ದೊಡ್ಡಬಳ್ಳಾಪುರ: ವೀರಬ್ರಹ್ಮೇಂದ್ರಸ್ವಾಮಿ ಸೇವಾ ಟ್ರಸ್ಟ್ (Veerabrahmendraswamy Seva Trust) ವತಿಯಿಂದ ಮದ್ವಿರಾಟ್ ಪೋತಲೂರಿ ವೀರಬ್ರಹ್ಮೇಂದ್ರ ಸ್ವಾಮಿಗಳ (Veera Brahmanendra Swamy) 15ನೇ ಆರಾಧನಾ ಮಹೋತ್ಸವ ಕಾರ್ಯಕ್ರಮ ನಗರದ ಕನ್ನಡ ಜಾಗೃತ ಭವನದಲ್ಲಿ ಶ್ರದ್ಧಾ ಭಕ್ತಿಗಳಿಂದ ನೆರವೇರಿತು.
ವಿಶೇಷವಾಗಿ ಅಲಂಕರಿಸಿದ್ದ ವೀರಬ್ರಹ್ಮೇಂದ್ರಸ್ವಾಮಿ ಅವರ ಭಾವಚಿತ್ರಕ್ಕೆ ವಿಶ್ವಕರ್ಮ ಸಮುದಾಯದವರಿಂದ ಪೂಜೆ ಸಲ್ಲಿಸಿ, ಪ್ರಸಾದ ವಿನಿಯೋಗ ಮಾಡಲಾಯಿತು. ವಿವಿಧ ಕಲಾವಿದರಿಂದ ವೀರಬ್ರಹ್ಮೇಂದ್ರಸ್ವಾಮಿಗಳ ಗೀತೆಗಳ ಗಾಯನ ನಡೆಯಿತು.
ವೀರಬ್ರಹ್ಮೇಂದ್ರಸ್ವಾಮಿ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಮಾತನಾಡಿ, ವೀರಬ್ರಹ್ಮೇಂದ್ರಸ್ವಾಮಿ ಅವರ ಆರಾಧನೆಯ ಮೂಲಕ ಅವರ ತತ್ವಗಳನ್ನು ತಿಳಿಸಲು ಟ್ರಸ್ಟ್ ವತಿಯಿಂದ 15 ವರ್ಷಗಳಿಂದ ಆರಾಧನಾ ಮಹೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಜ್ಞಾನದ ಕೊರತೆಯಿಂದ ವೈಜ್ಞಾನಿಕ ಸತ್ಯಗಳಿಂದ ದೂರ ಉಳಿದಿದ್ದೇವೆ ಎಂದರು.

ಇದೇ ವೇಳೆ ವಿಶ್ವಕರ್ಮ ಸಮುದಾಯದ ಗಣ್ಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು ಮಾತನಾಡಿ, ಕರ್ನಾಟಕ ರಾಜ್ಯ ವಿಶ್ವಕರ್ಮ ನಿಗಮದ ಅಧ್ಯಕ್ಷರು, ಪಿ.ಸುಜ್ಞಾನ ಮೂರ್ತಿ, ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಈಶ್ವರಾಚಾರ್, ಉಮೇಶ್. ಬಿ, ಬಾಬು ಪತ್ತಾರ್, ಮಹಿಳಾ ರಾಜ್ಯಾಧ್ಯಕ್ಷರಾದ ಮತಿ ಶೋಭಾ, ರಾಜ್ಯ ಉಪಾಧ್ಯಕ್ಷ ರವಿಶಂಕರ್, ಶರತ್ ಚಂದ್ರ, ಲಕ್ಷ್ಮಣ್, ಚಂದ್ರಶೇಖರ್, ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ರಾಜ್ಯಾಧ್ಯಕ್ಷ ಎಚ್.ಎಸ್.ನಾಗೇಶ್ ಹಾಗೂ ಟ್ರಸ್ಟಿನ ಗೌರವ ಅಧ್ಯಕ್ಷ ಬೋಜಾಚಾರ್, ಅಧ್ಯಕ್ಷ ವೆಂಕಟಾಚಲಪತಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಕುಮಾರ್.

ಪರಮಶಿವಮೂರ್ತಿ, ಯಶೋಧ್ ಕುಮಾರ್, ವೇಣುಗೋಪಾಲಾಚಾರ್, ಮೋಹನಾಚಾರ್, ಜಗದೀಶಚಾರ್, ಮಂಜುನಾಥ್, ಮನೋಹರ್, ವೆಂಕಟೇಶ್ ಮೂರ್ತಿ, ನಾರಾಯಣಚಾರ್, ರಮೇಶಚಾರ್, ಮಂಜುನಾಥ್, ಮೋಹನ್, ರಾಘವೇಂದ್ರಚಾರ್, ಪುಟ್ಟಶಾಮಾಚಾರ್, ಸಿದ್ದರಾಜು, ನವೀನ್ ಚಂದ್ರ, ಬ್ರಹ್ಮಚಾರ್, ಸೋಮಶೇಖರಚಾರ್, ಹರೀಶ್, ನವೀನ್ ಮತ್ತು ಶಂಕರಾಚಾರ್ ಹಾಗೂ ವಿಶ್ವಕರ್ಮ ಸಮುದಾಯದವರು ಭಾಗವಹಿಸಿದ್ದರು

