="110927"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!