ಬೆಂಗಳೂರು: ಪಕ್ಕದ ಮನೆಯವರೊಂದಿಗಿನ ಜಗಳ ಬಾಲಕನ ಕೊಲೆಗೆ (Murder) ಕಾರಣವಾಗಿರುವ ಆಘಾತಕಾರಿ ಘಟನೆ ರಾಯಸಂದ್ರದಲ್ಲಿ ನಡೆದಿದೆ.
ಬೆಂಗಳೂರು ಹೊರವಲಯದ ರಾಯಸಂದ್ರದ ನಿವಾಸಿಯಾದ 8 ವರ್ಷದ ಬಾಲಕ ರಮಾನಂದ ಕೊಲೆಯಾದ ದುರ್ದೈವಿ.
ಪಕ್ಕದ ಮನೆಯವರೊಂದಿಗೆ ಬಾಲಕನ ಕುಟುಂಬ ಪದೇ ಪದೇ ಜಗಳವಾಡುತ್ತಿದ್ದರಂತೆ, ಇದನ್ನೇ ಮನಸ್ಸಿನಲ್ಲಿಟ್ಟುಕೊಂಡ ನೆರೆಮನೆಯ ನಿವಾಸಿ ಬಾಲಕನನ್ನು ಅಪಹರಿಸಿ, ಕೊಲೆಗೈದಿದ್ದಾನೆ ಎಂಬ ಆರೋಪ ವರದಿಯಾಗಿದೆ.
ಬುಧವಾರ ರಾತ್ರಿ ಬೆಂಗಳೂರಿನ ರಾಯಸಂದ್ರ ಕೆರೆ ಬಳಿ ಬಾಲಕನ ಮೃತ ದೇಹ ಪತ್ತೆಯಾಗಿದ್ದು, ಈ ಕುರಿತು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ನೆರೆಮನೆಯ ಮತ್ತೂರು ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆತ ಸತ್ಯ ಬಾಯಿಬಿಟ್ಟಿದ್ದಾನೆ.
ಬಾಲಕನನ್ನು ಅಪಹರಿಸಿದ ಮತ್ತೂರು, ಆತನನ್ನು ಕೊಂದು ಚೀಲದಲ್ಲಿ ತುಂಬಿ ಕೆರೆಯ ಬಳಿ ಬಿಸಾಡಿದ್ದ ಎಂದು ಆರೋಪಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ ಎಂದು ವರದಿಯಾಗಿದೆ.