ಬೆಂಗಳೂರು; ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 2025ರ ಐಪಿಎಲ್ ಪಂದ್ಯದಲ್ಲಿ ಕೊನೆಗೂ ತವರು ನೆಲದಲ್ಲಿ ಉಸಿರು ಗಟ್ಟಿಸಿ, ಅಂತಿಮವಾಗಿ ಗೆದ್ದು ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ.
ಈವರೆಗೆ ತವರು ನೆಲದಿಂದಾಚೆಗೆ ನಡೆದ ಎಲ್ಲ ಪಂದ್ಯಗಳನ್ನು ಗೆದ್ದುಕೊಂಡಿದ್ದ ಆರ್ಸಿಬಿ, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 3 ಪಂದ್ಯಗಳನ್ನು ಸೋತು ನಿರಾಶೆ ಅನುಭವಿಸಿತ್ತು.
ಗುರುವಾರ ರಾಜಸ್ಥಾನ ರಾಯಲ್ಸ್ ವಿರುದ್ದ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ 11 ರನ್ ಗಳ ರೋಚಕ ಗೆಲುವು ಸಾಧಿಸಿದ ಆರ್ಸಿಬಿ ತನ್ನ ತವರು ಮೈದಾನದಲ್ಲಿ ಈ ಸೀಸನ್ ಮೊದಲ ಗೆಲುವು ದಾಖಲಿಸಿದೆ. ಈ ಮೂಲಕ ಆಡಿರುವ ಒಂಬತ್ತು ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 12 ಅಂಕಗಳನ್ನು ಕಲೆ ಹಾಕಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.
ಈ ಕುರಿತಂತೆ ಟ್ವಿಟ್ ಮೂಲಕ ಸಂಭ್ರಮಿಸಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ನಮ್ ಹುಡುಗ್ರು ‘ಚಿನ್ನ’ ಸ್ವಾಮಿ ಎನ್ನುವ ಮೂಲಕ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಮೊದಲ ಗೆಲುವು, ಆಟಗಾರರಿಗೆ ಪ್ರಶಂಸೆಯನ್ನು ಒಂದೇ ವಾಕ್ಯದಲ್ಲಿ ತಿಳಿಸಿದ್ದಾರೆ.
ನಮ್ ಹುಡುಗ್ರು 'ಚಿನ್ನ' ಸ್ವಾಮಿ!❤️
— DK Shivakumar (@DKShivakumar) April 24, 2025
And finally we win at home! Congratulations @RCBTweets for finally getting a win on the home ground. What an intense, nail biting match it was.
Great game boys, this one’s special!#PlayBold #ನಮ್ಮRCB #IPL2025 #RCBvRR pic.twitter.com/4Y76KE7r3r
ಉಳಿದಂತೆ ಗೆಲ್ಲಲು 206 ರನ್ ಗಳ ಕಠಿಣ ಗುರಿ ಪಡೆದ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್ ಗಳು ಮುಗಿದಾಗ 9 ವಿಕೆಟ್ ನಷ್ಟಕ್ಕೆ ಕೇವಲ 194 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ರಾಜಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ 19 ಬಾಲ್ ಗಳಲ್ಲಿ 49 ರನ್ ಸಿಡಿಸಿ ಸ್ಪೋಟಕ ಆರಂಭ ಒದಗಿಸಿದರೂ ಅಂತಿಮ ಮೂರು ಓವರ್ಗಳಲ್ಲಿ ಎಡವಿದ ರಾಜಸ್ಥಾನ ರಾಯಲ್ ಸೋಲೊಪಿಕೊಂಡಿತು.