ದೇವನಹಳ್ಳಿ (Harithalekhani); ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Airport) ಸಂಭವಿಸಿದ ಸರಣಿ ಅಪಘಾತಗಳು ಆತಂಕಕ್ಕೆ ಕಾರಣವಾಗಿದೆ.
ಇಂಜಿನ್ ರಿಪೇರಿಯಿಂದಾಗಿ ಕೆಟ್ಟು ನಿಂತಿದ್ದ ವಿಮಾನಕ್ಕೆ ಟಿಟಿ ವಾಹನ ಡಿಕ್ಕಿಯಾಗಿರುವ ಘಟನೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಸಂಜೆ ನಡೆದ ಘಟನೆ.
ಡಿಕ್ಕಿಯ ರಬಸಕ್ಕೆ ಟಿಟಿ ವಾಹನದ ಟಾಪ್ ನಜ್ಜುಗುಜ್ಜಾಗಿದೆ. ಟಿಟಿ ವಾಹನದ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಕೂದಲಳತೆ ಅಂತರದಲ್ಲಿ ಏರ್ಪೋಟ್ ನಲ್ಲಿ ಸಂಭವಿಸಬಹುದಾಗಿ ಅನಾಹುತ ತಪ್ಪಿದೆ.
ಏರ್ಪೋಟ್ ಒಳಭಾಗದ ಆಲ್ಪಾ ಪಾರ್ಕಿಂಗ್ ಬೇ 71 ರಲ್ಲಿ ಕಳೆದ ಹಲವು ದಿನಗಳಿಂದ ಇಂಜಿನ ರಿಪೇರಿಯಿಂದ ಕೆಟ್ಟು ನಿಂತಿದ್ದ ಇಂಡಿಗೋ ವಿಮಾನಕ್ಕೆ ಟಿಟಿ ಚಾಲಕನ ಅಜಾಗರೂಕತೆಯಿಂದ ಪ್ಲೈಟ್ ನ ಮುಂಬಾಗಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಏರ್ಪೋಟ್ ಒಳ ಭಾಗದಲ್ಲಿ ವಿಮಾನಗಳಿಗೆ ಸಿಬ್ಬಂದಿಯನ್ನ ಕರೆದುಕೊಂಡು ಹೋಗಿ ಬಿಡ್ತಿದ್ದ ಟಿಟಿ ವಾಹನ ಇದಾಗಿದ್ದು, ಸಿಬ್ಬಂದಿಯನ್ನ ಬಿಟ್ಟು ಬರ್ತಿದ್ದ ವೇಳೆ ನಿಂತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆದಿದೆ.
ನಾಗರೀಕ ವಿಮಾನಯಾನ ಇಲಾಖೆ ಅಧಿಕಾರಿಗಳು ಮತ್ತು ಏರ್ಪೋಟ್ ಸಿಬ್ಬಂದಿ ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ.
ವಿಮಾನಕ್ಕೆ ಟಿಟಿ ಡಿಕ್ಕಿ ಬೆನ್ನಲ್ಲೆ ಕಂಬಕ್ಕೆ ಕಾರು ಡಿಕ್ಕಿಯಾಗಿದೆ. ಇಂದು ಮುಂಜಾನೆ ರನ್ ವೇ ನಲ್ಲಿನ ಕಂಬಕ್ಕೆ ಕಾರು ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರಿನ ಮುಂಬಾಗ ಸಂಪೂರ್ಣ ಜಖಂ ಗೊಂಡಿದೆ.
ರನ್ ವೆ ಡ್ಯೂಟಿಗೆ ಸಿಬ್ಬಂದಿಯನ್ನ ಕರೆದೋಗುತ್ತಿದ್ದ ಕಾರು ಇದಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ
ಕಾರಿನ ಚಾಲಕ ಸೇರಿದಂತೆ ಒಳಗಡೆ ಇದ್ದ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ.
ನೆನ್ನೆ ವಿಮಾನಕ್ಕೆ ಟಿಟಿ ಡಿಕ್ಕಿ ಇಂದು ಮುಂಜಾನೆ ಕಂಬಕ್ಕೆ ಕಾರು ಡಿಕ್ಕಿ ಘಟನೆಗಳಿಂದಾಗಿ ಏರ್ಪೋಟ್ ಸಿಬ್ಬಂದಿಯಲ್ಲು ಆತಂಕ ಹೆಚ್ಚಿದೆ.