ದೊಡ್ಡಬಳ್ಳಾಪುರ (Harithalekhani: ರಸ್ತೆ ಅವ್ಯವಸ್ಥೆ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್ (KSRTC) ರಸ್ತೆ ಬದಿಗೆ ಸಾಗಿರುವ ಘಟನೆ ತಾಲೂಕಿನ ಬೋಕಿಪುರದ ಬಳಿ ನಡೆದಿದೆ.
ದೊಡ್ಡಬಳ್ಳಾಪುರ ಹಾದ್ರಿಪುರ ನಡುವಿನ ಸಾರಿಗೆ ಬಸ್ಸು ಇಂದು ಸಂಚರಿಸುವ ವೇಳೆ ತಿರುವಿನಲ್ಲಿ, ಹದಗೆಟ್ಟ ರಸ್ತೆಯಿಂದ ತೀವ್ರವಾದ ಮಳೆಯಿಂದ ಕೆಸರು ಗುಂಡಿಯಂತಾದ ರಸ್ತೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸಾಗಿದೆ.

ಹಾಗೆ ಮುಂದಕ್ಕೆ ಸಾಗಿದ್ದರೆ, ಬಸ್ ಪಲ್ಟಿ ಹೊಡೆದು ಪ್ರಯಾಣಿಕರಿಗೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿ ದೊಡ್ಡ ಪ್ರಮಾದ ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬಳಿಕ ಜೆಸಿಬಿ ಮೂಲಕ ಬಸ್ಸನ್ನು ಎಳೆಸಲಾಯಿತು ಎಂದು ತಿಳಿದು ಬಂದಿದೆ.