ದೊಡ್ಡಬಳ್ಳಾಪುರ: ಎಸ್ಎಸ್ಎಲ್ಸಿ (SSLC) ಪರೀಕ್ಷೆ ಮುಗಿಸಿ, ಮುಂದಿನ ವಿದ್ಯಾಭ್ಯಾಸದ ಕುರಿತು ಚಿಂತಿಸುತ್ತಿರುವ ವಿದ್ಯಾರ್ಥಿಗಳಿಗೆ ನೆರವು ನೀಡಲು ಸುಮನ್ ಪಿಯು ಕಾಲೇಜಿನಲ್ಲಿ (Suman pu college) ವಿಚಾರ ಸಂಕೀರ್ಣವನ್ನು (Seminar) ಆಯೋಜಿಸಲಾಗಿದೆ.
ದೊಡ್ಡಬಳ್ಳಾಪುರ ರಸ್ತೆಯಲ್ಲಿನ ಮಾರಸಂದ್ರದ ಬಳಿ ಇರುವ ಸುಮನ್ ಪಿಯು ಕಾಲೇಜಿನಲ್ಲಿ ((Suman pu college) ಇದೇ ಬಾನುವಾರ (ಏಪ್ರಿಲ್.27) ಬೆಳಿಗ್ಗೆ 10 ಗಂಟೆಗೆ ಎಸ್ಎಸ್ಎಲ್ ಸಿ ಪರೀಕ್ಷೆ (SSLC) ಬರೆದು, ಫಲಿತಾಂಶಕ್ಕಾಗಿ ಕಾಯುತ್ತಿರುವ ಗ್ರಾಮಾಂತರ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸ ಮುಂದುವರಿಸಲು ಯಾವ ಕ್ಷೇತ್ರ ಆಯ್ಕೆ ಮಾಡಿಕೊಂಡರೆ ವಿಪುಲ ಅವಕಾಶಗಳಿವೆ ಎಂಬ ಪ್ರೆಶ್ನೆಗಳಿಗೆ ಉತ್ತರಿಸಲು ತಜ್ಞರೊಂದಿಗೆ ವಿಚಾರಸಂಕೀರ್ಣ ನಡೆಸಲಾಗುತ್ತಿದೆ.
ಸುಮನ್ ಪಿಯು ಕಾಲೇಜಿನ ಆಡಳಿತ ಮಂಡಳಿಯವರು ಈ ವಿಚಾರ ಸಂಕೀರ್ಣದಲ್ಲಿ ಹೆಸರಾಂತ ತಜ್ಞರನ್ನು ಕರೆಸುತ್ತಿದ್ದು, ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿ ಎಂದು ಪ್ರಕಟಣೆ ತಿಳಿಸಿದೆ.