ಬೆಂಗಳೂರು: ಪ್ರವಾಸಿಗರ ಮೇಲೆ ನಡೆದ ಪೈಶಾಚಿಕ ಕೃತ್ಯವನ್ನು ಖಂಡಿಸಿರುವ ಆದಿಚುಂಚನಗಿರಿ ಮಠದ ಪೀಠಾಧಿಕಾರಿ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanath Swamiji), ‘ಉಗ್ರರಿಗೆ ಜಾತಿ ಮತ್ತು ಧರ್ಮದ ಬಣ್ಣ ಹಚ್ಚದೇ ಉಗ್ರರನ್ನು ಮಟ್ಟ ಹಾಕಿ’ ಎಂದು ಒತ್ತಾಯಿಸಿದ್ದಾರೆ.
“ಕನ್ನಡಿಗರ ಸಹಿತದ 26 ಜನ ಸಾವು ಮನಸ್ಸಿಗೆ ಆಘಾತ ನೀಡಿದೆ. ಭಗವಂತ ಅವರ ಕುಟುಂಬಕ್ಕೆ ಆ ದುಃಖ ಭರಿಸುವ ಶಕ್ತಿ ನೀಡಲಿ. ಮಠ ಅವರೊಂದಿಗೆ ನಿಲ್ಲುತ್ತದೆ,” ಎಂದು ತಿಳಿಸಿದ್ದಾರೆ.
ಅಶಾಂತಿ ಸ್ಥಳವಾಗಿದ್ದ ಕಾಶ್ಮೀರದಲ್ಲಿ ಪ್ರಧಾನಿ ಮೋದಿಯ ದಿಟ್ಟ ನಿರ್ಧಾರಗಳಿಂದಾಗಿ ಶಾಂತಿ ನೆಲೆಸಿತ್ತು. ಇದನ್ನು ಸಹಿಸದ ಉಗ್ರರು ಮನುಷ್ಯತ್ವ ಮರೆತು ದಾಳಿ ನಡೆಸಿರುವುದನ್ನು ಸಹಿಸಲು ಸಾಧ್ಯವಿಲ್ಲ.
ಪಕ್ಷ ರಾಜಕಾರಣ ಮರೆತು ಒಗ್ಗಟ್ಟಾಗುವ ಸಮಯ ಇದು. ತಪ್ಪುಗಳನ್ನು ಹುಡುಕುವ ಬದಲು ನಾವೆಲ್ಲ ಭಯೋತ್ಪಾದನೆ ಮತ್ತು ಉಗ್ರರ ವಿರುದ್ಧ ಹೋರಾಡಲು ಕೇಂದ್ರ ಸರಕಾರಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.