ಬೆಂಗಳೂರು: ಕಳೆದ 18 ವರ್ಷಗಳಿಂದ ಐಪಿಎಲ್ ಕಪ್ ಗೆಲ್ಲುವ ತುಡಿತದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಈ ವರ್ಷದ ಸೀಸನ್ 18 ರಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ.
ಪ್ರಸ್ತುತ RCB ತಂಡ ಆಡಿರುವ 11 ಪಂದ್ಯದಲ್ಲಿ 8 ಅನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆರ್ಸಿಬಿಗೆ ಇರುವ ಅಭಿಮಾನಿ ಬಳಗ ಬೇರೆ ಯಾವ ತಂಡಕ್ಕೂ ಇಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ.
ಆರ್ ಸಿಬಿ ಅಭಿಮಾನಿಗಳು ಬಹಳ ನಿಷ್ಟಾವಂತರಾಗಿರುತ್ತಾರೆ, ಇದಕ್ಕೆ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇದೆ. ಆದರೆ ಕೆಲ ಅಭಿಮಾನಿಗಳು ಅತಿರೇಕದಿಂದ ವರ್ತಿಸುತ್ತಿರುವುದು ಬೇಸರಕ್ಕೂ ಕಾರಣವಾಗುತ್ತಿದೆ.
ಭಾನುವಾರ ಸಿಎಸ್ಕೆ ವಿರುದ್ಧ ಗೆಲುವಿನ ಸಂಭ್ರಮದಲ್ಲಿ ಮೊಳಕಾಲ್ಮೂರು ತಾಲೂಕಿನ ಮಾರಮ್ಮನಹಳ್ಳಿ ಗ್ರಾಮದಲ್ಲಿ ಆರ್ಸಿಬಿ ಅಭಿಮಾನಿಗಳು ಮಚ್ಚಿನಿಂದ ಮೇಕೆಯನ್ನು ಕಡಿದು ಕೊಹ್ಲಿ ಪೊಸ್ಟರ್ಗೆ ರಕ್ತಾಭಿಷೇಕ ಮಾಡಿ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದೆಡೆ ಖಾಸಗಿ ಚಾನಲ್ ವರದಿಗಾರನ ಪ್ರಶ್ನೆಗೆ ಆರ್ ಸಿಬಿ ಅಭಿಯಾನಿಯೋರ್ವ ಸವಾಲೆಸೆದಿದ್ದು, ಈ ಬಾರಿ ಟ್ರೋಫಿ ಗೆಲ್ಲದಿದ್ದರೆ ತಾನು ನನ್ನ ಪತ್ನಿಗೆ ವಿಚ್ಛೇದನ ನೀಡುತ್ತೇನೆ ಎಂದು ಹೇಳುವ ಮೂಲಕ ಪಕ್ಕದಲ್ಲಿಯೇ ಇದ್ದ ಪತ್ನಿಗೆ ಶಾಕ್ ನೀಡಿದ್ದಾನೆ.
ಪತಿ ಆರ್ ಸಿಬಿ ಗೆಲ್ಲದಿದ್ದರೆ ವಿಚ್ಚೇದನ ನೀಡುವುದಾಗಿ ಓಪನ್ ಚಾಲೆಂಜ್ ಹಾಕುತ್ತಿದ್ದರು ಕೂಡ ಪತ್ನಿ ಏನು ಮಾತನಾಡದೆ ಆತಂಕದಿಂದ ನೋಡುತ್ತಾ ನಿಂತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.