ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಕೃಷ್ಣ ಪಕ್ಷದ ತ್ರಯೋದಶಿ ಜನವರಿ.27.2025 ವಿಶೇಷವಾಗಿ ಬೆಳಗ್ಗೆ ಸೂರ್ಯನನ್ನು ಸ್ಮರಣೆ ಮಾಡಿ ಕೆಳಗಿನ ಶ್ಲೋಕವನ್ನು ನಿಧಾನವಾಗಿ ಅರ್ಥ ಸಹಿತ ಅಭ್ಯಾಸ ಮಾಡಿ ಅತ್ಯಂತ ಶುಭವಾಗುತ್ತದೆ.. Astrology
ಶುಭಾಶುಭಪ್ರವಿಚಯಕರ್ಮಸಾಕ್ಷಿಣೇ
ಸಹಸ್ರ ಸಂದೀಧಿತಯೇ ನಮೋ ನಮಃ |
ಪ್ರಶಸ್ತಸಪ್ತಾಶ್ವಯುತಾಂತಪಕ್ಷಿಣೇ
ಧ್ರುವೈಕರಶ್ಮಿಗ್ರಥಿತಾಯ ತೇ ನಮಃ ॥
(ಸಾಂಬಪುರಾಣ)
ದೇವದೇವನಾದ ಸೂರ್ಯನೆ, ಶುಭಾಶುಭವಿಭಾಗರೂಪವಾದ ಪುಣ್ಯಪಾಪ ಕರ್ಮಗಳಿಗೆ ಸಾಕ್ಷಿಯಾಗಿರುವವನೂ, ಸಹಸ್ರಕಿರಣಗಳುಳ್ಳವನೂ ಆದ ನಿನಗೆ ನಮಸ್ಕಾರ.
ಶ್ರೇಷ್ಠವಾದ ಏಳು ಕುದುರೆಗಳಿಂದ ಕೂಡಿದವನೂ, ಎಲ್ಲಾ ಪ್ರಾಣಿಗಳ ಅಂತಃಕರಣದಲ್ಲಿಯೂ ಪಕ್ಷಿಯಂತೆ ಅಡಗಿರುವವನೂ ಮತ್ತೂ ಶಾಶ್ವತವಾದ ಕಿರಣಗಳಿಂದ ಕೂಡಿದವನೂ ಆದ ನಿನಗೆ ನಮಸ್ಕಾರ.
ಸಂಜೆ 5:00ಯಿಂದ 8 ಗಂಟೆಯವರೆಗೆ ಪ್ರದೋಷಕಾಲದಲ್ಲಿ ಶಿವನ ಪೂಜೆಯನ್ನು ಮಾಡಿದರೆ ಸಕಲ ಸೌಭಾಗ್ಯಗಳು ಉಂಟಾಗುತ್ತವೆ.
ಮೇಷ ರಾಶಿ: ಅಸಾಮಾನ್ಯ ಬೆಳವಣಿಗೆ, ಎಲ್ಲರಿಗೂ ಸಹ ಭಗವಂತನ ಅನುಗ್ರಹ, ಜೊತೆಗೆ ಧನಾಗಮನ ವಿದ್ಯೆಯಲ್ಲಿ ಅನುಕೂಲ, ಅಧಿಕ ಸಾರ್ಥಕದ ಖುಷಿ, ಚಿಂತೆಯಿಂದ ದೂರ, ಶುಭ ಫಲಗಳು ಉಂಟಾಗುತ್ತವೆ. (ಪರಿಹಾರಕ್ಕಾಗಿ ಕೃಷ್ಣನ ನಾಮಸ್ಮರಣೆಯನ್ನು ಮಾಡಿ)
ವೃಷಭ ರಾಶಿ: ಚಿಂತೆಯಿಂದ ಸ್ವಲ್ಪ ನಿವೃತ್ತಿ, ಮನಸ್ಸಿನ ಕಿರಿಕಿರಿ, ದೂರಾಸೆಯಿಂದ ಸಮಸ್ಯೆ, ಅಧಿಕ ತಿರುಗಾಟ, ವಾಹನ ಚಾಲನೆಯ ವೇಳೆ ನಿಧಾನವಾಗಿ ಚಲಿಸಿ, ಚಿಕ್ಕಪುಟ್ಟ ಆಸೆಗಳಿಗೆ ಜಾಸ್ತಿ ಕಿವಿಗೊಡಬೇಡಿ. (ಪರಿಹಾರಕ್ಕಾಗಿ ಶಿವನ ನಾಮಸ್ಮರಣೆಯನ್ನು ಮಾಡಿ)
ಮಿಥುನ ರಾಶಿ: ಹಣದ ಅಪವ್ಯಯ ಮಾಡಬೇಡಿ, ಚಿಂತೆಯಿಂದ ಸ್ವಲ್ಪ ವಿರಮಿಸಿ ಹುಷಾರಾಗಿ, ಧನವನ್ನು ಉಳಿಸಿಕೊಳ್ಳಿ, ಭಗವಂತನ ಮೇಲೆ ಕೂರಿಸಿಕೊಳ್ಳುವುದು ಕಮ್ಮಿ ಮಾಡಿ, ಎಲ್ಲವೂ ನಮ್ಮ ಕೆಲಸ ಕಾರ್ಯಗಳನ್ನು ಅವಲಂಬಿಸಿ, ಅನಿಷ್ಟಗಳು ಬರುತ್ತವೆ ಎಂಬುದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳಿ. (ಪರಿಹಾರಕ್ಕಾಗಿ ನರಸಿಂಹನನ್ನು ಪ್ರಾರ್ಥನೆ ಮಾಡಿ)
ಕಟಕ ರಾಶಿ: ಒಳ್ಳೆಯದಾಗಿದೆ ಚಿಂತೆ ಬೇಡ, ಈಗ ಆಗಿರುವುದು ನಿಮ್ಮ ಮುಂದಿನ ಸುಖಕ್ಕಾಗಿ. ಆದರೆ ಸ್ವಲ್ಪ ಮನಸ್ಸಿಗೆ ದ್ವಂದ್ವ ಅವಸ್ಥೆ ನಿಧಾನವಾಗಿ ಹೊರ ಬರಬಹುದು, ಸಮಸ್ಯೆ ಇಲ್ಲ. ವಿದ್ಯಾರ್ಥಿಗಳಿಗೆ ಅನುಕೂಲ, ಆಯಸ್ಸು ವೃದ್ಧಿ ಭಯ ನಿವಾರಣೆ. (ಪರಿಹಾರಕ್ಕಾಗಿ ಸೂರ್ಯನಾರಾಯಣನನ್ನು ಸ್ಮರಣೆ ಮಾಡಿ)
ಸಿಂಹ ರಾಶಿ: ಇನ್ನೊಬ್ಬರ ಮಾತುಗಳನ್ನು ಕೇಳುವಾಗ ಎಚ್ಚರಿಕೆ ಇರಲಿ. ನಿಮ್ಮ ಸ್ವಂತಿಕೆ ಸ್ವಲ್ಪ ಕೆಲಸ ಮಾಡಿ, ಬುದ್ಧಿಯನ್ನು ಚುರುಕು ಮಾಡಿಕೊಳ್ಳಬೇಕು. ಅತಿಯಾಗಿ ವಿಶ್ವಾಸ ಇಡಬೇಡಿ ಇದರಿಂದ ತೊಂದರೆಯಾಗುತ್ತದೆ. ಜೀವನವನ್ನು ಸಾರ್ಥಕ ಮಾಡಿಕೊಳ್ಳಿ. (ಪರಿಹಾರಕ್ಕಾಗಿ ಮಹಾಗಣಪತಿಯ ದ್ವಾದಶ ನಾಮ ಸ್ತೋತ್ರವನ್ನು ಪಾರಾಯಣ ಮಾಡಿ)
ಕನ್ಯಾ ರಾಶಿ: ಜಾಗರೂಕತೆಯಿಂದ ಧೈರ್ಯವಾಗಿ ಕೆಲಸಗಳನ್ನು ಶುರು ಮಾಡಿ, ಹಿರಿಯರ ಮಾತನ್ನು ಅನುಸರಿಸಿ. ಎಲ್ಲಾ ವಿಷಯದಲ್ಲೂ ತನ್ನದೇ ಆದಂತ ಜಾಗರೂಕತೆ ಬೇಕಾಗುತ್ತದೆ.. ಎಚ್ಚರಿಕೆ ಮತ್ತು ತೀವ್ರವಾದ ಅನುಸರಣೆ ಮಾಡಬೇಕು. (ಪರಿಹಾರಕ್ಕಾಗಿ ವಿಷ್ಣು ಸಹಸ್ರನಾಮವನ್ನು ಕೇಳಿಸಿಕೊಳ್ಳಿ)
ತುಲಾ ರಾಶಿ: ಸ್ವಲ್ಪಮಟ್ಟಿನ ಅನುಕೂಲ, ಗುರುಗಳ ಸಲಹೆ, ಬಟ್ಟೆಗಳ ಮೇಲೆ ಸ್ವಲ್ಪ ನಿರಾಸಕ್ತಿ.. ಹೊಸ ರೀತಿಯ ವ್ಯವಸ್ಥೆ, ಎಲ್ಲದರಲ್ಲೂ ಅನುಕೂಲ, ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯ ಲಾಭ ಪ್ರಾಪ್ತಿಯಾಗುತ್ತದೆ. (ಪರಿಹಾರಕ್ಕಾಗಿ ಮಹಾಲಕ್ಷ್ಮಿ ಅಷ್ಟಕವನ್ನು 18 ಬಾರಿ ಓದಿ)
ವೃಶ್ಚಿಕ ರಾಶಿ: ಅತಿಯಾಗಿ ಯೋಚಿಸಬೇಡಿ, ಅತ್ಯಂತ ಶುಭವಾಗುತ್ತದೆ. ಚಿಂತೆಯಿಂದ ದೂರವಿರಿ ಚಿಂತೆ ಆರೋಗ್ಯವನ್ನು ಕೆಡಿಸುತ್ತದೆ.. ಅನಾರೋಗ್ಯ ಬಾರದೆ ಸ್ವಲ್ಪ ತೊಂದರೆ ಎಚ್ಚರಿಕೆಯಿಂದ ಆರೋಗ್ಯವಾಗಿರಲು ಪ್ರಯತ್ನ ಮಾಡಿ. (ಪರಿಹಾರಕ್ಕಾಗಿ ಧನ್ವಂತ್ರಿ ಮಹಾ ವಿಷ್ಣುವಿನ ಸ್ಮರಣೆ ಮಾಡಿ)
ಧನಸ್ಸು ರಾಶಿ: ತಿರುಗಾಟದಿಂದ ಮನಸ್ಸು ಸ್ವಲ್ಪ ಬಳದಿದೆ.. ಯಾವ ಕಾರ್ಯದಲ್ಲೂ ನಿರಾಸಕ್ತಿ ಇರದೇ ಇರುವವರು ಈ ದಿನ ನಿರಾಶಕ್ತಿಯಾಗಿದೆ. ಅತಿಯಾಗಿ ಯೋಚನೆ ಮಾಡುವ ಅಗತ್ಯವಿಲ್ಲ, ಒಳ್ಳೆಯದಾಗುತ್ತದೆ ವಿದ್ಯಾರ್ಥಿಗಳಿಗೆ ಶುಭ. (ಪರಿಹಾರಕ್ಕಾಗಿ ಕೊಲ್ಹಾಪುರ ಮಹಾಲಕ್ಷ್ಮಿ ಅಮ್ಮನವರ ಪ್ರಾರ್ಥನೆ ಮಾಡಿ)
ಮಕರ ರಾಶಿ: ಅತಿಯಾಗಿ ಖುಷಿ ಆದರೆ ಸ್ವಲ್ಪ ಮನೆಯಲ್ಲಿ ವಿರಸ.. ಬದುಕು ಸ್ವಲ್ಪ ಕಷ್ಟ ನಷ್ಟಗಳೊಂದಿಗೆ ಪ್ರಾರಂಭ, ಎಚ್ಚರಿಕೆಯಿಂದ ಮುನ್ನುಗ್ಗಿ ಶುಭವಾಗುತ್ತದೆ. ಬೇರೆಯವರಿಗೆ ಖುಷಿ ಪಡಿಸುವ ನಿಮ್ಮ ಪ್ರಯತ್ನ ಫಲ ಕೊಡುವುದಿಲ್ಲ ಎಲ್ಲರಿಗೂ ಈ ದಿನ ಶುಭ. (ಪರಿಹಾರಕ್ಕಾಗಿ ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ)
ಕುಂಭ ರಾಶಿ: ಸಾಮಾನ್ಯ ಬೆಳವಣಿಗೆ ಇದ್ದಕ್ಕಿದ್ದಂತೆಯೇ ಶುಭ, ಧನಾಗಮನ, ಆನಂದ, ಉತ್ಸಾಹ, ಎಲ್ಲ ಕಾರ್ಯದಲ್ಲೂ ಇದ್ದಕ್ಕಿದ್ದಂತೆ ಶುಭವಾಗುತ್ತದೆ. ಅನಿಷ್ಟಗಳು ದೂರವಾಗುತ್ತದೆ. (ಪರಿಹಾರಕ್ಕಾಗಿ ಅಮ್ಮನವರನ್ನು ಕೆಂಪು ಹೂಗಳಿಂದ ಪೂಜೆ ಮಾಡಿ)
ಮೀನ ರಾಶಿ: ಯೋಚಿಸಿದ ನಂತರ ನಿಮಗೆ ಇನ್ನೊಬ್ಬರ ಬಗ್ಗೆ ತಿಳಿಯಲು ಪ್ರಾರಂಭವಾಗುತ್ತದೆ.. ಬಂಧು ಮಿತ್ರರಿಂದ ಸ್ವಲ್ಪ ದೂರವಾಗುತ್ತೀರಾ, ಎಚ್ಚರಿಕೆಯಿಂದ ಗಮನಿಸಿ, ಗಲಾಟೆ, ಶತ್ರುಗಳ ಭಯ, ಅಧಿಕ. (ಹನುಮಂತನ ಸ್ಮರಣೆಯನ್ನು ಮಾಡಿ ಪರಿಹಾರವಾಗುತ್ತದೆ)
ರಾಹುಕಾಲ: 7-30AM ರಿಂದ 9-00AM
ಗುಳಿಕಕಾಲ: 6-00AM ರಿಂದ 7-30 AM
ಯಮಗಂಡಕಾಲ: 1-30PMರಿಂದ 3-00PM
ಹೆಚ್ಚಿನ ಮಾಹಿತಿಗಾಗಿ: ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ಎಸ್ ಶರ್ಮ,
ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ಮೊ-9945170572